<p><strong>ಗ್ವಾಲಿಯರ್:</strong> ಕುಟುಂಬದವರು ನೋಡಿದ ವರನನ್ನು ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಆಕೆಯ ತಂದೆ ಹಾಗೂ ಸೋದರ ಸಂಬಂಧಿ ಸೇರಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.</p>.ಆರು ವರ್ಷದ ಮಗು ಮೇಲೆ ಅತ್ಯಾಚಾರ ಎಸಗಿ ಕೊಲೆ: ಬಿಹಾರದ ಆರೋಪಿ ಬಂಧನ.<p>ಮಂಗಳವಾರ ರಾತ್ರಿ ಗೋಲಾ ಕಾ ಮಂದಿರ್ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ಸಿಂಗ್ ಸಿಕರ್ವರ್ ತಿಳಿಸಿದ್ದಾರೆ. ತನು ಗುರ್ಜರ್ (20) ಕೊಲೆಯಾದ ಮಹಿಳೆ.</p><p>ಕುಟುಂಬಸ್ಥರು ತೋರಿಸಿದ ವರನೊಂದಿಗೆ ತನು ಮದುವೆ ಜನವರಿ 18ರಂದು ನಿಗದಿಯಾಗಿತ್ತು. ಆದರೆ ಈ ಮದುವೆ ತನು ಅವರಿಗೆ ಇಷ್ಟವಿರಲಿಲ್ಲ. ಈ ಸಂಬಂಧ ತಂದೆಯೊಂದಿಗೆ ಜಗಳವಾಡಿದ್ದು, ಗಲಾಟೆ ತಾರಕಕ್ಕೇರಿ ತಂದೆ ನಾಡ ಬಂದೂಕಿನಿಂದ ಗುಂಡು ಹೊಡೆದಿದ್ದಾರೆ. ಸೋದರ ಸಂಬಂಧಿ ರಾಹುಲ್, ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಹಾಸನ: ಕಳ್ಳತನ ಮರೆಮಾಚಲು ಸ್ನೇಹಿತನ ಕೊಲೆ.<p>ಘಟನೆ ನಡೆದ ಕೂಡಲೇ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದು, ತಂದೆ ಮಹೇಶ್ ಸಿಂಗ್ ಗುರ್ಜರ್ (45) ಸ್ಥಳದಲ್ಲೇ ಪಿಸ್ತೂಲ್ ಹಿಡಿದೇ ನಿಂತಿದ್ದ. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. </p><p>ತನು ದೇಹಕ್ಕೆ ನಾಲ್ಕು ಗುಂಡುಗಳು ಹೊಕ್ಕಿದ್ದು, ರಾಹುಲ್ ಪತ್ತೆಗೆ ಬಲೆ ಬೀಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p> .ಜಾರ್ಖಂಡ್: ಗುಂಡಿಕ್ಕಿ ಸರ್ಕಾರಿ ಅಧಿಕಾರಿಯ ಕೊಲೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗ್ವಾಲಿಯರ್:</strong> ಕುಟುಂಬದವರು ನೋಡಿದ ವರನನ್ನು ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಆಕೆಯ ತಂದೆ ಹಾಗೂ ಸೋದರ ಸಂಬಂಧಿ ಸೇರಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ನಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.</p>.ಆರು ವರ್ಷದ ಮಗು ಮೇಲೆ ಅತ್ಯಾಚಾರ ಎಸಗಿ ಕೊಲೆ: ಬಿಹಾರದ ಆರೋಪಿ ಬಂಧನ.<p>ಮಂಗಳವಾರ ರಾತ್ರಿ ಗೋಲಾ ಕಾ ಮಂದಿರ್ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನಾಗೇಂದ್ರ ಸಿಂಗ್ ಸಿಕರ್ವರ್ ತಿಳಿಸಿದ್ದಾರೆ. ತನು ಗುರ್ಜರ್ (20) ಕೊಲೆಯಾದ ಮಹಿಳೆ.</p><p>ಕುಟುಂಬಸ್ಥರು ತೋರಿಸಿದ ವರನೊಂದಿಗೆ ತನು ಮದುವೆ ಜನವರಿ 18ರಂದು ನಿಗದಿಯಾಗಿತ್ತು. ಆದರೆ ಈ ಮದುವೆ ತನು ಅವರಿಗೆ ಇಷ್ಟವಿರಲಿಲ್ಲ. ಈ ಸಂಬಂಧ ತಂದೆಯೊಂದಿಗೆ ಜಗಳವಾಡಿದ್ದು, ಗಲಾಟೆ ತಾರಕಕ್ಕೇರಿ ತಂದೆ ನಾಡ ಬಂದೂಕಿನಿಂದ ಗುಂಡು ಹೊಡೆದಿದ್ದಾರೆ. ಸೋದರ ಸಂಬಂಧಿ ರಾಹುಲ್, ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.</p>.ಹಾಸನ: ಕಳ್ಳತನ ಮರೆಮಾಚಲು ಸ್ನೇಹಿತನ ಕೊಲೆ.<p>ಘಟನೆ ನಡೆದ ಕೂಡಲೇ ರಾಹುಲ್ ಸ್ಥಳದಿಂದ ಪರಾರಿಯಾಗಿದ್ದು, ತಂದೆ ಮಹೇಶ್ ಸಿಂಗ್ ಗುರ್ಜರ್ (45) ಸ್ಥಳದಲ್ಲೇ ಪಿಸ್ತೂಲ್ ಹಿಡಿದೇ ನಿಂತಿದ್ದ. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ. </p><p>ತನು ದೇಹಕ್ಕೆ ನಾಲ್ಕು ಗುಂಡುಗಳು ಹೊಕ್ಕಿದ್ದು, ರಾಹುಲ್ ಪತ್ತೆಗೆ ಬಲೆ ಬೀಸಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.</p> .ಜಾರ್ಖಂಡ್: ಗುಂಡಿಕ್ಕಿ ಸರ್ಕಾರಿ ಅಧಿಕಾರಿಯ ಕೊಲೆ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>