<p><strong>ಜೌನ್ಪುರ(ಉತ್ತರ ಪ್ರದೇಶ):</strong> 2005ರ ಶ್ರಮಜೀವಿ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಇಬ್ಬರನ್ನು ದೋಷಿ ಎಂದು ಆದೇಶಿಸಿದೆ.</p>.<p>ನಫಿಕುಲ್ ವಿಶ್ವಾಸ್ ಮತ್ತು ಹಿಲಾಲ್ ಅವರು ದೋಷಿಗಳೆಂದು ಆದೇಶಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ರಾಜೇಶ್ ರೈ, ಶಿಕ್ಷೆಯ ಪ್ರಮಾಣವನ್ನು 2024ರ ಜನವರಿ 2ರಂದು ಪ್ರಕಟಿಸಲಾಗುವುದು ಎಂದಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ವೀರೇಂದ್ರ ಮೌರ್ಯ ತಿಳಿಸಿದ್ದಾರೆ.</p>.<p>2005ರ ಜುಲೈ 28ರಂದು ಸಂಜೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಜೌನ್ಪುರ ರೈಲ್ವೆ ನಿಲ್ದಾಣದ ಬಳಿ ಪಾಟ್ನಾ–ನವದೆಹಲಿ ರೈಲಿನ ಕೋಚ್ನಲ್ಲಿ ಸ್ಫೋಟ ಸಂಭವಿಸಿ 14 ಜನರು ಮೃತಪಟ್ಟಿದ್ದರು ಹಾಗೂ 62 ಜನರು ಗಾಯಗೊಂಡಿದ್ದರು. ಸ್ಫೋಟಕ್ಕೆ ಆರ್ಡಿಎಕ್ಸ್ ಬಳಸಲಾಗಿತ್ತು.</p>.<p>‘ಜೌನ್ಪುರ ನಿಲ್ದಾಣದಲ್ಲಿ ಇಬ್ಬರು ಯುವಕರು ರೈಲು ಹತ್ತಿದ್ದರು. ಅವರ ಬಳಿ ಬಿಳಿಯ ಸೂಟ್ಕೇಸ್ ಇತ್ತು. ಕೆಲವೇ ಸಮಯದ ಬಳಿಕ ಅವರಿಬ್ಬರೂ ಚಲಿಸುತ್ತಿದ್ದ ರೈಲಿನಿಂದ ಹಾರಿ ಓಡಿ ಹೋದರು. ಆಗ ಅವರ ಬಳಿ ಸೂಟ್ಕೇಸ್ ಇರಲಿಲ್ಲ’ ಎಂದು ಸಾಕ್ಷಿಗಳು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೌನ್ಪುರ(ಉತ್ತರ ಪ್ರದೇಶ):</strong> 2005ರ ಶ್ರಮಜೀವಿ ಎಕ್ಸ್ಪ್ರೆಸ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯವು ಇಬ್ಬರನ್ನು ದೋಷಿ ಎಂದು ಆದೇಶಿಸಿದೆ.</p>.<p>ನಫಿಕುಲ್ ವಿಶ್ವಾಸ್ ಮತ್ತು ಹಿಲಾಲ್ ಅವರು ದೋಷಿಗಳೆಂದು ಆದೇಶಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ರಾಜೇಶ್ ರೈ, ಶಿಕ್ಷೆಯ ಪ್ರಮಾಣವನ್ನು 2024ರ ಜನವರಿ 2ರಂದು ಪ್ರಕಟಿಸಲಾಗುವುದು ಎಂದಿದ್ದಾರೆ ಎಂದು ಜಿಲ್ಲಾ ಸರ್ಕಾರಿ ವಕೀಲ ವೀರೇಂದ್ರ ಮೌರ್ಯ ತಿಳಿಸಿದ್ದಾರೆ.</p>.<p>2005ರ ಜುಲೈ 28ರಂದು ಸಂಜೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಜೌನ್ಪುರ ರೈಲ್ವೆ ನಿಲ್ದಾಣದ ಬಳಿ ಪಾಟ್ನಾ–ನವದೆಹಲಿ ರೈಲಿನ ಕೋಚ್ನಲ್ಲಿ ಸ್ಫೋಟ ಸಂಭವಿಸಿ 14 ಜನರು ಮೃತಪಟ್ಟಿದ್ದರು ಹಾಗೂ 62 ಜನರು ಗಾಯಗೊಂಡಿದ್ದರು. ಸ್ಫೋಟಕ್ಕೆ ಆರ್ಡಿಎಕ್ಸ್ ಬಳಸಲಾಗಿತ್ತು.</p>.<p>‘ಜೌನ್ಪುರ ನಿಲ್ದಾಣದಲ್ಲಿ ಇಬ್ಬರು ಯುವಕರು ರೈಲು ಹತ್ತಿದ್ದರು. ಅವರ ಬಳಿ ಬಿಳಿಯ ಸೂಟ್ಕೇಸ್ ಇತ್ತು. ಕೆಲವೇ ಸಮಯದ ಬಳಿಕ ಅವರಿಬ್ಬರೂ ಚಲಿಸುತ್ತಿದ್ದ ರೈಲಿನಿಂದ ಹಾರಿ ಓಡಿ ಹೋದರು. ಆಗ ಅವರ ಬಳಿ ಸೂಟ್ಕೇಸ್ ಇರಲಿಲ್ಲ’ ಎಂದು ಸಾಕ್ಷಿಗಳು ಹೇಳಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>