29 ಮೇ 1919, ವಿಜ್ಞಾನದಲ್ಲಿ ಐತಿಹಾಸಿಕ ದಿನ. ಸಂಪೂರ್ಣ ಸೂರ್ಯಗ್ರಹಣ ನಡೆದಿದ್ದ ಅಂದು ಖಗೋಳ ವಿಜ್ಞಾನಿಗಳಿಗೆ ಪ್ರಯೋಗದ ದಿನವಾಗಿತ್ತು. ಸೂರ್ಯನ ಪ್ರಬಲ ಗುರುತ್ವಾಕರ್ಣೆಯಿಂದ ಬೆಳಕು ಬಾಗುತ್ತದೆ ಎಂದು ಹೇಳಿದ್ದ ಸಾಪೇಕ್ಷ ಸಿದ್ಧಾಂತವನ್ನು ವಿಜ್ಞಾನಿಗಳು ಸಾಬೀತು ಮಾಡಿದರು. ವಿಜ್ಞಾನಿ ಸರ್ ಆರ್ಥರ್ ಎಡ್ಡಿಂಗ್ಟನ್ ನೇತೃತ್ವದಲ್ಲಿ ಅಂದು ಪ್ರಯೋಗ ನಡೆದಿತ್ತು. ಈ ಘಟನೆ ನಡೆದು ಇದೇ 29ಕ್ಕೆ 100 ವರ್ಷಗಳು ತುಂಬುತ್ತಿವೆ. ಬೆಂಗಳೂರಿನ ನೆಹರೂ ತಾರಾಲಯವು ಈ ಪ್ರಯೋಗದ ನೂರನೇ ವರ್ಷದ ಸಂಭ್ರಮ ಆಚರಿಸಲಿದೆ. ಐಸಿಟಿಎಸ್ನ ಹಿರಿಯ ಪ್ರಾಧ್ಯಾಪಕ ಪ್ರೊ. ಪಿ. ಅಜಿತ್ ಅವರು ಉಪನ್ಯಾಸ ನೀಡಲಿದ್ದಾರೆ. ಸ್ಥಳ–ನೆಹರೂ ತಾರಾಲಯ, ಮೇ 29ರಂದು ಬೆಳಿಗ್ಗೆ 10.30