‘ಇದು ಭಾರತದಲ್ಲಿ ತೆಗೆಯಲಾದ ಚಿತ್ರವಲ್ಲ. ಬಾಂಗ್ಲಾದೇಶದ ರಾಜಧಾನಿ ಢಾಕಾದ ಸೋಭನ್ಬಾಗ್ ಮಸೀದಿಯಲ್ಲಿ ರಂಜಾನ್ ಮಾಸಾಚರಣೆ ವೇಳೆ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದ ಚಿತ್ರವದು. 2021ರ ಏಪ್ರಿಲ್ 30ರಂದು ದಿ ಗಾರ್ಡಿಯನ್ ಪತ್ರಿಕೆ ಈ ಚಿತ್ರವನ್ನು ಪ್ರಕಟಿಸಿತ್ತು. ಮುನೀರುಲ್ ಆಲಂ ಎಂಬುವವರು ಈ ಚಿತ್ರವನ್ನು ತೆಗೆದಿದ್ದಾರೆ. ಆದರೆ ಈ ಚಿತ್ರವನ್ನು ಬಳಸಿಕೊಂಡು, ಭಾರತದಲ್ಲಿ ಮುಸ್ಲಿಮರು ರಸ್ತೆ ಬಂದ್ ಮಾಡಿ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ’ ಎಂದು ದಿ ಲಾಜಿಕಲ್ ಇಂಡಿಯನ್,ಫ್ಯಾಕ್ಟ್ಚೆಕ್ಪ್ರಕಟಿಸಿದೆ.