ದುಬೈ: 2021ರಲ್ಲಿ ನಡೆಯ ಬೇಕಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ತೆರಿಗೆ ವಿನಾಯಿತಿ ನೀಡಲು ಸರ್ಕಾರವು ಒಪ್ಪಿಗೆ ನೀಡದಿದ್ದರೆ, ಆತಿಥ್ಯ ವಹಿಸುವ ಅವಕಾಶವನ್ನು ಭಾರತ ಕಳೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಇದರ ಬೆನ್ನಲ್ಲೇ, ಇದೇ ಸಮಯದಲ್ಲಿ ಇತರೆ ರಾಷ್ಟ್ರಗಳಲ್ಲಿ ಟೂರ್ನಿಯನ್ನು ಆಯೋಜಿಸುವ ಸಂಬಂಧ ಐಸಿಸಿ ಸ್ಥಳ ಹುಡುಕಾಟ ಆರಂಭಿಸಿದೆ.