<p><strong>ನದಿ ಜಲವಿವಾದ ಇತ್ಯರ್ಥ: ಪ್ರಧಾನಿಯ ಅಂತಿಮ ಯತ್ನ </strong><br /> ಬೆಂಗಳೂರು, ಏ. 23– ಅಂತರರಾಜ್ಯ ನದಿ ನೀರು ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಮತ್ತೊಮ್ಮೆ ಪ್ರಯತ್ನ ಮಾಡಿರುವ ಕಾರಣ, ಕೃಷ್ಣಾ– ಗೋದಾವರಿ ನೀರು ವಿವಾದವನ್ನು ಪಂಚಾಯಿತಿಗೆ ಒಪ್ಪಿಸಬೇಕೆಂದು ಕೇಂದ್ರಕ್ಕೆ ನೋಟೀಸು ಕೊಡುವುದನ್ನು ರಾಜ್ಯ ಸರಕಾರ ಒಂದು ಅಥವಾ ಎರಡು ವಾರ ಮುಂದಕ್ಕೆ ಹಾಕಲು ನಿರ್ಧರಿಸಿದೆ.</p>.<p>ಅಂತರರಾಜ್ಯ ನದಿ ನೀರು ವಿವಾದಗಳಿಗೆ ಸಂಬಂಧಪಟ್ಟ ಶಾಸನದ ರೀತ್ಯ ವಿವಾದವನ್ನು ಪಂಚಾಯಿತಿಗೆ ಹಾಕಬೇಕೆಂದು ಕೇಂದ್ರವನ್ನು ಒತ್ತಾಯ ಮಾಡುವ ನೋಟೀಸನ್ನು ಅಡ್ವೊಕೇಟ್ ಜನರಲ್ ಅವರು ಸಿದ್ಧಗೊಳಿಸಿದ್ದಾರೆ.</p>.<p><strong>ಉಸ್ತಾದ್ ಬಡೇಗುಲಾಂ ನಿಧನ </strong><br /> ಹೈದರಾಬಾದ್, ಏ. 23– ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಶ್ರೀ ಬಡೇ ಗುಲಾಂ ಆಲಿಖಾನ್ ಅವರು ಈ ರಾತ್ರಿ 10.55 ರಲ್ಲಿ ಇಲ್ಲಿ ನಿಧನರಾದರು.</p>.<p><strong>ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ: ಗೃಹ ಸಚಿವ ಮನವಿ</strong><br /> ಮಂಗಳೂರು, ಏ. 23– ‘ಕೋಮುವಾರು ವಿಷಯವನ್ನು ನಿವಾರಿಸಿ, ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ’ ಎಂದು ಗೃಹಸಚಿವ ಶ್ರೀ ಆರ್.ಎಂ. ಪಾಟೀಲರು ಇಂದು ಇಲ್ಲಿ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಕರೆಯಿತ್ತರು.</p>.<p>ಮಂಗಳೂರಿನಲ್ಲಿ ಅರಾಜಕತೆಯನ್ನು ಹತ್ತಿಕ್ಕಲು ಶಾಂತಿ ಸಮಿತಿ ನೀಡಿದ ಸಹಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಶಾಂತಿಸ್ಥಾಪನೆ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸರು, ಗೃಹರಕ್ಷಕ ದಳದವರು ನಿರ್ವಹಿಸಿದ ಪಾತ್ರ ಶ್ಲಾಘನೀಯವೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನದಿ ಜಲವಿವಾದ ಇತ್ಯರ್ಥ: ಪ್ರಧಾನಿಯ ಅಂತಿಮ ಯತ್ನ </strong><br /> ಬೆಂಗಳೂರು, ಏ. 23– ಅಂತರರಾಜ್ಯ ನದಿ ನೀರು ವಿವಾದದ ಇತ್ಯರ್ಥಕ್ಕೆ ಪ್ರಧಾನಿ ಶ್ರೀಮತಿ ಇಂದಿರಾ ಮತ್ತೊಮ್ಮೆ ಪ್ರಯತ್ನ ಮಾಡಿರುವ ಕಾರಣ, ಕೃಷ್ಣಾ– ಗೋದಾವರಿ ನೀರು ವಿವಾದವನ್ನು ಪಂಚಾಯಿತಿಗೆ ಒಪ್ಪಿಸಬೇಕೆಂದು ಕೇಂದ್ರಕ್ಕೆ ನೋಟೀಸು ಕೊಡುವುದನ್ನು ರಾಜ್ಯ ಸರಕಾರ ಒಂದು ಅಥವಾ ಎರಡು ವಾರ ಮುಂದಕ್ಕೆ ಹಾಕಲು ನಿರ್ಧರಿಸಿದೆ.</p>.<p>ಅಂತರರಾಜ್ಯ ನದಿ ನೀರು ವಿವಾದಗಳಿಗೆ ಸಂಬಂಧಪಟ್ಟ ಶಾಸನದ ರೀತ್ಯ ವಿವಾದವನ್ನು ಪಂಚಾಯಿತಿಗೆ ಹಾಕಬೇಕೆಂದು ಕೇಂದ್ರವನ್ನು ಒತ್ತಾಯ ಮಾಡುವ ನೋಟೀಸನ್ನು ಅಡ್ವೊಕೇಟ್ ಜನರಲ್ ಅವರು ಸಿದ್ಧಗೊಳಿಸಿದ್ದಾರೆ.</p>.<p><strong>ಉಸ್ತಾದ್ ಬಡೇಗುಲಾಂ ನಿಧನ </strong><br /> ಹೈದರಾಬಾದ್, ಏ. 23– ಖ್ಯಾತ ಹಿಂದೂಸ್ಥಾನಿ ಸಂಗೀತಗಾರ ಶ್ರೀ ಬಡೇ ಗುಲಾಂ ಆಲಿಖಾನ್ ಅವರು ಈ ರಾತ್ರಿ 10.55 ರಲ್ಲಿ ಇಲ್ಲಿ ನಿಧನರಾದರು.</p>.<p><strong>ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ: ಗೃಹ ಸಚಿವ ಮನವಿ</strong><br /> ಮಂಗಳೂರು, ಏ. 23– ‘ಕೋಮುವಾರು ವಿಷಯವನ್ನು ನಿವಾರಿಸಿ, ಮಂಗಳೂರಿನ ಒಳ್ಳೆಯ ಹೆಸರನ್ನು ಉಳಿಸಿಕೊಳ್ಳಿ’ ಎಂದು ಗೃಹಸಚಿವ ಶ್ರೀ ಆರ್.ಎಂ. ಪಾಟೀಲರು ಇಂದು ಇಲ್ಲಿ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಕರೆಯಿತ್ತರು.</p>.<p>ಮಂಗಳೂರಿನಲ್ಲಿ ಅರಾಜಕತೆಯನ್ನು ಹತ್ತಿಕ್ಕಲು ಶಾಂತಿ ಸಮಿತಿ ನೀಡಿದ ಸಹಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಸಚಿವರು, ಶಾಂತಿಸ್ಥಾಪನೆ ಕಾರ್ಯದಲ್ಲಿ ಜಿಲ್ಲಾಧಿಕಾರಿಗಳು, ಪೊಲೀಸರು, ಗೃಹರಕ್ಷಕ ದಳದವರು ನಿರ್ವಹಿಸಿದ ಪಾತ್ರ ಶ್ಲಾಘನೀಯವೆಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>