<p><strong>ಬೆಂಗಳೂರು: </strong>ನೋಂದಣಿ ಸಂಖ್ಯೆಯ ದೋಷಪೂರಿತ ಫಲಕವಿದ್ದ ಕಾರಣಕ್ಕೆ ಹಾಸನ ನಗರಸಭೆ ಆಯುಕ್ತರ ಕಾರಿಗೆ ನಗರದ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.</p>.<p>ಉತ್ತರ ಸಂಚಾರ ವಿಭಾಗದ ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಜಾಲಹಳ್ಳಿ, ಪೀಣ್ಯ ಹಾಗೂ ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿದರು.</p>.<p>ಅದೇ ವೇಳೆ ಆಯುಕ್ತರ ಕಾರು ತಡೆದು ತಪಾಸಣೆ ಮಾಡಿದರು. ನೋಂದಣಿ ಫಲಕದಲ್ಲಿ ಸಂಖ್ಯೆ ಜತೆಗೆ ‘ನಗರಸಭೆ ಹಾಸನ, ಪೌರಾಯುಕ್ತರು’ ಎಂದು ದೊಡ್ಡದಾಗಿ ಬರೆಸಲಾಗಿತ್ತು.</p>.<p>ಆ ಫಲಕದ ಛಾಯಾಚಿತ್ರ ತೆಗೆದುಕೊಂಡ ಪೊಲೀಸರು, ಕಾರಿನ ಚಾಲಕನ ಹೆಸರಿಗೆ ₹100 ದಂಡ ವಿಧಿಸಿದರು. ಜತೆಗೆ ಫಲಕ ತೆರವುಗೊಳಿಸಿ ಜಪ್ತಿ ಮಾಡಿದರು. ಹೊಸ ಫಲಕ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡಿ ಕಳುಹಿಸಿದರು.</p>.<p><strong>336 ಫಲಕ ತೆರವು:</strong> ಕಾರ್ಯಾಚರಣೆ ವೇಳೆಯಲ್ಲಿ 336 ಕಾರುಗಳ ಫಲಕಗಳನ್ನು ಪೊಲೀಸರು ತೆರವು ಮಾಡಿದರು.</p>.<p>ಬೆಂಗಳೂರು ಗ್ರಾಮಾಂತರ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ, ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್<br /> (ಎಂಎಸ್ಐಎಲ್) ನಿರ್ದೇಶಕ, ಶಿವಮೊಗ್ಗ–ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಕಾರುಗಳಿಗೆ ಅಳವಡಿಸಿದ್ದ ದೋಷಪೂರಿತ ಫಲಕಗಳನ್ನೂ ತೆರವು ಮಾಡಿ ಪೊಲೀಸರು ದಂಡ ಸಂಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ನೋಂದಣಿ ಸಂಖ್ಯೆಯ ದೋಷಪೂರಿತ ಫಲಕವಿದ್ದ ಕಾರಣಕ್ಕೆ ಹಾಸನ ನಗರಸಭೆ ಆಯುಕ್ತರ ಕಾರಿಗೆ ನಗರದ ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.</p>.<p>ಉತ್ತರ ಸಂಚಾರ ವಿಭಾಗದ ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಜಾಲಹಳ್ಳಿ, ಪೀಣ್ಯ ಹಾಗೂ ಆರ್.ಟಿ.ನಗರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿದರು.</p>.<p>ಅದೇ ವೇಳೆ ಆಯುಕ್ತರ ಕಾರು ತಡೆದು ತಪಾಸಣೆ ಮಾಡಿದರು. ನೋಂದಣಿ ಫಲಕದಲ್ಲಿ ಸಂಖ್ಯೆ ಜತೆಗೆ ‘ನಗರಸಭೆ ಹಾಸನ, ಪೌರಾಯುಕ್ತರು’ ಎಂದು ದೊಡ್ಡದಾಗಿ ಬರೆಸಲಾಗಿತ್ತು.</p>.<p>ಆ ಫಲಕದ ಛಾಯಾಚಿತ್ರ ತೆಗೆದುಕೊಂಡ ಪೊಲೀಸರು, ಕಾರಿನ ಚಾಲಕನ ಹೆಸರಿಗೆ ₹100 ದಂಡ ವಿಧಿಸಿದರು. ಜತೆಗೆ ಫಲಕ ತೆರವುಗೊಳಿಸಿ ಜಪ್ತಿ ಮಾಡಿದರು. ಹೊಸ ಫಲಕ ಹಾಕಿಕೊಳ್ಳುವಂತೆ ಎಚ್ಚರಿಕೆ ನೀಡಿ ಕಳುಹಿಸಿದರು.</p>.<p><strong>336 ಫಲಕ ತೆರವು:</strong> ಕಾರ್ಯಾಚರಣೆ ವೇಳೆಯಲ್ಲಿ 336 ಕಾರುಗಳ ಫಲಕಗಳನ್ನು ಪೊಲೀಸರು ತೆರವು ಮಾಡಿದರು.</p>.<p>ಬೆಂಗಳೂರು ಗ್ರಾಮಾಂತರ ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ, ತುಮಕೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ, ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್<br /> (ಎಂಎಸ್ಐಎಲ್) ನಿರ್ದೇಶಕ, ಶಿವಮೊಗ್ಗ–ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರ ಕಾರುಗಳಿಗೆ ಅಳವಡಿಸಿದ್ದ ದೋಷಪೂರಿತ ಫಲಕಗಳನ್ನೂ ತೆರವು ಮಾಡಿ ಪೊಲೀಸರು ದಂಡ ಸಂಗ್ರಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>