<p><strong>ಬಳ್ಳಾರಿ:</strong> ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರೆಗೆ ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸಾ ವಿಭಾಗಗಳು ಮಂಗಳವಾರ ಬಂದ್ ಆಗಿದ್ದರೂ ಹೆಚ್ಚಿನ ಪರಿಣಾಮವನ್ನು ಬೀರಲಿಲ್ಲ.</p>.<p>ಚಿಕಿತ್ಸೆ ದೊರಕಲಿಲ್ಲ ಎಂಬ ಕಾರಣಕ್ಕೆ ವಿಮ್ಸ್ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚು ರೋಗಿಗಳೂ ಕಂಡು ಬರಲಿಲ್ಲ. ಈ ಎರಡೂ ಆಸ್ಪತ್ರೆಗಳು ಎಂದಿನಂತೆಯೇ ಕಂಡುಬಂದವು.</p>.<p>ಗಡಿಗಿ ಚೆನ್ನಪ್ಪ ವೃತ್ತದ ಸುತ್ತ ಹೆಚ್ಚು ಆಸ್ಪತ್ರೆಗಳು ಇದ್ದು ಅವೆಲ್ಲವೂ ಬಂದ್ ಆಗಿತ್ತು. ನಗರದ ಗಾಂಧೀನಗರ, ಹೊಸಪೇಟೆ ರಸ್ತೆ. ಸತ್ಯನಾರಾಯಣಪೇಟೆ ಪ್ರದೇಶದಲ್ಲಿ ಖಾಸಗಿ ನರ್ಸಿಂಗ್ ಹೋಂಗಳಲ್ಲೂ ಘಟಕಗಳು ಮುಚ್ಚಿದ್ದವು. ಎಲ್ಲೆಡೆ ‘ಹೊರರೋಗಿ ಚಿಕಿತ್ಸೆ ಸೇವೆ ಇಂದು ಇಲ್ಲ’ ಎಂಬ ಫಲಕವನ್ನು ಪ್ರದರ್ಶಿಸಲಾಗಿತ್ತು.</p>.<p>ಜ್ವರ ಸಲುವಾಗಿ ಚಿಕಿತ್ಸೆ ಪಡೆಯಲು ನಗರದ ಬಿಕೆಎಸ್ ಆಸ್ಪತ್ರೆಗೆ ಬಂದಿದ್ದ ಮೋಕಾ ಗ್ರಾಮದ ಮಹಿಳೆಯೊಬ್ಬರು ಚಿಕಿತ್ಸೆ ದೊರಕದೇ ಆವರಣದಲ್ಲೇ ಕೊಂಚ ಕಾಲ ವಿಶ್ರಾಂತಿ ಪಡೆದು ತೆರಳಿದರು. ವೈದ್ಯರ ಮುಷ್ಕರ ಇರುವ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿದರು.</p>.<p><strong>ಔಷಧ ಅಂಗಡಿ: </strong>ಖಾಸಗಿ ಆಸ್ಪತ್ರೆಗಳ ಮುಷ್ಕರದ ಲಾಭವನ್ನು ಔಷಧದ ಅಂಗಡಿಗಳ ಮಂದಿ ಪಡೆದುಕೊಂಡಿದ್ದು ಗಮನ ಸೆಳೆಯಿತು. ಸಣ್ಣ–ಪುಟ್ಟ ಕಾಯಿಲೆಗಳುಳ್ಳವರು ಅಂಗಡಿಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ತಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಿ ಅವರಿಂದಲೇ ಔಷಧಿಗಳನ್ನು ಪಡೆದಿದ್ದು ಕಂಡುಬಂತು.</p>.<p>ಕನಕದುರ್ಗಮ್ಮ ಗುಡಿ ವೃತ್ತದ ಔಷಧ ಅಂಗಡಿಯೊಂದರ ಸಿಬ್ಬಂದಿ ಪ್ರತಿಕ್ರಿಯಿಸಿ, ‘ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಿದೆ. ಇಂಥ ಸಂದರ್ಭ ನಮಗೆ ತೋಚಿದ ಔಷಧಿ ಕೊಡುವುದು ಅನಿವಾರ್ಯ’ ಎಂದರು.</p>.<p>ಒಂದೇ ದಿನ ಬಿಡಿ: ‘ಮುಷ್ಕರ ಇರೋದು ಒಂದೇ ದಿನವಲ್ಲವೇ. ಅದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಎಂದಿನಂತೆ ನಾಳೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ’ ಎಂದು ಹಿರಿಯ ನಾಗರಿಕರಾದ ಬಂಡಿಹಟ್ಟಿ ರಮೇಶಪ್ಪ ಹೇಳಿದರು.</p>.<p>* * </p>.<p>ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದರಿಂದ ರೋಗಿಗಳ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ಎಂದಿನಂತೆ ಎಲ್ಲ ವಿಭಾಗಗಳ ವೈದ್ಯರು ಕಾರ್ಯನಿರ್ವಹಿಸಿದರು.<br /> <strong>ಡಾ.ಮರಿರಾಜ </strong>ವಿಮ್ಸ್ ವೈದ್ಯಕೀಯ ಅಧೀಕ್ಷಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ಥಾಪನೆಯನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘದ ಕರೆಗೆ ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಹೊರರೋಗಿ ಚಿಕಿತ್ಸಾ ವಿಭಾಗಗಳು ಮಂಗಳವಾರ ಬಂದ್ ಆಗಿದ್ದರೂ ಹೆಚ್ಚಿನ ಪರಿಣಾಮವನ್ನು ಬೀರಲಿಲ್ಲ.</p>.<p>ಚಿಕಿತ್ಸೆ ದೊರಕಲಿಲ್ಲ ಎಂಬ ಕಾರಣಕ್ಕೆ ವಿಮ್ಸ್ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಎಂದಿಗಿಂತ ಹೆಚ್ಚು ರೋಗಿಗಳೂ ಕಂಡು ಬರಲಿಲ್ಲ. ಈ ಎರಡೂ ಆಸ್ಪತ್ರೆಗಳು ಎಂದಿನಂತೆಯೇ ಕಂಡುಬಂದವು.</p>.<p>ಗಡಿಗಿ ಚೆನ್ನಪ್ಪ ವೃತ್ತದ ಸುತ್ತ ಹೆಚ್ಚು ಆಸ್ಪತ್ರೆಗಳು ಇದ್ದು ಅವೆಲ್ಲವೂ ಬಂದ್ ಆಗಿತ್ತು. ನಗರದ ಗಾಂಧೀನಗರ, ಹೊಸಪೇಟೆ ರಸ್ತೆ. ಸತ್ಯನಾರಾಯಣಪೇಟೆ ಪ್ರದೇಶದಲ್ಲಿ ಖಾಸಗಿ ನರ್ಸಿಂಗ್ ಹೋಂಗಳಲ್ಲೂ ಘಟಕಗಳು ಮುಚ್ಚಿದ್ದವು. ಎಲ್ಲೆಡೆ ‘ಹೊರರೋಗಿ ಚಿಕಿತ್ಸೆ ಸೇವೆ ಇಂದು ಇಲ್ಲ’ ಎಂಬ ಫಲಕವನ್ನು ಪ್ರದರ್ಶಿಸಲಾಗಿತ್ತು.</p>.<p>ಜ್ವರ ಸಲುವಾಗಿ ಚಿಕಿತ್ಸೆ ಪಡೆಯಲು ನಗರದ ಬಿಕೆಎಸ್ ಆಸ್ಪತ್ರೆಗೆ ಬಂದಿದ್ದ ಮೋಕಾ ಗ್ರಾಮದ ಮಹಿಳೆಯೊಬ್ಬರು ಚಿಕಿತ್ಸೆ ದೊರಕದೇ ಆವರಣದಲ್ಲೇ ಕೊಂಚ ಕಾಲ ವಿಶ್ರಾಂತಿ ಪಡೆದು ತೆರಳಿದರು. ವೈದ್ಯರ ಮುಷ್ಕರ ಇರುವ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ಅವರು ಹೇಳಿದರು.</p>.<p><strong>ಔಷಧ ಅಂಗಡಿ: </strong>ಖಾಸಗಿ ಆಸ್ಪತ್ರೆಗಳ ಮುಷ್ಕರದ ಲಾಭವನ್ನು ಔಷಧದ ಅಂಗಡಿಗಳ ಮಂದಿ ಪಡೆದುಕೊಂಡಿದ್ದು ಗಮನ ಸೆಳೆಯಿತು. ಸಣ್ಣ–ಪುಟ್ಟ ಕಾಯಿಲೆಗಳುಳ್ಳವರು ಅಂಗಡಿಗಳಿಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ತಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಿ ಅವರಿಂದಲೇ ಔಷಧಿಗಳನ್ನು ಪಡೆದಿದ್ದು ಕಂಡುಬಂತು.</p>.<p>ಕನಕದುರ್ಗಮ್ಮ ಗುಡಿ ವೃತ್ತದ ಔಷಧ ಅಂಗಡಿಯೊಂದರ ಸಿಬ್ಬಂದಿ ಪ್ರತಿಕ್ರಿಯಿಸಿ, ‘ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗಿದೆ. ಇಂಥ ಸಂದರ್ಭ ನಮಗೆ ತೋಚಿದ ಔಷಧಿ ಕೊಡುವುದು ಅನಿವಾರ್ಯ’ ಎಂದರು.</p>.<p>ಒಂದೇ ದಿನ ಬಿಡಿ: ‘ಮುಷ್ಕರ ಇರೋದು ಒಂದೇ ದಿನವಲ್ಲವೇ. ಅದರಿಂದ ನಾವು ಕಳೆದುಕೊಳ್ಳುವುದು ಏನೂ ಇಲ್ಲ. ಎಂದಿನಂತೆ ನಾಳೆಯಿಂದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುತ್ತದೆ’ ಎಂದು ಹಿರಿಯ ನಾಗರಿಕರಾದ ಬಂಡಿಹಟ್ಟಿ ರಮೇಶಪ್ಪ ಹೇಳಿದರು.</p>.<p>* * </p>.<p>ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದರಿಂದ ರೋಗಿಗಳ ಸಂಖ್ಯೆಯೇನೂ ಹೆಚ್ಚಾಗಲಿಲ್ಲ. ಎಂದಿನಂತೆ ಎಲ್ಲ ವಿಭಾಗಗಳ ವೈದ್ಯರು ಕಾರ್ಯನಿರ್ವಹಿಸಿದರು.<br /> <strong>ಡಾ.ಮರಿರಾಜ </strong>ವಿಮ್ಸ್ ವೈದ್ಯಕೀಯ ಅಧೀಕ್ಷಕ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>