<p><strong>ಬೆಂಗಳೂರು:</strong> ಹಂಪಿಯ ವಿಷ್ಣು ಮಂದಿರದ ಪರಿಸರದಲ್ಲಿನ ಕಲ್ಲಿನ ಕಂಬವೊಂದನ್ನು ಕೆಡವಿ ಹಾನಿ ಮಾಡಿದ ಕಿಡಿಗೇಡಿಗಳಿಂದಲೇ ದಂಡ ವಸೂಲಿ ಮಾಡಿಹಂಪಿ ಪುನರ್ ನಿರ್ಮಾಣ ಕಾರ್ಯ ನಡೆಸಲು ಹೊಸಪೇಟೆಯ ಜೆಎಂಎಫ್ಕೋರ್ಟ್ ಆದೇಶಿಸಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/bellary/hampi-monument-stone-damage-611611.html" target="_blank">ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್</a></p>.<p>ಹಂಪಿ ಸ್ಮಾರಕಕ್ಕೆ ಹಾನಿ ಮಾಡಿದ ನಾಲ್ವರು ಕಿಡಿಗೇಡಿಗಳಿಗೆ ತಲಾ ₹70,000 ದಂಡ ವಿಧಿಸಿರುವ ನ್ಯಾಯಾಧೀಶೆ ಪೂರ್ಣಿಮಾ ಯಾದವ್, ಅದೇ ಕಂಬಗಳನ್ನು ಯಥಾಸ್ಥಿತಿಯಲ್ಲಿರಿಸುವಂತೆ ಆದೇಶಿಸಿದ್ದರು.ಅಷ್ಟೇ ಅಲ್ಲದೆ ಮತ್ತೊಮ್ಮೆ ಈ ರೀತಿ ಕಿಡಿಗೇಡಿ ಕೃತ್ಯ ಪುನರಾರ್ತನೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಲು ಹೇಳಿದ್ದಾರೆ.</p>.<p><span style="color:#0000FF;"><strong>ಇದನ್ನೂ ಓದಿ</strong></span>:<a href="https://www.prajavani.net/stories/stateregional/hampi-monument-damage-police-613044.html" target="_blank">ಹಂಪಿ ಸ್ಮಾರಕಕ್ಕೆ ಹಾನಿ: ನಾಲ್ವರು ವಶಕ್ಕೆ</a></p>.<p>ದೇವಾಲಯದ ಕಂಬಗಳನ್ನು ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲಿಸುವುದಾಗಿ ಹೇಳಿದ ಈ ಯುವಕರು ₹2.8 ಲಕ್ಷ ದಂಡ ಪಾವತಿಸಿ ಬಂಧಮುಕ್ತರಾಗಿದ್ದಾರೆ.</p>.<p>ಮಧ್ಯಪ್ರದೇಶದ ಆಯುಷ್, ರಾಜಾ ಬಾಬು ಚೌಧರಿ, ಬಿಹಾರದ ರಾಜ್ ಆರ್ಯನ್ ಮತ್ತು ರಾಜೇಶ್ ಕುಮಾರ್ ಎಂಬ ಯುವಕರು ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಕಂಬವನ್ನು ಕೆಡವಿದ್ದರು.ಕಂಬವನ್ನು ಕೆಡವುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಫೆಬ್ರುವರಿ 7ರಂದು ಇವರನ್ನು ಬಂಧಿಸಲಾಗಿತ್ತು.</p>.<p>ಈ ಯುವಕರನ್ನು ಅದೇ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಎಸ್ಐ ಅಧಿಕಾರಿಗಳ ಸಮ್ಮುಖದಲ್ಲಿ ಆ ಕಂಬಗಳನ್ನು ಮತ್ತೆ ನಿಲ್ಲಿಸಲು ಹೇಳಲಾಗಿತ್ತು.ಇಂಥಾ ಕೃತ್ಯಕ್ಕೆ ಗರಿಷ್ಠ 2 ವರ್ಷ ಜೈಲು ಮತ್ತು 1 ಲಕ್ಷದ ವರೆಗೆ ದಂಡ ವಿಧಿಸಲಾಗುತ್ತದೆ.ತಪ್ಪಿತಸ್ಥರು ದಂಡ ಪಾಪತಿ ಮಾಡದೇ ಇದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ದಂಡ ಪಾವತಿ ಮಾಡಿ, ಕೆಡವಿದ ಕಂಬವನ್ನು ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲಿಸಿದ ನಂತರವೇ ಈ ಯುವಕರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿರುವುದಾಗಿ <a href="http://www.newindianexpress.com/states/karnataka/2019/feb/18/court-gets-hampi-vandals-to-re-erect-pillars-pay-fine-1940163.html" target="_blank">ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್</a> ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಹಂಪಿಯ ವಿಷ್ಣು ಮಂದಿರದ ಪರಿಸರದಲ್ಲಿನ ಕಲ್ಲಿನ ಕಂಬವೊಂದನ್ನು ಕೆಡವಿ ಹಾನಿ ಮಾಡಿದ ಕಿಡಿಗೇಡಿಗಳಿಂದಲೇ ದಂಡ ವಸೂಲಿ ಮಾಡಿಹಂಪಿ ಪುನರ್ ನಿರ್ಮಾಣ ಕಾರ್ಯ ನಡೆಸಲು ಹೊಸಪೇಟೆಯ ಜೆಎಂಎಫ್ಕೋರ್ಟ್ ಆದೇಶಿಸಿದೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/bellary/hampi-monument-stone-damage-611611.html" target="_blank">ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್</a></p>.<p>ಹಂಪಿ ಸ್ಮಾರಕಕ್ಕೆ ಹಾನಿ ಮಾಡಿದ ನಾಲ್ವರು ಕಿಡಿಗೇಡಿಗಳಿಗೆ ತಲಾ ₹70,000 ದಂಡ ವಿಧಿಸಿರುವ ನ್ಯಾಯಾಧೀಶೆ ಪೂರ್ಣಿಮಾ ಯಾದವ್, ಅದೇ ಕಂಬಗಳನ್ನು ಯಥಾಸ್ಥಿತಿಯಲ್ಲಿರಿಸುವಂತೆ ಆದೇಶಿಸಿದ್ದರು.ಅಷ್ಟೇ ಅಲ್ಲದೆ ಮತ್ತೊಮ್ಮೆ ಈ ರೀತಿ ಕಿಡಿಗೇಡಿ ಕೃತ್ಯ ಪುನರಾರ್ತನೆ ಮಾಡುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಲು ಹೇಳಿದ್ದಾರೆ.</p>.<p><span style="color:#0000FF;"><strong>ಇದನ್ನೂ ಓದಿ</strong></span>:<a href="https://www.prajavani.net/stories/stateregional/hampi-monument-damage-police-613044.html" target="_blank">ಹಂಪಿ ಸ್ಮಾರಕಕ್ಕೆ ಹಾನಿ: ನಾಲ್ವರು ವಶಕ್ಕೆ</a></p>.<p>ದೇವಾಲಯದ ಕಂಬಗಳನ್ನು ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲಿಸುವುದಾಗಿ ಹೇಳಿದ ಈ ಯುವಕರು ₹2.8 ಲಕ್ಷ ದಂಡ ಪಾವತಿಸಿ ಬಂಧಮುಕ್ತರಾಗಿದ್ದಾರೆ.</p>.<p>ಮಧ್ಯಪ್ರದೇಶದ ಆಯುಷ್, ರಾಜಾ ಬಾಬು ಚೌಧರಿ, ಬಿಹಾರದ ರಾಜ್ ಆರ್ಯನ್ ಮತ್ತು ರಾಜೇಶ್ ಕುಮಾರ್ ಎಂಬ ಯುವಕರು ಹಂಪಿಯ ವಿಷ್ಣು ದೇವಾಲಯದ ಆವರಣದಲ್ಲಿರುವ ಕಂಬವನ್ನು ಕೆಡವಿದ್ದರು.ಕಂಬವನ್ನು ಕೆಡವುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಫೆಬ್ರುವರಿ 7ರಂದು ಇವರನ್ನು ಬಂಧಿಸಲಾಗಿತ್ತು.</p>.<p>ಈ ಯುವಕರನ್ನು ಅದೇ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಎಸ್ಐ ಅಧಿಕಾರಿಗಳ ಸಮ್ಮುಖದಲ್ಲಿ ಆ ಕಂಬಗಳನ್ನು ಮತ್ತೆ ನಿಲ್ಲಿಸಲು ಹೇಳಲಾಗಿತ್ತು.ಇಂಥಾ ಕೃತ್ಯಕ್ಕೆ ಗರಿಷ್ಠ 2 ವರ್ಷ ಜೈಲು ಮತ್ತು 1 ಲಕ್ಷದ ವರೆಗೆ ದಂಡ ವಿಧಿಸಲಾಗುತ್ತದೆ.ತಪ್ಪಿತಸ್ಥರು ದಂಡ ಪಾಪತಿ ಮಾಡದೇ ಇದ್ದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ದಂಡ ಪಾವತಿ ಮಾಡಿ, ಕೆಡವಿದ ಕಂಬವನ್ನು ಮತ್ತೆ ಯಥಾಸ್ಥಿತಿಯಲ್ಲಿ ನಿಲ್ಲಿಸಿದ ನಂತರವೇ ಈ ಯುವಕರನ್ನು ಬಂಧಮುಕ್ತಗೊಳಿಸಲಾಗಿದೆ ಎಂದು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿರುವುದಾಗಿ <a href="http://www.newindianexpress.com/states/karnataka/2019/feb/18/court-gets-hampi-vandals-to-re-erect-pillars-pay-fine-1940163.html" target="_blank">ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್</a> ವರದಿ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>