<p><strong>ಅಂತರರಾಜ್ಯ ವಿವಾದ ಇತ್ಯರ್ಥಕ್ಕೆ ವಿಶೇಷ ನ್ಯಾಯಪೀಠ ರಚನೆ ಇಲ್ಲ</strong></p>.<p><strong>ನವದೆಹಲಿ, ಸೆ. 1– </strong>ಅಂತರರಾಜ್ಯ ಗಡಿ, ಜಲ ಮತ್ತು ವಿದ್ಯುಚ್ಛಕ್ತಿ ವಿವಾದಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ನ್ಯಾಯಪೀಠ ನೇಮಿಸಬೇಕೆಂಬ ಸಲಹೆಯೊಂದನ್ನು ರಾಜ್ಯಸಭೆಯಲ್ಲಿ ಇಂದು ಮಾಡಲಾಯಿತು.</p>.<p>ಗಡಿಗಳು, ನದಿ ನೀರು ಮತ್ತು ವಿದ್ಯುಚ್ಛಕ್ತಿಯ ಸಂಬಂಧದಲ್ಲಿ ರಾಜ್ಯಗಳ ನಡುವೆ ಇರುವ ವಿವಾದಗಳ ವಿಚಾರಣೆಗೆ ವಿಶೇಷ ನ್ಯಾಯಪೀಠವೊಂದನ್ನು ನೇಮಿಸಲು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಕೇಂದ್ರ ಕೇಳುವುದೇ ಎಂದು ಬಾಬೂಭಾಯಿ ಚಿನಾಯಿ ಅವರು ಪ್ರಶ್ನಿಸಿದರು.</p>.<p>ಗೃಹಖಾತೆಯ ಸ್ಟೇಟ್ ಸಚಿವ ಕೆ.ಸಿ.ಪಂತ್ ಈ ಪ್ರಶ್ನೆಗೆ ಉತ್ತರ ಕೊಡುತ್ತಾ ‘ಇಲ್ಲ’ ಎಂದರು.</p>.<p><strong>ರಾಜಧನ, ವಿಶೇಷ ಹಕ್ಕು ರದ್ದತಿಗೆ ದೃಢ ನಿರ್ಧಾರ</strong></p>.<p><strong>ನವದೆಹಲಿ, ಸೆ. 1–</strong> ಮಾಜಿ ದೊರೆಗಳ ರಾಜಧನ ಹಾಗೂ ವಿಶೇಷ ಸೌಲಭ್ಯಗಳನ್ನು ರದ್ದು ಮಾಡುವ ಸಂವಿಧಾನದ (ಇಪ್ಪತ್ನಾಲ್ಕನೇ ತಿದ್ದುಪಡಿ) ಮಸೂದೆಯನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಆಡಳಿತ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಾಮವಾದಿ ಸದಸ್ಯರ ಪ್ರಚಂಡ ಹರ್ಷೋದ್ಗಾರಗಳ ನಡುವೆ ಇಂದು ಲೋಕಸಭೆಯಲ್ಲಿ ಮಂಡಿಸಿದರು.</p>.<p>ನಮ್ಮ ಪ್ರಜಾಸತ್ತಾತ್ಮಕ ಸಂವಿಧಾನ, ಕಾಲಧರ್ಮ ಮತ್ತು ಬದಲಾದ ಪರಿಸ್ಥಿತಿಯ ಅವಶ್ಯಕತೆಗಳಿಗೆ ಹೊಂದಿಕೆಯಿಲ್ಲದಂತಹ ರಾಜಧನ ಹಾಗೂ ಅವರಿಗೆ ಇರುವ ವಿಶೇಷ ಸೌಲಭ್ಯಗಳನ್ನು ರದ್ದು ಮಾಡುವ ಸರ್ಕಾರದ ದೃಢ ಸಂಕಲ್ಪವನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಮಸೂದೆ ಮಂಡಿಸಿ ಮಾತನಾಡಿ ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂತರರಾಜ್ಯ ವಿವಾದ ಇತ್ಯರ್ಥಕ್ಕೆ ವಿಶೇಷ ನ್ಯಾಯಪೀಠ ರಚನೆ ಇಲ್ಲ</strong></p>.<p><strong>ನವದೆಹಲಿ, ಸೆ. 1– </strong>ಅಂತರರಾಜ್ಯ ಗಡಿ, ಜಲ ಮತ್ತು ವಿದ್ಯುಚ್ಛಕ್ತಿ ವಿವಾದಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟಿನಲ್ಲಿ ವಿಶೇಷ ನ್ಯಾಯಪೀಠ ನೇಮಿಸಬೇಕೆಂಬ ಸಲಹೆಯೊಂದನ್ನು ರಾಜ್ಯಸಭೆಯಲ್ಲಿ ಇಂದು ಮಾಡಲಾಯಿತು.</p>.<p>ಗಡಿಗಳು, ನದಿ ನೀರು ಮತ್ತು ವಿದ್ಯುಚ್ಛಕ್ತಿಯ ಸಂಬಂಧದಲ್ಲಿ ರಾಜ್ಯಗಳ ನಡುವೆ ಇರುವ ವಿವಾದಗಳ ವಿಚಾರಣೆಗೆ ವಿಶೇಷ ನ್ಯಾಯಪೀಠವೊಂದನ್ನು ನೇಮಿಸಲು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಕೇಂದ್ರ ಕೇಳುವುದೇ ಎಂದು ಬಾಬೂಭಾಯಿ ಚಿನಾಯಿ ಅವರು ಪ್ರಶ್ನಿಸಿದರು.</p>.<p>ಗೃಹಖಾತೆಯ ಸ್ಟೇಟ್ ಸಚಿವ ಕೆ.ಸಿ.ಪಂತ್ ಈ ಪ್ರಶ್ನೆಗೆ ಉತ್ತರ ಕೊಡುತ್ತಾ ‘ಇಲ್ಲ’ ಎಂದರು.</p>.<p><strong>ರಾಜಧನ, ವಿಶೇಷ ಹಕ್ಕು ರದ್ದತಿಗೆ ದೃಢ ನಿರ್ಧಾರ</strong></p>.<p><strong>ನವದೆಹಲಿ, ಸೆ. 1–</strong> ಮಾಜಿ ದೊರೆಗಳ ರಾಜಧನ ಹಾಗೂ ವಿಶೇಷ ಸೌಲಭ್ಯಗಳನ್ನು ರದ್ದು ಮಾಡುವ ಸಂವಿಧಾನದ (ಇಪ್ಪತ್ನಾಲ್ಕನೇ ತಿದ್ದುಪಡಿ) ಮಸೂದೆಯನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಆಡಳಿತ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ವಾಮವಾದಿ ಸದಸ್ಯರ ಪ್ರಚಂಡ ಹರ್ಷೋದ್ಗಾರಗಳ ನಡುವೆ ಇಂದು ಲೋಕಸಭೆಯಲ್ಲಿ ಮಂಡಿಸಿದರು.</p>.<p>ನಮ್ಮ ಪ್ರಜಾಸತ್ತಾತ್ಮಕ ಸಂವಿಧಾನ, ಕಾಲಧರ್ಮ ಮತ್ತು ಬದಲಾದ ಪರಿಸ್ಥಿತಿಯ ಅವಶ್ಯಕತೆಗಳಿಗೆ ಹೊಂದಿಕೆಯಿಲ್ಲದಂತಹ ರಾಜಧನ ಹಾಗೂ ಅವರಿಗೆ ಇರುವ ವಿಶೇಷ ಸೌಲಭ್ಯಗಳನ್ನು ರದ್ದು ಮಾಡುವ ಸರ್ಕಾರದ ದೃಢ ಸಂಕಲ್ಪವನ್ನು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಮಸೂದೆ ಮಂಡಿಸಿ ಮಾತನಾಡಿ ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>