ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭೆಗೆ ಅಜರ್‌ಗೆ ಪ್ರವೇಶ ನಿರಾಕರಣೆ

Last Updated 8 ಜನವರಿ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಹಿರಿಯ ಕ್ರಿಕೆಟಿಗ ಮಹಮ್ಮದ್‌ ಅಜರುದ್ದೀನ್ ಅವರಿಗೆ ವಿಶೇಷ ಸಾಮಾನ್ಯ ಸಭೆಗೆ ಪ್ರವೇಶ ನಿರಾಕರಿಸಿದ ಹೈದರಾಬಾದ್‌ ಕ್ರಿಕೆಟ್ ಸಂಸ್ಥೆ (ಎಚ್‌ಸಿಎ) ಅಜರುದ್ದೀನ್ ಅವರ ಕೋಪಕ್ಕೆ ತುತ್ತಾಗಿದೆ.

ಅನಧಿಕೃತ ಕ್ರಿಕೆಟ್ ಸಂಸ್ಥೆಯೊಂದರ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಅಜರುದ್ದೀನ್ ಅವರಿಗೆ ‌ಸಭೆಗೆ ಪ್ರವೇಶ ನಿರಾಕರಿಸಲಾಗಿತ್ತು.

‘ಒಂದು ತಾಸಿಗೂ ಹೆಚ್ಚು ಕಾಲ ಹೊರಗೆ ಕಾಯುವಂತೆ ಮಾಡಿದರು. ಇದು ಅತ್ಯಂತ ಬೇಸರದ ವಿಷಯ. ಹೈದರಾಬಾದ್‌ಗಾಗಿ ಆಡಿದ್ದ ನಾನು ವರ್ಷಗಳ ಕಾಲ ಭಾರತ ತಂಡದ ನಾಯಕನೂ ಆಗಿದ್ದೆ. ಇಲ್ಲಿ ಸಂಸ್ಥೆಯ ನೇತೃತ್ವ ವಹಿಸುವವರಿಗೆ ಕ್ರಿಕೆಟ್ ಬಗ್ಗೆ ಏನೇನೂ ತಿಳಿದಿಲ್ಲ’ ಎಂದು ಅಜರುದ್ದೀನ್‌ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT