ದೊಡ್ಡ ನಾಗಪ್ಪ, ಸಣ್ಣ ನಾಗಪ್ಪ, ಪರಶುರಾಮ ಮತ್ತು ದೇವೇಂದ್ರಪ್ಪ ಅವರು ತಲೆಗೆ ರುಮಾಲು, ಹಣೆಗೆ ಕುಂಕುಮ, ಹೆಗಲಿಗೆ ವಲ್ಲಿ ಹಾಕಿ, ಬಲಗೈ ಹೆಬ್ಬೆರಳಿಗೆ ಹಣೆಗೆಜ್ಜೆ, ಬಗಲಿಗೆ ಜೋಳಿಗೆ ನೇತು ಹಾಕಿಕೊಂಡು ತಮ್ಮದೇ ಶೈಲಿಯಲ್ಲಿ ಜನರಿಗೆ ಮೋಡಿ ಹಾಕುತ್ತಾ ಕೈಯಲ್ಲಿದ್ದ ಪುಟ್ಟ ಡಮರುಗ ಆಕೃತಿಯ ಚರ್ಮವಾದ್ಯದಿಂದ(ಬುಡಬುಡಿಕೆ) ಬುಡು ಬುಡು ನಾದ ಹೊಮ್ಮಿಸಿ ‘ಕೆಂಪು ಕುದುರೆ ಹಾರುತ್ತದೆ (ಬೆಂಕಿ ಅನಾಹುತ ಸಂಭವಿಸುತ್ತದೆ), ತುಂಬಿದ ಕೊಡ ತುಳುಕುತ್ತದೆ (ತುಂಬಿದ ಗರ್ಭಿಣಿ ಆಕಸ್ಮಿಕ ಸಾವು ಕಾಣುತ್ತಾಳೆ), ನಡು ಅಗಸಿ ಮುಂದೆ ಓಕುಳಿ ಆಗುತ್ತೆ(ಊರಲ್ಲಿ ಜಗಳ ಮಾರಾಮರಿ ನಡೆಯುತ್ತದೆ) ಎನ್ನುವ ಶಕುನವನ್ನು ತಮ್ಮದೇ ಶೈಲಿಯಲ್ಲಿ ಹೇಳುತ್ತಾರೆ.