<p>ಕೇರಳದಲ್ಲೂ ಒಂದು ಉದಕ ಮಂಡಲ ಅರ್ಥಾತ್ ಊಟಿ ಇದೆ, ಗೊತ್ತಾ?</p>.<p>ಹೌದು. ಅದು ಊಟಿ ಥರವೇ. ಆದರೆ, ಊಟಿ ಅಲ್ಲ. ಅದರ ಹೆಸರು ರಾಣಿಪುರಮ್. ಸರ್ವ ಋತುಗಳಲ್ಲೂ ತಂಪಾಗಿರುವ, ಸದಾ ಪ್ರವಾಸಿಗರನ್ನು ಸೆಳೆಯುವ ಈ ತಾಣವನ್ನು ‘ಕೇರಳದ ಊಟಿ’ ಎನ್ನುತ್ತಾರೆ.</p>.<p>ಇದು ಕೇರಳ-ಕರ್ನಾಟಕ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿರುವ ಗಿರಿಧಾಮ. ಕಾಸರಗೋಡಿನಿಂದ 80 ಕಿ.ಮೀ ದೂರವಿದೆ. ಕೊಡಗು – ಭಾಗಮಂಡಲದ ಮೂಲಕವೂ ಇಲ್ಲಿಗೆ ತಲುಪಬಹುದು. ಹೀಗಾಗಿ ಕೊಡಗು ಅಥವಾ ಕಾಸರಗೋಡಿಗೆ ಹೋದವರು, ಒಂದು ದಿನದ ಚಾರಣಕ್ಕಾಗಿ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು.</p>.<p>ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ರಾಣಿಪುರಮ್ ಹಿಲ್ಸ್ಟೇಷನ್ ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿದೆ. ವರ್ಷದ ಎಲ್ಲ ಋತುಗಳಲ್ಲೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.</p>.<p>ಈ ಸ್ಥಳಕ್ಕೆ 1930ರವರೆಗೆ ‘ಮಾಡತ್ತುಮಲ’ ಎಂಬ ಹೆಸರಿತ್ತು. ಬ್ರಿಟಿಷರ ಕಾಲದಲ್ಲಿ ರಾಣಿಯ ಗೌರವಾರ್ಥವಾಗಿ ‘ರಾಣಿಪುರಮ್’ ಎಂಬ ಹೆಸರು ಅಸ್ತಿತ್ವಕ್ಕೆ ಬಂತು. ಗಮನಿಸಬೇಕಾದ ಅಂಶವೆಂದರೆ ಈ ಊರಿನ ಪಕ್ಕದಲ್ಲಿ ‘ರಾಜಾಪುರಮ್’ ಎಂಬ ಹೆಸರಿನ ಊರು ಇದೆ.</p>.<p>ವರ್ಷದ ಬಹುತೇಕ ಕಾಲದಲ್ಲಿ ತಂಪಾದ ಹವೆಯಿರುವ ಬೆಟ್ಟ ಪ್ರದೇಶಗಳನ್ನು ಬ್ರಿಟಿಷರು ಇಷ್ಟಪಡುತ್ತಿದ್ದರು. ಕೇರಳ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಈ ಗಿರಿಧಾಮವನ್ನು ಸೇರಿಸಿಕೊಂಡಿದ್ದರಿಂದ, ಈ ಸ್ಥಳ ಮತ್ತಷ್ಟು ಪ್ರಾಮುಖ್ಯ ಪಡೆದುಕೊಂಡಿತು.</p>.<p><strong>ಇಲ್ಲಿ ಏನೇನಿದೆ?</strong></p>.<p>ರಾಣಿಪುರಮ್ನಲ್ಲಿ ನಿತ್ಯಹರಿದ್ವರ್ಣ ಕಾಡುಗಳಿವೆ. ಶೋಲಾ ಮರಗಳಿವೆ. ಜಿಂಕೆ, ಆನೆಗಳು, ವಿವಿಧ ರೀತಿಯ ಮಂಗಗಳಿವೆ. ಪಕ್ಷಿ ಪ್ರಭೇದಗಳು ಕಾಣಸಿಗುತ್ತವೆ. ವಿವಿಧ ಪ್ರಭೇದಗಳ ಚಿಟ್ಟೆ-ಪಾತರಗಿತ್ತಿಗಳಿವೆ. ಕರ್ನಾಟಕದ ತಲಕಾವೇರಿ ಅಭಯಾರಣ್ಯದೊಂದಿಗೆ ರಾಣಿಪುರಮ್ ತನ್ನ ಗಡಿಯನ್ನು ವಿಲೀನಗೊಳಿಸುತ್ತದೆ.</p>.<p><strong>ಚಾರಣದ ಮಜಾ</strong></p>.<p>ಸುಮಾರು 3-4 ಕಿ.ಮೀ ಕಡಿದಾದ ದಾರಿಯಲ್ಲಿ ಚಾರಣ ಮಾಡುತ್ತಾ ಬೆಟ್ಟ ಏರಬೇಕು. ವಿವಿಧ ಜಾತಿಯ ಮರಗಳ ನಡುವೆ ಚಾರಣ ಮಾಡುವ ಖುಷಿಯೇ ಅನನ್ಯ. ಬೆಟ್ಟದ ಮೇಲಕ್ಕೆ ತಲುಪುತ್ತಿದ್ದಂತೆ ಹುಲ್ಲುಗಳ ರಾಶಿ ಕಾಣಸಿಗುತ್ತದೆ. ನಡೆಯುವಾಗ ಸದ್ದಿಲ್ಲದೇ ಬಟ್ಟೆಯೊಳಕ್ಕೆ ಸೇರಿಕೊಂಡು ರಕ್ತ ಹೀರುವ ಜಿಗಣೆಗಳ ಬಗ್ಗೆ ಎಚ್ಚರವಹಿಸಬೇಕು.</p>.<p>ಅರಣ್ಯ ಹಾಗೂ ಆನೆಗಳ ವೀಕ್ಷಣೆಗೆ ಜೀಪ್ ಸವಾರಿ ಮಾಡಬಹುದು. ಇದಕ್ಕಾಗಿ ಸಮೀಪದಲ್ಲಿ ಜೀಪ್ಗಳು ಬಾಡಿಗೆ ಸಿಗುತ್ತವೆ. ದಟ್ಟ ಅರಣ್ಯರಾಶಿಯನ್ನು ಹೊಂದಿರುವ ರಾಣಿಪುರಮ್ನಲ್ಲಿ ಮಳೆಯ ಪ್ರಮಾಣವೂ ಅಧಿಕವಾಗಿದೆ. ಚಳಿಗಾಲದಲ್ಲಿ ಮಂಜು ಮುಸುಕಿದ ವಾತಾವರಣ. ಹೀಗಾಗಿ ಮಳೆಗಾಲದಲ್ಲಿ ಈ ತಾಣಕ್ಕೆ ಪ್ರವಾಸ ಹೋಗುವುದು ಸೂಕ್ತವಲ್ಲ.</p>.<p><strong>ಪ್ಲಾಸ್ಟಿಕ್ ನಿಷೇಧ</strong></p>.<p>ಪ್ಲಾಸ್ಟಿಕ್ ವಸ್ತುಗಳನ್ನು ಬೆಟ್ಟದ ಮೇಲೆ ಕೊಂಡೊಯ್ಯುವುದಿದ್ದರೆ ಒಂದಿಷ್ಟು ಹಣವನ್ನು ‘ಸೇಫ್ಟಿ ಡೆಪಾಸಿಟ್’ ಆಗಿ ಕೊಡಬೇಕು. ಬೆಟ್ಟದಿಂದ ವಾಪಸ್ ಬರುವಾಗಲೂ ಅದೇ ವಸ್ತುಗಳನ್ನು ಹಿಡಿದುಕೊಂಡು ಬಂದಿದ್ದರೆ ಮಾತ್ರ ನಿಮ್ಮ ದುಡ್ಡು ವಾಪಸ್. ಇದೊಂದು ರೀತಿಯಲ್ಲಿ ಪ್ಲಾಸ್ಟಿಕ್ ನಿರ್ಬಂಧ ಹೇರುವ ವಿಧಾನ. ಈ ಪ್ಲಾಸ್ಟಿಕ್ ನಿಷೇಧ ಮಾಡಿರುವ ಕಾರಣದಿಂದಲೂ ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಕರ್ಷಣೆಗೊಳಪಡಲು ಕಾರಣವಾಗಿದೆ.</p>.<p>ಕೇರಳ ಸರ್ಕಾರ ಪ್ರವಾಸೋದ್ಯಮ ಇಲಾಖೆ ರಾಣಿಪುರಮ್ ಗಿರಿಧಾಮವನ್ನು ತಕ್ಕಮಟ್ಟಿಗೆ ಅಭಿವೃದ್ಧಿಗೊಳಿಸಿದೆ, ನಿಜ. ಆದರೆ, ಕೆಲವೊಂದು ಅಭಿವೃದ್ಧಿ ಯೋಜನೆಗಳು ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. ಪ್ರವಾಸಿಗರಿಗಾಗಿ ಇಲ್ಲೊಂದು ರೆಸಾರ್ಟ್ ಇದೆ ಎನ್ನುವುದನ್ನು ಹೊರತುಪಡಿಸಿದರೆ ಬೇರೆ ಯಾವ ಸೌಲಭ್ಯವೂ ಇಲ್ಲಿ ಕಾಣುವುದಿಲ್ಲ.</p>.<p>ಪನತ್ತಡಿಯಿಂದ ರಾಣಿಪುರಮ್ಗೆ ಹೋಗುವ ಡಾಂಬರು ರಸ್ತೆ ಏಕಾಏಕಿ ಒಂದುಕಡೆ ನಿಂತುಬಿಡುತ್ತದೆ. ಅಲ್ಲಿ ಯಾವುದೇ ಸೂಚನಾ ಫಲಕಗಳೂ ಇಲ್ಲ. ಅರ್ಧಂಬರ್ಧ ಬೆಳೆದ ಕುರುಚಲು ಲಂಟಾನಾ ಕಾಡುಗಳಲ್ಲಿ ಇಲಿಗಳು, ಹೆಗ್ಗಣಗಳು ಓಡಾಡುತ್ತಿರುತ್ತಿವೆ. ಈ ಭಾಗದಿಂದ ಬೆಟ್ಟವನ್ನು ಪ್ರವೇಶಿಸಿದ ಪ್ರವಾಸಿಗರು ದಾರಿ ತಪ್ಪಿ ಕಾಡಿನಲ್ಲಿ ಎಲ್ಲೆಲ್ಲೋ ಹೋದ ಉದಾಹರಣೆಗಳಿವೆ.</p>.<p>ಇಷ್ಟೆಲ್ಲ ಕೊರತೆಗಳ ನಡುವೆಯೂ ಈ ಹಿಲ್ಸ್ಟೇಷನ್ ಜನರನ್ನು ಆಕರ್ಷಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ತಂಪು ವಾತಾವರಣ. ಬೆಟ್ಟದ ಮೇಲೆ ಕೈಚಾಚಿದರೆ ಮೋಡಗಳು ಕೈಗೆ ಸಿಗುತ್ತವೇನೋ ಅನ್ನಿಸುವಂಥ ಅನುಭವ. ಇಲ್ಲಿನ ಹಸಿರ ಸೌಂದರ್ಯ, ಸ್ವಚ್ಛವಾದ ತಂಪು ಗಾಳಿ ಚಾರಣದ ದಣಿವು ನಿವಾರಿಸುವಂತೆ ಮಾಡುತ್ತದೆ.</p>.<p><strong>ಹೋಗುವುದು ಹೇಗೆ?</strong></p>.<p>ಕಾಸರಗೋಡು ರೈಲ್ವೆ ನಿಲ್ದಾಣದಿಂದ 85 ಕಿ.ಮೀ. ದೂರದಲ್ಲಿದೆ ರಾಣಿಪುರಮ್. ಈ ತಾಣಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಾಞಂಗಾಡ್ (45 ಕಿ.ಮೀ). ಮಂಗಳೂರಿನಿಂದ ಕಾಸರಗೋಡು ಮೂಲಕ ರಾಣಿಪುರಮ್ ತಲುಪಬಹುದು.</p>.<p>ರಾಣಿಪುರಮ್ ಹಿಲ್ಸ್ಟೇಷನ್ ಹೊಸದುರ್ಗ ತಾಲ್ಲೂಕಿನ ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ. ಕಾಞಂಗಾಡಿನಿಂದ ಪಾಣತ್ತೂರು ದಾರಿಯಾಗಿ ಕರಿಕ್ಕೆ, ಭಾಗಮಂಡಲಕ್ಕೆ ಹೋಗುವಾಗ ಪನತ್ತಡಿ ಸಿಗುತ್ತದೆ. ಇಲ್ಲಿಂದ ರಾಣಿಪುರಮ್ಗೆ ರಸ್ತೆಯ ಸೌಕರ್ಯವಿದೆ. ಹೀಗಾಗಿ ಕೊಡಗು ಮೂಲಕವೂ ಈ ತಾಣವನ್ನು ತಲುಪಬಹುದು.</p>.<p>ಮಂಗಳೂರುವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರಾಣಿಪುರಮ್ಗೆ ಬಸ್, ಟ್ಯಾಕ್ಸಿ ಅಥವಾ ರೈಲಿನಲ್ಲಿ ಬರಬಹುದು. ಏರ್ಪೋರ್ಟ್ನಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಕಾಞಂಗಾಡ್ವರೆಗೆ ಬರಬಹುದು. ಅಲ್ಲಿಂದ ಬೇರೆ ಬಸ್ನಲ್ಲಿ ರಾಣಿಪುರಮ್ ತಲುಪಬಹುದು.</p>.<p><strong>ಭೇಟಿ ಸೂಕ್ತ ಸಮಯ</strong></p>.<p>ಮಳೆಗಾಲದಲ್ಲಿ ತುಂಬಾ ಮಳೆ ಇರುತ್ತದೆ. ಹಾಗಾಗಿ ಚಳಿಗಾಲವೇ ಈ ಗಿರಿಧಾಮದ ಭೇಟಿಗೆ ಸೂಕ್ತ ಸಮಯ. ಅಂದರೆ, ಅಕ್ಟೋಬರ್ನಿಂದ ಮಾರ್ಚ್ವರೆಗೆ ಈ ಪ್ರದೇಶದಲ್ಲಿ ಸುತ್ತಾಡಬಹುದು.</p>.<p><strong>ಊಟ–ವಸತಿ</strong></p>.<p>ಊಟ– ಉಪಹಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲೊಂದು ರೆಸಾರ್ಟ್ ಇದೆ. ಆದರೆ ಅದು ಎಲ್ಲ ವರ್ಗದ ಪ್ರವಾಸಿಗರಿಗೆ ಕೈಗೆ ಎಟುಕುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ, ಚಾರಣಿಗರು, ಪ್ರವಾಸಿಗರು ರಾಣಿಪುರಮ್ಗೆ ಹೋಗುವಾಗ ಊಟ–ಉಪಹಾರದ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇರಳದಲ್ಲೂ ಒಂದು ಉದಕ ಮಂಡಲ ಅರ್ಥಾತ್ ಊಟಿ ಇದೆ, ಗೊತ್ತಾ?</p>.<p>ಹೌದು. ಅದು ಊಟಿ ಥರವೇ. ಆದರೆ, ಊಟಿ ಅಲ್ಲ. ಅದರ ಹೆಸರು ರಾಣಿಪುರಮ್. ಸರ್ವ ಋತುಗಳಲ್ಲೂ ತಂಪಾಗಿರುವ, ಸದಾ ಪ್ರವಾಸಿಗರನ್ನು ಸೆಳೆಯುವ ಈ ತಾಣವನ್ನು ‘ಕೇರಳದ ಊಟಿ’ ಎನ್ನುತ್ತಾರೆ.</p>.<p>ಇದು ಕೇರಳ-ಕರ್ನಾಟಕ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿರುವ ಗಿರಿಧಾಮ. ಕಾಸರಗೋಡಿನಿಂದ 80 ಕಿ.ಮೀ ದೂರವಿದೆ. ಕೊಡಗು – ಭಾಗಮಂಡಲದ ಮೂಲಕವೂ ಇಲ್ಲಿಗೆ ತಲುಪಬಹುದು. ಹೀಗಾಗಿ ಕೊಡಗು ಅಥವಾ ಕಾಸರಗೋಡಿಗೆ ಹೋದವರು, ಒಂದು ದಿನದ ಚಾರಣಕ್ಕಾಗಿ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಬಹುದು.</p>.<p>ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ರಾಣಿಪುರಮ್ ಹಿಲ್ಸ್ಟೇಷನ್ ಸಮುದ್ರ ಮಟ್ಟದಿಂದ 750 ಮೀಟರ್ ಎತ್ತರದಲ್ಲಿದೆ. ವರ್ಷದ ಎಲ್ಲ ಋತುಗಳಲ್ಲೂ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.</p>.<p>ಈ ಸ್ಥಳಕ್ಕೆ 1930ರವರೆಗೆ ‘ಮಾಡತ್ತುಮಲ’ ಎಂಬ ಹೆಸರಿತ್ತು. ಬ್ರಿಟಿಷರ ಕಾಲದಲ್ಲಿ ರಾಣಿಯ ಗೌರವಾರ್ಥವಾಗಿ ‘ರಾಣಿಪುರಮ್’ ಎಂಬ ಹೆಸರು ಅಸ್ತಿತ್ವಕ್ಕೆ ಬಂತು. ಗಮನಿಸಬೇಕಾದ ಅಂಶವೆಂದರೆ ಈ ಊರಿನ ಪಕ್ಕದಲ್ಲಿ ‘ರಾಜಾಪುರಮ್’ ಎಂಬ ಹೆಸರಿನ ಊರು ಇದೆ.</p>.<p>ವರ್ಷದ ಬಹುತೇಕ ಕಾಲದಲ್ಲಿ ತಂಪಾದ ಹವೆಯಿರುವ ಬೆಟ್ಟ ಪ್ರದೇಶಗಳನ್ನು ಬ್ರಿಟಿಷರು ಇಷ್ಟಪಡುತ್ತಿದ್ದರು. ಕೇರಳ ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಈ ಗಿರಿಧಾಮವನ್ನು ಸೇರಿಸಿಕೊಂಡಿದ್ದರಿಂದ, ಈ ಸ್ಥಳ ಮತ್ತಷ್ಟು ಪ್ರಾಮುಖ್ಯ ಪಡೆದುಕೊಂಡಿತು.</p>.<p><strong>ಇಲ್ಲಿ ಏನೇನಿದೆ?</strong></p>.<p>ರಾಣಿಪುರಮ್ನಲ್ಲಿ ನಿತ್ಯಹರಿದ್ವರ್ಣ ಕಾಡುಗಳಿವೆ. ಶೋಲಾ ಮರಗಳಿವೆ. ಜಿಂಕೆ, ಆನೆಗಳು, ವಿವಿಧ ರೀತಿಯ ಮಂಗಗಳಿವೆ. ಪಕ್ಷಿ ಪ್ರಭೇದಗಳು ಕಾಣಸಿಗುತ್ತವೆ. ವಿವಿಧ ಪ್ರಭೇದಗಳ ಚಿಟ್ಟೆ-ಪಾತರಗಿತ್ತಿಗಳಿವೆ. ಕರ್ನಾಟಕದ ತಲಕಾವೇರಿ ಅಭಯಾರಣ್ಯದೊಂದಿಗೆ ರಾಣಿಪುರಮ್ ತನ್ನ ಗಡಿಯನ್ನು ವಿಲೀನಗೊಳಿಸುತ್ತದೆ.</p>.<p><strong>ಚಾರಣದ ಮಜಾ</strong></p>.<p>ಸುಮಾರು 3-4 ಕಿ.ಮೀ ಕಡಿದಾದ ದಾರಿಯಲ್ಲಿ ಚಾರಣ ಮಾಡುತ್ತಾ ಬೆಟ್ಟ ಏರಬೇಕು. ವಿವಿಧ ಜಾತಿಯ ಮರಗಳ ನಡುವೆ ಚಾರಣ ಮಾಡುವ ಖುಷಿಯೇ ಅನನ್ಯ. ಬೆಟ್ಟದ ಮೇಲಕ್ಕೆ ತಲುಪುತ್ತಿದ್ದಂತೆ ಹುಲ್ಲುಗಳ ರಾಶಿ ಕಾಣಸಿಗುತ್ತದೆ. ನಡೆಯುವಾಗ ಸದ್ದಿಲ್ಲದೇ ಬಟ್ಟೆಯೊಳಕ್ಕೆ ಸೇರಿಕೊಂಡು ರಕ್ತ ಹೀರುವ ಜಿಗಣೆಗಳ ಬಗ್ಗೆ ಎಚ್ಚರವಹಿಸಬೇಕು.</p>.<p>ಅರಣ್ಯ ಹಾಗೂ ಆನೆಗಳ ವೀಕ್ಷಣೆಗೆ ಜೀಪ್ ಸವಾರಿ ಮಾಡಬಹುದು. ಇದಕ್ಕಾಗಿ ಸಮೀಪದಲ್ಲಿ ಜೀಪ್ಗಳು ಬಾಡಿಗೆ ಸಿಗುತ್ತವೆ. ದಟ್ಟ ಅರಣ್ಯರಾಶಿಯನ್ನು ಹೊಂದಿರುವ ರಾಣಿಪುರಮ್ನಲ್ಲಿ ಮಳೆಯ ಪ್ರಮಾಣವೂ ಅಧಿಕವಾಗಿದೆ. ಚಳಿಗಾಲದಲ್ಲಿ ಮಂಜು ಮುಸುಕಿದ ವಾತಾವರಣ. ಹೀಗಾಗಿ ಮಳೆಗಾಲದಲ್ಲಿ ಈ ತಾಣಕ್ಕೆ ಪ್ರವಾಸ ಹೋಗುವುದು ಸೂಕ್ತವಲ್ಲ.</p>.<p><strong>ಪ್ಲಾಸ್ಟಿಕ್ ನಿಷೇಧ</strong></p>.<p>ಪ್ಲಾಸ್ಟಿಕ್ ವಸ್ತುಗಳನ್ನು ಬೆಟ್ಟದ ಮೇಲೆ ಕೊಂಡೊಯ್ಯುವುದಿದ್ದರೆ ಒಂದಿಷ್ಟು ಹಣವನ್ನು ‘ಸೇಫ್ಟಿ ಡೆಪಾಸಿಟ್’ ಆಗಿ ಕೊಡಬೇಕು. ಬೆಟ್ಟದಿಂದ ವಾಪಸ್ ಬರುವಾಗಲೂ ಅದೇ ವಸ್ತುಗಳನ್ನು ಹಿಡಿದುಕೊಂಡು ಬಂದಿದ್ದರೆ ಮಾತ್ರ ನಿಮ್ಮ ದುಡ್ಡು ವಾಪಸ್. ಇದೊಂದು ರೀತಿಯಲ್ಲಿ ಪ್ಲಾಸ್ಟಿಕ್ ನಿರ್ಬಂಧ ಹೇರುವ ವಿಧಾನ. ಈ ಪ್ಲಾಸ್ಟಿಕ್ ನಿಷೇಧ ಮಾಡಿರುವ ಕಾರಣದಿಂದಲೂ ಇಲ್ಲಿಗೆ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಆಕರ್ಷಣೆಗೊಳಪಡಲು ಕಾರಣವಾಗಿದೆ.</p>.<p>ಕೇರಳ ಸರ್ಕಾರ ಪ್ರವಾಸೋದ್ಯಮ ಇಲಾಖೆ ರಾಣಿಪುರಮ್ ಗಿರಿಧಾಮವನ್ನು ತಕ್ಕಮಟ್ಟಿಗೆ ಅಭಿವೃದ್ಧಿಗೊಳಿಸಿದೆ, ನಿಜ. ಆದರೆ, ಕೆಲವೊಂದು ಅಭಿವೃದ್ಧಿ ಯೋಜನೆಗಳು ಇನ್ನೂ ಕಾರ್ಯ ರೂಪಕ್ಕೆ ಬಂದಿಲ್ಲ. ಪ್ರವಾಸಿಗರಿಗಾಗಿ ಇಲ್ಲೊಂದು ರೆಸಾರ್ಟ್ ಇದೆ ಎನ್ನುವುದನ್ನು ಹೊರತುಪಡಿಸಿದರೆ ಬೇರೆ ಯಾವ ಸೌಲಭ್ಯವೂ ಇಲ್ಲಿ ಕಾಣುವುದಿಲ್ಲ.</p>.<p>ಪನತ್ತಡಿಯಿಂದ ರಾಣಿಪುರಮ್ಗೆ ಹೋಗುವ ಡಾಂಬರು ರಸ್ತೆ ಏಕಾಏಕಿ ಒಂದುಕಡೆ ನಿಂತುಬಿಡುತ್ತದೆ. ಅಲ್ಲಿ ಯಾವುದೇ ಸೂಚನಾ ಫಲಕಗಳೂ ಇಲ್ಲ. ಅರ್ಧಂಬರ್ಧ ಬೆಳೆದ ಕುರುಚಲು ಲಂಟಾನಾ ಕಾಡುಗಳಲ್ಲಿ ಇಲಿಗಳು, ಹೆಗ್ಗಣಗಳು ಓಡಾಡುತ್ತಿರುತ್ತಿವೆ. ಈ ಭಾಗದಿಂದ ಬೆಟ್ಟವನ್ನು ಪ್ರವೇಶಿಸಿದ ಪ್ರವಾಸಿಗರು ದಾರಿ ತಪ್ಪಿ ಕಾಡಿನಲ್ಲಿ ಎಲ್ಲೆಲ್ಲೋ ಹೋದ ಉದಾಹರಣೆಗಳಿವೆ.</p>.<p>ಇಷ್ಟೆಲ್ಲ ಕೊರತೆಗಳ ನಡುವೆಯೂ ಈ ಹಿಲ್ಸ್ಟೇಷನ್ ಜನರನ್ನು ಆಕರ್ಷಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಇಲ್ಲಿನ ತಂಪು ವಾತಾವರಣ. ಬೆಟ್ಟದ ಮೇಲೆ ಕೈಚಾಚಿದರೆ ಮೋಡಗಳು ಕೈಗೆ ಸಿಗುತ್ತವೇನೋ ಅನ್ನಿಸುವಂಥ ಅನುಭವ. ಇಲ್ಲಿನ ಹಸಿರ ಸೌಂದರ್ಯ, ಸ್ವಚ್ಛವಾದ ತಂಪು ಗಾಳಿ ಚಾರಣದ ದಣಿವು ನಿವಾರಿಸುವಂತೆ ಮಾಡುತ್ತದೆ.</p>.<p><strong>ಹೋಗುವುದು ಹೇಗೆ?</strong></p>.<p>ಕಾಸರಗೋಡು ರೈಲ್ವೆ ನಿಲ್ದಾಣದಿಂದ 85 ಕಿ.ಮೀ. ದೂರದಲ್ಲಿದೆ ರಾಣಿಪುರಮ್. ಈ ತಾಣಕ್ಕೆ ಸಮೀಪದ ರೈಲ್ವೆ ನಿಲ್ದಾಣವೆಂದರೆ ಕಾಞಂಗಾಡ್ (45 ಕಿ.ಮೀ). ಮಂಗಳೂರಿನಿಂದ ಕಾಸರಗೋಡು ಮೂಲಕ ರಾಣಿಪುರಮ್ ತಲುಪಬಹುದು.</p>.<p>ರಾಣಿಪುರಮ್ ಹಿಲ್ಸ್ಟೇಷನ್ ಹೊಸದುರ್ಗ ತಾಲ್ಲೂಕಿನ ಪನತ್ತಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತದೆ. ಕಾಞಂಗಾಡಿನಿಂದ ಪಾಣತ್ತೂರು ದಾರಿಯಾಗಿ ಕರಿಕ್ಕೆ, ಭಾಗಮಂಡಲಕ್ಕೆ ಹೋಗುವಾಗ ಪನತ್ತಡಿ ಸಿಗುತ್ತದೆ. ಇಲ್ಲಿಂದ ರಾಣಿಪುರಮ್ಗೆ ರಸ್ತೆಯ ಸೌಕರ್ಯವಿದೆ. ಹೀಗಾಗಿ ಕೊಡಗು ಮೂಲಕವೂ ಈ ತಾಣವನ್ನು ತಲುಪಬಹುದು.</p>.<p>ಮಂಗಳೂರುವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರಾಣಿಪುರಮ್ಗೆ ಬಸ್, ಟ್ಯಾಕ್ಸಿ ಅಥವಾ ರೈಲಿನಲ್ಲಿ ಬರಬಹುದು. ಏರ್ಪೋರ್ಟ್ನಿಂದ ಕೆಎಸ್ಆರ್ಟಿಸಿ ಬಸ್ ಮೂಲಕ ಕಾಞಂಗಾಡ್ವರೆಗೆ ಬರಬಹುದು. ಅಲ್ಲಿಂದ ಬೇರೆ ಬಸ್ನಲ್ಲಿ ರಾಣಿಪುರಮ್ ತಲುಪಬಹುದು.</p>.<p><strong>ಭೇಟಿ ಸೂಕ್ತ ಸಮಯ</strong></p>.<p>ಮಳೆಗಾಲದಲ್ಲಿ ತುಂಬಾ ಮಳೆ ಇರುತ್ತದೆ. ಹಾಗಾಗಿ ಚಳಿಗಾಲವೇ ಈ ಗಿರಿಧಾಮದ ಭೇಟಿಗೆ ಸೂಕ್ತ ಸಮಯ. ಅಂದರೆ, ಅಕ್ಟೋಬರ್ನಿಂದ ಮಾರ್ಚ್ವರೆಗೆ ಈ ಪ್ರದೇಶದಲ್ಲಿ ಸುತ್ತಾಡಬಹುದು.</p>.<p><strong>ಊಟ–ವಸತಿ</strong></p>.<p>ಊಟ– ಉಪಹಾರಕ್ಕೆ ಯಾವುದೇ ವ್ಯವಸ್ಥೆ ಇಲ್ಲ. ಅಲ್ಲೊಂದು ರೆಸಾರ್ಟ್ ಇದೆ. ಆದರೆ ಅದು ಎಲ್ಲ ವರ್ಗದ ಪ್ರವಾಸಿಗರಿಗೆ ಕೈಗೆ ಎಟುಕುತ್ತದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ, ಚಾರಣಿಗರು, ಪ್ರವಾಸಿಗರು ರಾಣಿಪುರಮ್ಗೆ ಹೋಗುವಾಗ ಊಟ–ಉಪಹಾರದ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>