ನದಿ ಜಲವಿವಾದ ಇತ್ಯರ್ಥ: ಪ್ರಧಾನಿಯ ಅಂತಿಮ ಯತ್ನ
ಬೆಂಗಳೂರು, ಏ. 23– ಅಂತರರಾಜ್ಯ ನದಿ ನೀರು ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಮತ್ತೊಮ್ಮೆ ಪ್ರಯತ್ನ ಮಾಡಿರುವ ಕಾರಣ, ಕೃಷ್ಣಾ– ಗೋದಾವರಿ ನೀರು ವಿವಾದವನ್ನು ಪಂಚಾಯಿತಿಗೆ ಒಪ್ಪಿಸಬೇಕೆಂದು ಕೇಂದ್ರಕ್ಕೆ ನೋಟೀಸು ಕೊಡುವುದನ್ನು ರಾಜ್ಯ ಸರಕಾರ ಒಂದು ಅಥವಾ ಎರಡು ವಾರ ಮುಂದಕ್ಕೆ ಹಾಕಲು ನಿರ್ಧರಿಸಿದೆ.