ಗಾಂಧೀಜಿ 1915ರಿಂದ 1935ರವರೆಗೆ ಹದಿನೆಂಟು ಬಾರಿ ಕರ್ನಾಟಕಕ್ಕೆ ಭೇಟಿ ನೀಡುತ್ತಾರೆ. ಅಸಹಕಾರ ಚಳುವಳಿ, ಬೆಳಗಾವಿ ಅಧಿವೇಶನ, ಈದ್ಗಾ ಮೈದಾನದ ಭಾಷಣ, ನಂದಿ ಗಿರಿಧಾಮದಲ್ಲಿ ವಿಶ್ರಾಂತಿ, ಶಿರಸಿ ಭೇಟಿ, ಬೆಂಗಳೂರು ಭೇಟಿ, ಬದನವಾಳು, ಡಿ.ವಿ.ಜಿ, ಪುಟ್ಟಣ್ಣ ಚೆಟ್ಟಿ, ಕೈಲಾಸಂ, ಸರ್ ಎಂ.ವಿ. ಗಂಗಾಧರ ದೇಶಪಾಂಡೆ, ಪಿಟೀಲು ಚೌಡಯ್ಯ ಅವರಂತಹ ಮಹನೀಯರ ಭೇಟಿ, ಹೀಗೆ ಹಲವಾರು ಪ್ರಮುಖ ಘಟನೆಗಳು ಈ ನಾಟಕವನ್ನು ಆವರಿಸಿವೆ.