<p>ಭಾದ್ರಪದ ಮಾಸದ ಕೃಷ್ಣ ಪಕ್ಷವೇ ಮಹಾಲಯ ಪಕ್ಷ, ಅಪರ ಪಕ್ಷ ಅಥವ ಪಿತೃ ಪಕ್ಷ. ಹುಣ್ಣಿಮೆ ನಂತರದ ಪ್ರತಿಪದೆಯಿಂದ ಅಮಾವಾಸ್ಯೆ ವರೆಗೂ ಸರ್ವ ಪಿತೃಗಳಿಗೆ ಮಾಡುವ ಶ್ರಾದ್ಧವೇ ಮಹಾಲಯ.<br /> <br /> ಶಾಸ್ತ್ರಗಳ ಪ್ರಕಾರ ಗೃಹಸ್ಥನಾದವನಿಗೆ ಪಿತೃ, ದೇವ, ಋಷಿ, ಭೂತ ಮತ್ತು ಮನುಷ್ಯ ಎಂಬ ಐದು ಬಗೆಯ ಋಣವನ್ನು ತೀರಿಸುವ ಹೊಣೆಗಾರಿಕೆ ಇದೆ. ಆ ಮೂಲಕ ಹಿರಿಯರನ್ನು ಋಣಮುಕ್ತರನ್ನಾಗಿ ಮಾಡುವ ಮಹತ್ತರ ಕರ್ತವ್ಯ ನಿಭಾಯಿಸಬೇಕಾಗುತ್ತದೆ.<br /> <br /> ತಂದೆ ತಾಯಿಗೆ ಸಮನಾದ ಇನ್ನೊಂದು ದೇವರಿಲ್ಲ. ಶರೀರ, ವಿದ್ಯೆ, ಬುದ್ಧಿ, ಸಂಸ್ಕಾರ, ಸಂಪತ್ತುಗಳಿಗೆ ಅವರೇ ಕಾರಣ. ಗತಿಸಿದ ಮಾತಾ ಪಿತರಿಗೆ ಶ್ರದ್ಧೆಯಿಂದ ಅಗ್ನಿಯ ಮೂಲಕ ಹೋಮ, ಪಿಂಡ ಪ್ರದಾನವೇ ಶ್ರಾದ್ಧವೆನಿಸುತ್ತದೆ.<br /> <br /> ಮಹಾಲಯದ ಹದಿನಾರು ದಿನಗಳಲ್ಲಿ ಸೂರ್ಯನು ಕನ್ಯಾ ರಾಶಿ ಪ್ರವೇಶ ಮಾಡುತ್ತಾನೆ. ಇದು ಸಕಲ ಪಿತೃಗಳಿಗೂ ಪರ್ವಕಾಲ. ಈ ಕಾಲದಲ್ಲಿ ಪ್ರೇತಪುರದಲ್ಲಿ ಜೀವಿಗಳಿರುವುದಿಲ್ಲವೆಂದೂ, ಭೂಲೋಕದಲ್ಲಿ ವಾಯು ರೂಪದೊಂದಿಗೆ ಆತ್ಮೀಯರ ಬಳಿ ಅನ್ನ ನೀರಿನ ಆಕಾಂಕ್ಷಿಗಳಾಗಿ ಇರುತ್ತಾರೆ ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ಈ ಕಾಲದಲ್ಲಿ ಪ್ರತಿನಿತ್ಯ ಶ್ರಾದ್ಧದ ಆಚರಣೆಯಾಗಿ ತಿಲತರ್ಪಣ ಕೊಡುತ್ತಾರೆ. ತರ್ಪಣ ಎಂದರೆ ತೃಪ್ತಿಪಡಿಸುವುದು ಎಂದರ್ಥ.<br /> <br /> ಜನನ-ಮರಣಗಳಿಗೆ ಹೇಗೆ ಜಾತಿ ಭೇದವಿಲ್ಲವೋ ಹಾಗೆಯೇ ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು; ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಪ್ರಾಚೀನ ಸಂಸ್ಕೃತಿಯ ಉತ್ತಮ ಕುರುಹು ಪಿತೃಪಕ್ಷ ಶ್ರಾದ್ಧ.<br /> ಶಾಸ್ತ್ರಗಳ ಪ್ರಕಾರ ಮುತ್ತೈದೆಯರಾಗಿ ಮೃತರಾದವರಿಗೆ ನವಮಿಯಂದು, ಯತಿಗಳಿಗೆ ದ್ವಾದಶಿಯಂದು, ದುರಂತ ಸಾವನ್ನಪ್ಪಿದವರಿಗೆ ಚತುರ್ದಶಿಯಂದು ಶ್ರಾದ್ಧ ಮಾಡಬೇಕು. <br /> <br /> <strong>ಜನಪದ ಸಂಸ್ಕೃತಿಯಲ್ಲಿ</strong><br /> ಸತ್ತವರ ನೆನಪಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಪದ್ಧತಿಯನ್ನು ಶಿಷ್ಟ ಪರಂಪರೆಯಲ್ಲಿ ಪಿತೃಪಕ್ಷ, ಶ್ರಾದ್ಧ ಎಂದು ಕರೆದರೆ ಜನಪದ ಪರಂಪರೆಯಲ್ಲಿ ಹಿರಿಯರ ಹಬ್ಬ, ಮಾಳ ಪಕ್ಷ ಎಂದು ಹೇಳುವುದಿದೆ. ಮಹಾಲಯ ಅಮಾವಾಸ್ಯೆ ಎಂಬ ಪದವೇ ಮಾಳ ಪಕ್ಷ ಎಂತಲೂ ಆಗಿರಬಹುದು.<br /> <br /> ಈ ಪರ್ವ ಬೆಳೆ ಕೊಯ್ಲಿಗೆ ಸ್ವಲ್ಪ ಮುನ್ನ ಬರುತ್ತದೆ. ಮಣ್ಣು ಮತ್ತು ನೀರಿನ ಆರಾಧನೆಯ ಹಿನ್ನೆಲೆಯಲ್ಲಿ ಗೌರಿ-ಗಣೇಶ, ಬೆಳೆಯ ಸಮದ್ಧಿಯ ನಡುವೆ ದೀಪಾವಳಿ ಸಾರ್ವಜನಿಕ ಹಬ್ಬಗಳಾದರೆ ವ್ಯಕ್ತಿ ಮತ್ತು ಕುಟುಂಬದ ಕಾರಣಕ್ಕಾಗಿ ಬರುವ ಹಬ್ಬ ಹಿರಿಯರ ನೆನಪಿನ ಹಬ್ಬ.<br /> <br /> ನಮ್ಮ ರಾಜ್ಯದಲ್ಲಿ ಈ ಆಚರಣೆಯಲ್ಲಿ ವೈವಿಧ್ಯವಿದೆ. ಉತ್ತರ ಕರ್ನಾಟಕದಲ್ಲಿ ಮಾಸ್ತಿಗಲ್ಲು, ವೀರಗಲ್ಲುಗಳಿಗೆ ಪೂಜೆ ನಡೆದರೆ, ದಕ್ಷಿಣ ಭಾಗದಲ್ಲಿ ಅದರ ಆಚರಣೆಯ ಸ್ವರೂಪವೇ ಬೇರೆ ರೀತಿಯಾಗಿರುತ್ತದೆ.<br /> <br /> ಹಿರಿಯರು ಬದುಕಿದ್ದ ಕಾಲದಲ್ಲಿ ಅವರಿಗೆ ಸಹಕಾರ ನೀಡಿದ ಪ್ರಕೃತಿಯನ್ನು ನೆನೆಯುವ ಆಚರಣೆ ಇದರಲ್ಲಿ ಇರುವುದನ್ನು ಗಮನಿಸಬಹುದು. ಹೀಗಾಗಿ ಅವರು ಇಷ್ಟಪಡುತ್ತಿದ್ದ ವಸ್ತುಗಳನ್ನೇ ಅರ್ಪಿಸುತ್ತಾರೆ. ಉದಾಹರಣೆಗೆ ಮೃತ ಹಿರಿಯರು ಮದ್ಯಪಾನಿಗಳಾಗಿದ್ದರೆ, ಬೀಡಿ ಸೇದುತ್ತಿದ್ದರೆ, ಮಾಂಸಾಹಾರಿಗಳಾಗಿದ್ದರೆ, ಸಸ್ಯಾಹಾರಿಗಳಾಗಿದ್ದರೆ, ಅದನ್ನೇ ಆ ಹೊತ್ತಿನ ನೈವೇದ್ಯಕ್ಕಾಗಿ ಇರಿಸುವುದುಂಟು.<br /> <br /> ನೈವೇದ್ಯದ ಕೆಲಭಾಗವನ್ನು ಪೂಜೆ ಮಾಡಿಕೊಡಲು ಬಂದ ಪೂಜಾರಿ ಸೇವಿಸಲೇಬೇಕು. ಆಗಲೇ ಅದು ಸತ್ತು ಸ್ವರ್ಗದಲ್ಲಿರುವ ಹಿರಿಯರಿಗೆ ಸಂದಾಯವಾಗುತ್ತದೆ ಎಂಬುದು ಸಾರ್ವತ್ರಿಕ ನಂಬಿಕೆ.<br /> <br /> ಇವತ್ತಿನ ನಮ್ಮ ಸಮಾಜದಲ್ಲಿ ಅನೇಕರಿಗೆ ಇದರ ಇರುವಿಕೆಯೇ ಗೊತ್ತಿಲ್ಲದೇ ಹೋಗಿದೆ. ಮುಂದಿನ ಪೀಳಿಗೆ ಅಂತಹ ಒಂದು ಉತ್ತಮ ಉದಾತ್ತ ಧ್ಯೇಯ, ಕರ್ಮವನ್ನು ಮರೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾದ್ರಪದ ಮಾಸದ ಕೃಷ್ಣ ಪಕ್ಷವೇ ಮಹಾಲಯ ಪಕ್ಷ, ಅಪರ ಪಕ್ಷ ಅಥವ ಪಿತೃ ಪಕ್ಷ. ಹುಣ್ಣಿಮೆ ನಂತರದ ಪ್ರತಿಪದೆಯಿಂದ ಅಮಾವಾಸ್ಯೆ ವರೆಗೂ ಸರ್ವ ಪಿತೃಗಳಿಗೆ ಮಾಡುವ ಶ್ರಾದ್ಧವೇ ಮಹಾಲಯ.<br /> <br /> ಶಾಸ್ತ್ರಗಳ ಪ್ರಕಾರ ಗೃಹಸ್ಥನಾದವನಿಗೆ ಪಿತೃ, ದೇವ, ಋಷಿ, ಭೂತ ಮತ್ತು ಮನುಷ್ಯ ಎಂಬ ಐದು ಬಗೆಯ ಋಣವನ್ನು ತೀರಿಸುವ ಹೊಣೆಗಾರಿಕೆ ಇದೆ. ಆ ಮೂಲಕ ಹಿರಿಯರನ್ನು ಋಣಮುಕ್ತರನ್ನಾಗಿ ಮಾಡುವ ಮಹತ್ತರ ಕರ್ತವ್ಯ ನಿಭಾಯಿಸಬೇಕಾಗುತ್ತದೆ.<br /> <br /> ತಂದೆ ತಾಯಿಗೆ ಸಮನಾದ ಇನ್ನೊಂದು ದೇವರಿಲ್ಲ. ಶರೀರ, ವಿದ್ಯೆ, ಬುದ್ಧಿ, ಸಂಸ್ಕಾರ, ಸಂಪತ್ತುಗಳಿಗೆ ಅವರೇ ಕಾರಣ. ಗತಿಸಿದ ಮಾತಾ ಪಿತರಿಗೆ ಶ್ರದ್ಧೆಯಿಂದ ಅಗ್ನಿಯ ಮೂಲಕ ಹೋಮ, ಪಿಂಡ ಪ್ರದಾನವೇ ಶ್ರಾದ್ಧವೆನಿಸುತ್ತದೆ.<br /> <br /> ಮಹಾಲಯದ ಹದಿನಾರು ದಿನಗಳಲ್ಲಿ ಸೂರ್ಯನು ಕನ್ಯಾ ರಾಶಿ ಪ್ರವೇಶ ಮಾಡುತ್ತಾನೆ. ಇದು ಸಕಲ ಪಿತೃಗಳಿಗೂ ಪರ್ವಕಾಲ. ಈ ಕಾಲದಲ್ಲಿ ಪ್ರೇತಪುರದಲ್ಲಿ ಜೀವಿಗಳಿರುವುದಿಲ್ಲವೆಂದೂ, ಭೂಲೋಕದಲ್ಲಿ ವಾಯು ರೂಪದೊಂದಿಗೆ ಆತ್ಮೀಯರ ಬಳಿ ಅನ್ನ ನೀರಿನ ಆಕಾಂಕ್ಷಿಗಳಾಗಿ ಇರುತ್ತಾರೆ ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ಈ ಕಾಲದಲ್ಲಿ ಪ್ರತಿನಿತ್ಯ ಶ್ರಾದ್ಧದ ಆಚರಣೆಯಾಗಿ ತಿಲತರ್ಪಣ ಕೊಡುತ್ತಾರೆ. ತರ್ಪಣ ಎಂದರೆ ತೃಪ್ತಿಪಡಿಸುವುದು ಎಂದರ್ಥ.<br /> <br /> ಜನನ-ಮರಣಗಳಿಗೆ ಹೇಗೆ ಜಾತಿ ಭೇದವಿಲ್ಲವೋ ಹಾಗೆಯೇ ಪಿತೃ ಕಾರ್ಯಕ್ಕೂ ಜಾತಿ-ಭೇದವಿಲ್ಲ. ಉಪಕಾರ ಮಾಡಿದವರನ್ನು ಸ್ಮರಿಸಿಕೊಳ್ಳಬೇಕು; ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂಬ ಪ್ರಾಚೀನ ಸಂಸ್ಕೃತಿಯ ಉತ್ತಮ ಕುರುಹು ಪಿತೃಪಕ್ಷ ಶ್ರಾದ್ಧ.<br /> ಶಾಸ್ತ್ರಗಳ ಪ್ರಕಾರ ಮುತ್ತೈದೆಯರಾಗಿ ಮೃತರಾದವರಿಗೆ ನವಮಿಯಂದು, ಯತಿಗಳಿಗೆ ದ್ವಾದಶಿಯಂದು, ದುರಂತ ಸಾವನ್ನಪ್ಪಿದವರಿಗೆ ಚತುರ್ದಶಿಯಂದು ಶ್ರಾದ್ಧ ಮಾಡಬೇಕು. <br /> <br /> <strong>ಜನಪದ ಸಂಸ್ಕೃತಿಯಲ್ಲಿ</strong><br /> ಸತ್ತವರ ನೆನಪಿನಲ್ಲಿ ವರ್ಷಕ್ಕೊಮ್ಮೆ ಆಚರಿಸುವ ಪದ್ಧತಿಯನ್ನು ಶಿಷ್ಟ ಪರಂಪರೆಯಲ್ಲಿ ಪಿತೃಪಕ್ಷ, ಶ್ರಾದ್ಧ ಎಂದು ಕರೆದರೆ ಜನಪದ ಪರಂಪರೆಯಲ್ಲಿ ಹಿರಿಯರ ಹಬ್ಬ, ಮಾಳ ಪಕ್ಷ ಎಂದು ಹೇಳುವುದಿದೆ. ಮಹಾಲಯ ಅಮಾವಾಸ್ಯೆ ಎಂಬ ಪದವೇ ಮಾಳ ಪಕ್ಷ ಎಂತಲೂ ಆಗಿರಬಹುದು.<br /> <br /> ಈ ಪರ್ವ ಬೆಳೆ ಕೊಯ್ಲಿಗೆ ಸ್ವಲ್ಪ ಮುನ್ನ ಬರುತ್ತದೆ. ಮಣ್ಣು ಮತ್ತು ನೀರಿನ ಆರಾಧನೆಯ ಹಿನ್ನೆಲೆಯಲ್ಲಿ ಗೌರಿ-ಗಣೇಶ, ಬೆಳೆಯ ಸಮದ್ಧಿಯ ನಡುವೆ ದೀಪಾವಳಿ ಸಾರ್ವಜನಿಕ ಹಬ್ಬಗಳಾದರೆ ವ್ಯಕ್ತಿ ಮತ್ತು ಕುಟುಂಬದ ಕಾರಣಕ್ಕಾಗಿ ಬರುವ ಹಬ್ಬ ಹಿರಿಯರ ನೆನಪಿನ ಹಬ್ಬ.<br /> <br /> ನಮ್ಮ ರಾಜ್ಯದಲ್ಲಿ ಈ ಆಚರಣೆಯಲ್ಲಿ ವೈವಿಧ್ಯವಿದೆ. ಉತ್ತರ ಕರ್ನಾಟಕದಲ್ಲಿ ಮಾಸ್ತಿಗಲ್ಲು, ವೀರಗಲ್ಲುಗಳಿಗೆ ಪೂಜೆ ನಡೆದರೆ, ದಕ್ಷಿಣ ಭಾಗದಲ್ಲಿ ಅದರ ಆಚರಣೆಯ ಸ್ವರೂಪವೇ ಬೇರೆ ರೀತಿಯಾಗಿರುತ್ತದೆ.<br /> <br /> ಹಿರಿಯರು ಬದುಕಿದ್ದ ಕಾಲದಲ್ಲಿ ಅವರಿಗೆ ಸಹಕಾರ ನೀಡಿದ ಪ್ರಕೃತಿಯನ್ನು ನೆನೆಯುವ ಆಚರಣೆ ಇದರಲ್ಲಿ ಇರುವುದನ್ನು ಗಮನಿಸಬಹುದು. ಹೀಗಾಗಿ ಅವರು ಇಷ್ಟಪಡುತ್ತಿದ್ದ ವಸ್ತುಗಳನ್ನೇ ಅರ್ಪಿಸುತ್ತಾರೆ. ಉದಾಹರಣೆಗೆ ಮೃತ ಹಿರಿಯರು ಮದ್ಯಪಾನಿಗಳಾಗಿದ್ದರೆ, ಬೀಡಿ ಸೇದುತ್ತಿದ್ದರೆ, ಮಾಂಸಾಹಾರಿಗಳಾಗಿದ್ದರೆ, ಸಸ್ಯಾಹಾರಿಗಳಾಗಿದ್ದರೆ, ಅದನ್ನೇ ಆ ಹೊತ್ತಿನ ನೈವೇದ್ಯಕ್ಕಾಗಿ ಇರಿಸುವುದುಂಟು.<br /> <br /> ನೈವೇದ್ಯದ ಕೆಲಭಾಗವನ್ನು ಪೂಜೆ ಮಾಡಿಕೊಡಲು ಬಂದ ಪೂಜಾರಿ ಸೇವಿಸಲೇಬೇಕು. ಆಗಲೇ ಅದು ಸತ್ತು ಸ್ವರ್ಗದಲ್ಲಿರುವ ಹಿರಿಯರಿಗೆ ಸಂದಾಯವಾಗುತ್ತದೆ ಎಂಬುದು ಸಾರ್ವತ್ರಿಕ ನಂಬಿಕೆ.<br /> <br /> ಇವತ್ತಿನ ನಮ್ಮ ಸಮಾಜದಲ್ಲಿ ಅನೇಕರಿಗೆ ಇದರ ಇರುವಿಕೆಯೇ ಗೊತ್ತಿಲ್ಲದೇ ಹೋಗಿದೆ. ಮುಂದಿನ ಪೀಳಿಗೆ ಅಂತಹ ಒಂದು ಉತ್ತಮ ಉದಾತ್ತ ಧ್ಯೇಯ, ಕರ್ಮವನ್ನು ಮರೆಯುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>