<p><strong>ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ</strong></p>.<p><strong>ಬೆಂಗಳೂರು, ಸೆ. 2–</strong> ಆಸ್ತಿ ನೋಂದಾವಣಿಗೆ ಸಮಯದಲ್ಲಿ ಅವುಗಳ ಮಾರುಕಟ್ಟೆ ಮೌಲ್ಯ ಹಾಗೂ ಅದಕ್ಕೆ ಪಾವತಿ ಮಾಡಬೇಕಾದ ಮುದ್ರಾಂಕ ಮತ್ತು ನೋಂದಾವಣೆ ಶುಲ್ಕ ಪ್ರಮಾಣದ ಬಗ್ಗೆ ನೋಂದಾವಣೆ ಪೂರ್ವದಲ್ಲಿ ಕಡ್ಡಾಯವಾಗಿ ಹಿಂಬರಹ ನೀಡುವ ಹೊಸ ಪದ್ಧತಿಯು ಈ ತಿಂಗಳ ಐದರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ.</p>.<p>ಉಪ ನೋಂದಾವಣಾಧಿಕಾರಿಗಳಿಂದ ಆಸ್ತಿ ನೋಂದಾವಣೆ ಸಂಬಂಧದಲ್ಲಿ ಸಾರ್ವಜನಿಕರಿಗೆ ಕಿರುಕುಳ ಆಗದಂತೆ ಮಾಡಲು ಈ ಪದ್ಧತಿ ಜಾರಿಗೆ ತರಲಾಗುವುದು. ಈ ಪದ್ಧತಿ ಅನುಷ್ಠಾನಕ್ಕೆ ಬರುತ್ತಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇದರಿಂದ ಅರ್ಧದಷ್ಟು ಭ್ರಷ್ಟಾಚಾರ ತಪ್ಪುತ್ತದೆ ಎಂದು ಕಂದಾಯ ಸಚಿವ ಆರ್.ಎಲ್. ಜಾಲಪ್ಪ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಪಾಲಿಕೆ ಅಧಿಕಾರ ಪ್ರಶ್ನಿಸಿರುವ ಕೆಂಟಕಿ</strong></p>.<p>ಬೆಂಗಳೂರು, ಸೆ.2 – ತಾನು ಮಾರುತ್ತಿರುವ ಕೋಳಿಮಾಂಸ ಪದಾರ್ಥಗಳ ಎಂಎಸ್ಜಿ (ಮೋನೋಸೋಡಿಯಂ ಗ್ಲುಟಮೆಟ್) ರಾಸಾಯನಿಕ ಪ್ರಮಾಣವನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಅರ್ಹತೆಯನ್ನೇ ವಿವಾದಗ್ರಸ್ತ ಕೆಎಫ್ಸಿ (ಕೆಂಟಕಿ ಫ್ರೈಡ್ ಚಿಕನ್) ಪ್ರಶ್ನಿಸಿದೆ.</p>.<p>ಇದರಿಂದ ವಿವಾದಕ್ಕೆ ಈಗ ಹೊಸ ತಿರುವು ಬಂದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಸ್ತಿ ನೋಂದಣಿಗೆ ಹೊಸ ವ್ಯವಸ್ಥೆ</strong></p>.<p><strong>ಬೆಂಗಳೂರು, ಸೆ. 2–</strong> ಆಸ್ತಿ ನೋಂದಾವಣಿಗೆ ಸಮಯದಲ್ಲಿ ಅವುಗಳ ಮಾರುಕಟ್ಟೆ ಮೌಲ್ಯ ಹಾಗೂ ಅದಕ್ಕೆ ಪಾವತಿ ಮಾಡಬೇಕಾದ ಮುದ್ರಾಂಕ ಮತ್ತು ನೋಂದಾವಣೆ ಶುಲ್ಕ ಪ್ರಮಾಣದ ಬಗ್ಗೆ ನೋಂದಾವಣೆ ಪೂರ್ವದಲ್ಲಿ ಕಡ್ಡಾಯವಾಗಿ ಹಿಂಬರಹ ನೀಡುವ ಹೊಸ ಪದ್ಧತಿಯು ಈ ತಿಂಗಳ ಐದರಿಂದ ರಾಜ್ಯದಾದ್ಯಂತ ಜಾರಿಗೆ ಬರಲಿದೆ.</p>.<p>ಉಪ ನೋಂದಾವಣಾಧಿಕಾರಿಗಳಿಂದ ಆಸ್ತಿ ನೋಂದಾವಣೆ ಸಂಬಂಧದಲ್ಲಿ ಸಾರ್ವಜನಿಕರಿಗೆ ಕಿರುಕುಳ ಆಗದಂತೆ ಮಾಡಲು ಈ ಪದ್ಧತಿ ಜಾರಿಗೆ ತರಲಾಗುವುದು. ಈ ಪದ್ಧತಿ ಅನುಷ್ಠಾನಕ್ಕೆ ಬರುತ್ತಿರುವುದು ರಾಷ್ಟ್ರದಲ್ಲಿಯೇ ಪ್ರಪ್ರಥಮ. ಇದರಿಂದ ಅರ್ಧದಷ್ಟು ಭ್ರಷ್ಟಾಚಾರ ತಪ್ಪುತ್ತದೆ ಎಂದು ಕಂದಾಯ ಸಚಿವ ಆರ್.ಎಲ್. ಜಾಲಪ್ಪ ಅವರು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.</p>.<p><strong>ಪಾಲಿಕೆ ಅಧಿಕಾರ ಪ್ರಶ್ನಿಸಿರುವ ಕೆಂಟಕಿ</strong></p>.<p>ಬೆಂಗಳೂರು, ಸೆ.2 – ತಾನು ಮಾರುತ್ತಿರುವ ಕೋಳಿಮಾಂಸ ಪದಾರ್ಥಗಳ ಎಂಎಸ್ಜಿ (ಮೋನೋಸೋಡಿಯಂ ಗ್ಲುಟಮೆಟ್) ರಾಸಾಯನಿಕ ಪ್ರಮಾಣವನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಅರ್ಹತೆಯನ್ನೇ ವಿವಾದಗ್ರಸ್ತ ಕೆಎಫ್ಸಿ (ಕೆಂಟಕಿ ಫ್ರೈಡ್ ಚಿಕನ್) ಪ್ರಶ್ನಿಸಿದೆ.</p>.<p>ಇದರಿಂದ ವಿವಾದಕ್ಕೆ ಈಗ ಹೊಸ ತಿರುವು ಬಂದಂತಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>