<p><strong>ನವದೆಹಲಿ: </strong>ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು (ಆರ್ಟಿಇ) ಕಾಯ್ದೆಯನ್ನು ಪ್ರೌಢ ಶಿಕ್ಷಣಕ್ಕೂ ವಿಸ್ತರಿಸಬೇಕು ಎಂಬ ಬೇಡಿಕೆ ಬಗ್ಗೆ ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ) ಈ ತಿಂಗಳು ಚರ್ಚಿಸಲಿದೆ.</p>.<p>ಪ್ರೌಢ ಶಿಕ್ಷಣವನ್ನೂ ಈ ಕಾಯ್ದೆಯ ವ್ಯಾಪ್ತಿಗೆ ತರಲು ಮಂಡಳಿಯ ಉಪಸಮಿತಿಯ ಸದಸ್ಯರು ಒಲವು ತೋರಿದ್ದಾರೆ.</p>.<p>ದೀರ್ಘಕಾಲದ ಈ ಬೇಡಿಕೆಯನ್ನು ಪರಿಶೀಲಿಸಿ ಮಂಡಳಿಗೆ ಸಲಹೆ ನೀಡುವುದಕ್ಕಾಗಿ ಉಪಸಮಿತಿಯನ್ನು ರಚಿಸಲಾಗಿತ್ತು.</p>.<p>ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸುವುದಕ್ಕಾಗಿ ಈ ವಾರದಲ್ಲಿ ಸಭೆ ಸೇರುವ ನಿರೀಕ್ಷೆ ಇದೆ.</p>.<p><strong>15ರಿಂದ ಸಭೆ:</strong> ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ ಎರಡು ದಿನಗಳ ಸಭೆ ಇದೇ 15ರಂದು ಆರಂಭವಾಗಲಿದೆ.</p>.<p>‘ನಮ್ಮಲ್ಲಿ ಹೆಚ್ಚಿನವರು ಈ ಬೇಡಿಕೆಯ ಪರವಾಗಿದ್ದೇವೆ. ಅಂತಿಮ ನಿರ್ಧಾರಕ್ಕಾಗಿ ವರದಿಯನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಮಂಡಿಸುತ್ತೇವೆ’ ಎಂದು ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸದ್ಯ, ಆರ್ಟಿಇ ಕಾಯ್ದೆಯ ಅಡಿಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ ಮಟ್ಟಗಳಲ್ಲಿ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ.</p>.<p>2011ರಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸಮಿತಿಯನ್ನು ಹಲವು ಬಾರಿ ಪುನರ್ ರಚಿಸಲಾಗಿದೆ.</p>.<p>23 ಸದಸ್ಯರ ಮೊದಲ ಸಮಿತಿಯನ್ನು 2011ರ ಜೂನ್ 7ರಂದು ರಚಿಸಲಾಗಿತ್ತು. ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಪುರಂದೇಶ್ವರಿ ಇದರ ಮುಖ್ಯಸ್ಥರಾಗಿದ್ದರು.</p>.<p>‘ದೇಶದ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯಗಳಿಗೆ ಸೇರಿದ ಪ್ರತಿ ಮಗುವೂ ಕನಿಷ್ಠ 10 ವರ್ಷಗಳವರೆಗೆ ಔಪಚಾರಿಕ ಶಿಕ್ಷಣ ಪಡೆಯಬೇಕು ಎಂಬ ಅಭಿಪ್ರಾಯ ಮಂಡಳಿ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಉದ್ದೇಶದಿಂದ ಸಮಿತಿ ರಚಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಆದರೆ, ಪುರಂದೇಶ್ವರಿ ನೇತೃತ್ವದ ಸಮಿತಿಗೆ ವರದಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. 2015ರ ಆಗಸ್ಟ್ 19ರಂದು ಮಂಡಳಿ ಸಭೆಯಲ್ಲಿ ಸಮಿತಿಯನ್ನು ಪುನರ್ ರಚಿಸಲು ತೀರ್ಮಾನಿಸಲಾಗಿತ್ತು. 2016ರ ಏಪ್ರಿಲ್ 14ರಂದು ಸಮಿತಿಯನ್ನು ಮತ್ತೆ ರಚಿಸಲಾಗಿತ್ತು.</p>.<p><strong>‘ಅಂತಿಮ ನಿರ್ಧಾರ ಸರ್ಕಾರದ್ದು’</strong></p>.<p>‘ಉಪ ಸಮಿತಿ ಮಾಡುವ ಶಿಫಾರಸುಗಳನ್ನು ಮಂಡಳಿಯು ಕೂಲಂಕಷವಾಗಿ ಪರಿಶೀಲಿಸಲಿದೆ. ನಂತರ ತನ್ನ ಅಭಿಪ್ರಾಯವನ್ನು ಸರ್ಕಾರದ ಮುಂದೆ ಅದು ಮಂಡಿಸಲಿದೆ. ಅಂತಿಮವಾಗಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ’ ಎಂದು ಅಧಿಕೃತ ಮೂಲಗಳು ಹೇಳಿವೆ.</p>.<p>ಹೊಸ ಪ್ರಸ್ತಾವನೆಯ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸು ಅಂದಾಜನ್ನು ಉಪಸಮಿತಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯುವ ಮಕ್ಕಳ ಹಕ್ಕು (ಆರ್ಟಿಇ) ಕಾಯ್ದೆಯನ್ನು ಪ್ರೌಢ ಶಿಕ್ಷಣಕ್ಕೂ ವಿಸ್ತರಿಸಬೇಕು ಎಂಬ ಬೇಡಿಕೆ ಬಗ್ಗೆ ಕೇಂದ್ರ ಶಿಕ್ಷಣ ಸಲಹಾ ಮಂಡಳಿ (ಸಿಎಬಿಇ) ಈ ತಿಂಗಳು ಚರ್ಚಿಸಲಿದೆ.</p>.<p>ಪ್ರೌಢ ಶಿಕ್ಷಣವನ್ನೂ ಈ ಕಾಯ್ದೆಯ ವ್ಯಾಪ್ತಿಗೆ ತರಲು ಮಂಡಳಿಯ ಉಪಸಮಿತಿಯ ಸದಸ್ಯರು ಒಲವು ತೋರಿದ್ದಾರೆ.</p>.<p>ದೀರ್ಘಕಾಲದ ಈ ಬೇಡಿಕೆಯನ್ನು ಪರಿಶೀಲಿಸಿ ಮಂಡಳಿಗೆ ಸಲಹೆ ನೀಡುವುದಕ್ಕಾಗಿ ಉಪಸಮಿತಿಯನ್ನು ರಚಿಸಲಾಗಿತ್ತು.</p>.<p>ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ನೇತೃತ್ವದ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸುವುದಕ್ಕಾಗಿ ಈ ವಾರದಲ್ಲಿ ಸಭೆ ಸೇರುವ ನಿರೀಕ್ಷೆ ಇದೆ.</p>.<p><strong>15ರಿಂದ ಸಭೆ:</strong> ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ನೇತೃತ್ವದಲ್ಲಿ ಕೇಂದ್ರ ಶಿಕ್ಷಣ ಸಲಹಾ ಮಂಡಳಿಯ ಎರಡು ದಿನಗಳ ಸಭೆ ಇದೇ 15ರಂದು ಆರಂಭವಾಗಲಿದೆ.</p>.<p>‘ನಮ್ಮಲ್ಲಿ ಹೆಚ್ಚಿನವರು ಈ ಬೇಡಿಕೆಯ ಪರವಾಗಿದ್ದೇವೆ. ಅಂತಿಮ ನಿರ್ಧಾರಕ್ಕಾಗಿ ವರದಿಯನ್ನು ಮಂಡಳಿಯ ಮುಂದಿನ ಸಭೆಯಲ್ಲಿ ಮಂಡಿಸುತ್ತೇವೆ’ ಎಂದು ಸಮಿತಿಯ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸದ್ಯ, ಆರ್ಟಿಇ ಕಾಯ್ದೆಯ ಅಡಿಯಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಿಕ್ಷಣ ಮಟ್ಟಗಳಲ್ಲಿ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಲಾಗುತ್ತಿದೆ.</p>.<p>2011ರಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸಮಿತಿಯನ್ನು ಹಲವು ಬಾರಿ ಪುನರ್ ರಚಿಸಲಾಗಿದೆ.</p>.<p>23 ಸದಸ್ಯರ ಮೊದಲ ಸಮಿತಿಯನ್ನು 2011ರ ಜೂನ್ 7ರಂದು ರಚಿಸಲಾಗಿತ್ತು. ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಪುರಂದೇಶ್ವರಿ ಇದರ ಮುಖ್ಯಸ್ಥರಾಗಿದ್ದರು.</p>.<p>‘ದೇಶದ ಯಾವುದೇ ಧರ್ಮ, ಜಾತಿ ಅಥವಾ ಸಮುದಾಯಗಳಿಗೆ ಸೇರಿದ ಪ್ರತಿ ಮಗುವೂ ಕನಿಷ್ಠ 10 ವರ್ಷಗಳವರೆಗೆ ಔಪಚಾರಿಕ ಶಿಕ್ಷಣ ಪಡೆಯಬೇಕು ಎಂಬ ಅಭಿಪ್ರಾಯ ಮಂಡಳಿ ಸಭೆಯಲ್ಲಿ ವ್ಯಕ್ತವಾಗಿತ್ತು. ಈ ಉದ್ದೇಶದಿಂದ ಸಮಿತಿ ರಚಿಸಲಾಗಿತ್ತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.</p>.<p>ಆದರೆ, ಪುರಂದೇಶ್ವರಿ ನೇತೃತ್ವದ ಸಮಿತಿಗೆ ವರದಿಯನ್ನು ಅಂತಿಮಗೊಳಿಸಲು ಸಾಧ್ಯವಾಗಿರಲಿಲ್ಲ. 2015ರ ಆಗಸ್ಟ್ 19ರಂದು ಮಂಡಳಿ ಸಭೆಯಲ್ಲಿ ಸಮಿತಿಯನ್ನು ಪುನರ್ ರಚಿಸಲು ತೀರ್ಮಾನಿಸಲಾಗಿತ್ತು. 2016ರ ಏಪ್ರಿಲ್ 14ರಂದು ಸಮಿತಿಯನ್ನು ಮತ್ತೆ ರಚಿಸಲಾಗಿತ್ತು.</p>.<p><strong>‘ಅಂತಿಮ ನಿರ್ಧಾರ ಸರ್ಕಾರದ್ದು’</strong></p>.<p>‘ಉಪ ಸಮಿತಿ ಮಾಡುವ ಶಿಫಾರಸುಗಳನ್ನು ಮಂಡಳಿಯು ಕೂಲಂಕಷವಾಗಿ ಪರಿಶೀಲಿಸಲಿದೆ. ನಂತರ ತನ್ನ ಅಭಿಪ್ರಾಯವನ್ನು ಸರ್ಕಾರದ ಮುಂದೆ ಅದು ಮಂಡಿಸಲಿದೆ. ಅಂತಿಮವಾಗಿ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ’ ಎಂದು ಅಧಿಕೃತ ಮೂಲಗಳು ಹೇಳಿವೆ.</p>.<p>ಹೊಸ ಪ್ರಸ್ತಾವನೆಯ ಅನುಷ್ಠಾನಕ್ಕೆ ಅಗತ್ಯವಿರುವ ಹಣಕಾಸು ಅಂದಾಜನ್ನು ಉಪಸಮಿತಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>