<p>ಟಿಷ್ಯೂ ಕಲ್ಚರ್ ಅಥವಾ ಅಂಗಾಂಶ ಕೃಷಿ ಎಲ್ಲೆಡೆ ಜನಪ್ರಿಯ. ಕಾಂಡದ ಒಂದು ತೃಣ ಭಾಗವನ್ನು ತೆಗೆದು ಅದರಿಂದ ಸಾವಿರ, ಲಕ್ಷಗಳ ಲೆಕ್ಕದಲ್ಲಿ ಸಸ್ಯ ಉತ್ಪಾದನೆಯ ಈ ಪದ್ಧತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗವೂ ಅಳವಡಿಸಿಕೊಂಡಿದೆ, ಅದರಲ್ಲಿ ಅನೇಕ ಸಂಶೋಧನೆ ನಡೆಸುತ್ತಿದೆ.<br /> <br /> ಈ ಪದ್ಧತಿ ಬೆಳೆದು ಬಂದ ಬಗೆ, ಸಂಶೋಧಕರು ಯಾರು ಎಂಬುದನ್ನು ವಿವರಿಸಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಕ್ಯಾಂಪಸ್ನಲ್ಲಿ `ಥೀಮ್ ಪಾರ್ಕ್~ ನಿರ್ಮಿಸಿದೆ.<br /> <br /> ಸಸ್ಯ ಅಂಗಾಂಶ ಕೃಷಿ ಪದ್ಧತಿ ಹಾಗೂ ಡಿಎನ್ಎ ಸಂಶೋಧಕರು ಈ ಪಾರ್ಕ್ನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ! ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅಪರಿಚಿತವಲ್ಲದ `ಸಸ್ಯ ಅಂಗಾಂಶ ಕೃಷಿ ಪದ್ಧತಿ~ ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆ ಕ್ರಾಂತಿಗೆ ಕಾರಣರಾದ ವಿಜ್ಞಾನಿಗಳನ್ನು ಸ್ಮರಿಸುವ ಉದ್ದೇಶದಿಂದ ಕುಲಪತಿ ಡಾ.ಕೆ.ನಾರಾಯಣಗೌಡ ಅವರ ಮಾರ್ಗದರ್ಶನದಲ್ಲಿ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಹಾಗೂ ಸಸ್ಯ ಅಂಗಾಂಶ ಕೃಷಿ ಪದ್ಧತಿ ಪ್ರಯೋಗಾಲಯದ ಮುಖ್ಯಸ್ಥ ಡಾ.ಬಿ.ಎನ್.ಸತ್ಯನಾರಾಯಣ ಅವರು 2009ರಲ್ಲಿ ಈ ಥೀಮ್ ಪಾರ್ಕ್ ರಚನೆ ಕಾರ್ಯ ಆರಂಭಿಸಿದರು.<br /> <br /> ಸಸ್ಯ ಅಂಗಾಂಶ ಕೃಷಿ ಪದ್ಧತಿಯಲ್ಲಿ ಸಸ್ಯಗಳನ್ನು ಸಂರಕ್ಷಿಸಿ ಬೆಳೆಸಲು ಅಗತ್ಯವಾದ ಆಹಾರ, ಕಾಂಡವನ್ನು ಬಾಟಲಿಯಲ್ಲಿ ಜೋಪಾನವಾಗಿಡುವ ಕುರಿತು ಸಂಶೋಧನೆ (ಎಂಎಸ್ ಮಿಡಿಯಾ) ನಡೆಸಿದ ಜಪಾನಿನ ಪ್ರೊಫೆಸರ್ ಸ್ಕೂಗ್ ಮತ್ತು ಡಾ.ಮುರಾಶಿಗೆ ಅವರ ಶಿಲ್ಪಗಳು ಈ ಪಾರ್ಕ್ನ ವೈಶಿಷ್ಟ್ಯ. ಒಂದು ಬೆಂಚಿನಲ್ಲಿ ಅಳವಡಿಸಲಾದ ಶಿಲ್ಪಗಳು ಗುರು-ಶಿಷ್ಯರ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತವೆ. <br /> <br /> ಸಾಕಷ್ಟು ಪಾಂಡಿತ್ಯ ಹೊಂದಿರುವಂತೆ ಕಾಣುವ ಪ್ರೊ.ಸ್ಕೂಗ್ ಅವರು ತಮ್ಮ ವಿದ್ಯೆಯನ್ನೆಲ್ಲ ಶಿಷ್ಯ ಮುರಾಶಿಗೆ ಅವರಿಗೆ ನೀಡಲು ಕುಳಿತಂತಿದೆ. ಹಲವಾರು ಪ್ರಶ್ನೆಗಳನ್ನು, ಅಚ್ಚರಿಗಳನ್ನು ಮನದಲ್ಲಿಟ್ಟುಕೊಂಡಂತೆ ಕಾಣುವ ಮುರಾಶಿಗೆ ಶಿಲ್ಪವೂ ಗಮನ ಸೆಳೆಯುತ್ತವೆ. <br /> <br /> ವಂಶವಾಹಿ ಕಣ (ಡಿಎನ್ಎ)ಗಳ ಕಾರ್ಯವೈಖರಿಯನ್ನು ಪತ್ತೆಹಚ್ಚಿದ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರಾಗಿದ್ದ ಡಾ.ವ್ಯಾಟ್ಸನ್ ಮತ್ತು ಡಾ.ಕ್ರಿಕ್ ಡಿಎನ್ಎ ಪ್ರತಿಕೃತಿಯನ್ನು ಹೆಮ್ಮೆಯಿಂದ ನೋಡುತ್ತಿರುವ ಶಿಲ್ಪ ಕಲಾಕೃತಿಗಳು ಈ ಪಾರ್ಕ್ನಲ್ಲಿವೆ. ಡಿಎನ್ಎಯ ಮಹತ್ವ ತಮಗಿಂತಲೂ ಎತ್ತರದಲ್ಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಲು ಪ್ರತಿಕೃತಿಯನ್ನು ತಲೆ ಎತ್ತರಿಸಿ ನೋಡುತ್ತಿದ್ದಾರೆ. <br /> <br /> ಸಸ್ಯ ಅಂಗಾಂಶ ಕೃಷಿ ಪದ್ಧತಿಯ ಪಿತಾಮಹ ಎಂದೇ ಕರೆಯಲಾಗುವ ಜರ್ಮನಿಯ ಡಾ.ಗಾಟ್ಲೀಬ್ ಹೇಬರ್ಲ್ಯಾಂಡ್ತ್ ಅವರ ಶಿಲ್ಪ ಜರ್ಮನಿ ಬಿಟ್ಟರೆ ಇಲ್ಲಿಯೇ ಇರುವುದು. `ಸಸ್ಯ ಅಂಗಾಂಶ ಕೃಷಿ ಪದ್ಧತಿ ಕುರಿತು ವಿಶ್ವದಲ್ಲಿ ಇರುವ ಏಕೈಕ ಥೀಮ್ ಪಾರ್ಕ್ ಇದು. ನಮ್ಮ ವಿಶ್ವವಿದ್ಯಾಲಯದ ಹೆಮ್ಮೆ~ ಎನ್ನುತ್ತಾರೆ ಡಾ.ಸತ್ಯನಾರಾಯಣ. <br /> <br /> ಎಲ್ಲ ಸಸ್ಯ ಕೋಶಗಳಿಗೆ ಸಂಪೂರ್ಣ ಗಿಡವಾಗಿ ಬೆಳೆಯುವ ಸಾಮರ್ಥ್ಯವನ್ನು ಇಲ್ಲಿರುವ ಶಿಲ್ಪವೊಂದು ಬಿಂಬಿಸುತ್ತದೆ. ರಾಜ್ಯದ ಅತ್ಯುತ್ತಮ ಶಿಲ್ಪಕಲಾಕೃತಿ ಎಂದು ಇದನ್ನು ಪರಿಗಣಿಸಲಾಗಿದ್ದು, ಕಲಾವಿದ ಜಗನ್ನಾಥ ಜಕ್ಕೇಪಲ್ಲಿ ಅವರು ಇದರ ನಿರ್ಮಾತೃ. <br /> <br /> ಅಪರೂಪದ ಶಿಲ್ಪಗಳನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳುವ ಮೂಲಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬರೀ ಕೃಷಿ ಸಂಶೋಧನೆ ಹಾಗೂ ಬೋಧನೆಗಷ್ಟೇ ಅಲ್ಲದೇ ಇಂಥ ಪಾರ್ಕ್ನಿಂದಾಗಿಯೂ ಗಮನ ಸೆಳೆಯುತ್ತದೆ. ಬಿಡುವಾಗಿದ್ದಾಗ ನೀವೂ ಈ ಪಾರ್ಕ್ಗೆ ಭೇಟಿ ನೀಡಬಹುದು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಟಿಷ್ಯೂ ಕಲ್ಚರ್ ಅಥವಾ ಅಂಗಾಂಶ ಕೃಷಿ ಎಲ್ಲೆಡೆ ಜನಪ್ರಿಯ. ಕಾಂಡದ ಒಂದು ತೃಣ ಭಾಗವನ್ನು ತೆಗೆದು ಅದರಿಂದ ಸಾವಿರ, ಲಕ್ಷಗಳ ಲೆಕ್ಕದಲ್ಲಿ ಸಸ್ಯ ಉತ್ಪಾದನೆಯ ಈ ಪದ್ಧತಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ತೋಟಗಾರಿಕೆ ವಿಭಾಗವೂ ಅಳವಡಿಸಿಕೊಂಡಿದೆ, ಅದರಲ್ಲಿ ಅನೇಕ ಸಂಶೋಧನೆ ನಡೆಸುತ್ತಿದೆ.<br /> <br /> ಈ ಪದ್ಧತಿ ಬೆಳೆದು ಬಂದ ಬಗೆ, ಸಂಶೋಧಕರು ಯಾರು ಎಂಬುದನ್ನು ವಿವರಿಸಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ) ಕ್ಯಾಂಪಸ್ನಲ್ಲಿ `ಥೀಮ್ ಪಾರ್ಕ್~ ನಿರ್ಮಿಸಿದೆ.<br /> <br /> ಸಸ್ಯ ಅಂಗಾಂಶ ಕೃಷಿ ಪದ್ಧತಿ ಹಾಗೂ ಡಿಎನ್ಎ ಸಂಶೋಧಕರು ಈ ಪಾರ್ಕ್ನಲ್ಲಿ ಭದ್ರವಾಗಿ ನೆಲೆಯೂರಿದ್ದಾರೆ! ಸಸ್ಯಶಾಸ್ತ್ರದ ವಿದ್ಯಾರ್ಥಿಗಳಿಗೆ ಅಪರಿಚಿತವಲ್ಲದ `ಸಸ್ಯ ಅಂಗಾಂಶ ಕೃಷಿ ಪದ್ಧತಿ~ ತೋಟಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆ ಕ್ರಾಂತಿಗೆ ಕಾರಣರಾದ ವಿಜ್ಞಾನಿಗಳನ್ನು ಸ್ಮರಿಸುವ ಉದ್ದೇಶದಿಂದ ಕುಲಪತಿ ಡಾ.ಕೆ.ನಾರಾಯಣಗೌಡ ಅವರ ಮಾರ್ಗದರ್ಶನದಲ್ಲಿ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ಹಾಗೂ ಸಸ್ಯ ಅಂಗಾಂಶ ಕೃಷಿ ಪದ್ಧತಿ ಪ್ರಯೋಗಾಲಯದ ಮುಖ್ಯಸ್ಥ ಡಾ.ಬಿ.ಎನ್.ಸತ್ಯನಾರಾಯಣ ಅವರು 2009ರಲ್ಲಿ ಈ ಥೀಮ್ ಪಾರ್ಕ್ ರಚನೆ ಕಾರ್ಯ ಆರಂಭಿಸಿದರು.<br /> <br /> ಸಸ್ಯ ಅಂಗಾಂಶ ಕೃಷಿ ಪದ್ಧತಿಯಲ್ಲಿ ಸಸ್ಯಗಳನ್ನು ಸಂರಕ್ಷಿಸಿ ಬೆಳೆಸಲು ಅಗತ್ಯವಾದ ಆಹಾರ, ಕಾಂಡವನ್ನು ಬಾಟಲಿಯಲ್ಲಿ ಜೋಪಾನವಾಗಿಡುವ ಕುರಿತು ಸಂಶೋಧನೆ (ಎಂಎಸ್ ಮಿಡಿಯಾ) ನಡೆಸಿದ ಜಪಾನಿನ ಪ್ರೊಫೆಸರ್ ಸ್ಕೂಗ್ ಮತ್ತು ಡಾ.ಮುರಾಶಿಗೆ ಅವರ ಶಿಲ್ಪಗಳು ಈ ಪಾರ್ಕ್ನ ವೈಶಿಷ್ಟ್ಯ. ಒಂದು ಬೆಂಚಿನಲ್ಲಿ ಅಳವಡಿಸಲಾದ ಶಿಲ್ಪಗಳು ಗುರು-ಶಿಷ್ಯರ ಸಂಬಂಧವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸುತ್ತವೆ. <br /> <br /> ಸಾಕಷ್ಟು ಪಾಂಡಿತ್ಯ ಹೊಂದಿರುವಂತೆ ಕಾಣುವ ಪ್ರೊ.ಸ್ಕೂಗ್ ಅವರು ತಮ್ಮ ವಿದ್ಯೆಯನ್ನೆಲ್ಲ ಶಿಷ್ಯ ಮುರಾಶಿಗೆ ಅವರಿಗೆ ನೀಡಲು ಕುಳಿತಂತಿದೆ. ಹಲವಾರು ಪ್ರಶ್ನೆಗಳನ್ನು, ಅಚ್ಚರಿಗಳನ್ನು ಮನದಲ್ಲಿಟ್ಟುಕೊಂಡಂತೆ ಕಾಣುವ ಮುರಾಶಿಗೆ ಶಿಲ್ಪವೂ ಗಮನ ಸೆಳೆಯುತ್ತವೆ. <br /> <br /> ವಂಶವಾಹಿ ಕಣ (ಡಿಎನ್ಎ)ಗಳ ಕಾರ್ಯವೈಖರಿಯನ್ನು ಪತ್ತೆಹಚ್ಚಿದ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರಾಗಿದ್ದ ಡಾ.ವ್ಯಾಟ್ಸನ್ ಮತ್ತು ಡಾ.ಕ್ರಿಕ್ ಡಿಎನ್ಎ ಪ್ರತಿಕೃತಿಯನ್ನು ಹೆಮ್ಮೆಯಿಂದ ನೋಡುತ್ತಿರುವ ಶಿಲ್ಪ ಕಲಾಕೃತಿಗಳು ಈ ಪಾರ್ಕ್ನಲ್ಲಿವೆ. ಡಿಎನ್ಎಯ ಮಹತ್ವ ತಮಗಿಂತಲೂ ಎತ್ತರದಲ್ಲಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಲು ಪ್ರತಿಕೃತಿಯನ್ನು ತಲೆ ಎತ್ತರಿಸಿ ನೋಡುತ್ತಿದ್ದಾರೆ. <br /> <br /> ಸಸ್ಯ ಅಂಗಾಂಶ ಕೃಷಿ ಪದ್ಧತಿಯ ಪಿತಾಮಹ ಎಂದೇ ಕರೆಯಲಾಗುವ ಜರ್ಮನಿಯ ಡಾ.ಗಾಟ್ಲೀಬ್ ಹೇಬರ್ಲ್ಯಾಂಡ್ತ್ ಅವರ ಶಿಲ್ಪ ಜರ್ಮನಿ ಬಿಟ್ಟರೆ ಇಲ್ಲಿಯೇ ಇರುವುದು. `ಸಸ್ಯ ಅಂಗಾಂಶ ಕೃಷಿ ಪದ್ಧತಿ ಕುರಿತು ವಿಶ್ವದಲ್ಲಿ ಇರುವ ಏಕೈಕ ಥೀಮ್ ಪಾರ್ಕ್ ಇದು. ನಮ್ಮ ವಿಶ್ವವಿದ್ಯಾಲಯದ ಹೆಮ್ಮೆ~ ಎನ್ನುತ್ತಾರೆ ಡಾ.ಸತ್ಯನಾರಾಯಣ. <br /> <br /> ಎಲ್ಲ ಸಸ್ಯ ಕೋಶಗಳಿಗೆ ಸಂಪೂರ್ಣ ಗಿಡವಾಗಿ ಬೆಳೆಯುವ ಸಾಮರ್ಥ್ಯವನ್ನು ಇಲ್ಲಿರುವ ಶಿಲ್ಪವೊಂದು ಬಿಂಬಿಸುತ್ತದೆ. ರಾಜ್ಯದ ಅತ್ಯುತ್ತಮ ಶಿಲ್ಪಕಲಾಕೃತಿ ಎಂದು ಇದನ್ನು ಪರಿಗಣಿಸಲಾಗಿದ್ದು, ಕಲಾವಿದ ಜಗನ್ನಾಥ ಜಕ್ಕೇಪಲ್ಲಿ ಅವರು ಇದರ ನಿರ್ಮಾತೃ. <br /> <br /> ಅಪರೂಪದ ಶಿಲ್ಪಗಳನ್ನು ತನ್ನ ಒಡಲಲ್ಲಿ ಇಟ್ಟುಕೊಳ್ಳುವ ಮೂಲಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಬರೀ ಕೃಷಿ ಸಂಶೋಧನೆ ಹಾಗೂ ಬೋಧನೆಗಷ್ಟೇ ಅಲ್ಲದೇ ಇಂಥ ಪಾರ್ಕ್ನಿಂದಾಗಿಯೂ ಗಮನ ಸೆಳೆಯುತ್ತದೆ. ಬಿಡುವಾಗಿದ್ದಾಗ ನೀವೂ ಈ ಪಾರ್ಕ್ಗೆ ಭೇಟಿ ನೀಡಬಹುದು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>