<p><strong>ಠಾಣೆ:</strong> ಪುಣೆ ಜಿಲ್ಲೆಯ ಇದ್ದಿಲು ತಯಾರಿಕಾ ಘಟಕದಲ್ಲಿ ಜೀತಕ್ಕೆ ದುಡಿಯುತ್ತಿದ್ದ 26 ಕಾರ್ಮಿಕರನ್ನು ಕುಟುಂಬ ಸಮೇತ ರಕ್ಷಿಸಲಾಗಿದೆ. ಒಟ್ಟು 48 ಮುಕ್ತಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.</p><p>ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಜೀತಕ್ಕೆ ದುಡಿಸುತ್ತಿದ್ದ ಸಯಾಜಿ ಬಂಡಾಲ್ಕರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p><p>ಪುಣೆ ಜಿಲ್ಲೆಯ ಇಂದಾಪುರ್ ತಹಸಿಲ್ನ ಗಿರ್ವಿ ಗ್ರಾಮದಲ್ಲಿ ಇದ್ದಿಲು ಘಟಕ ಇದ್ದು, ಪುರುಷರನ್ನು ಕಾಡಿನಿಂದ ಕಟ್ಟಿಗೆ ತರಲು ನಿಯೋಜಿಸಲಾಹಿತ್ತು. ಮಹಿಳೆಯರು ಮತ್ತು ಮಕ್ಕಳನ್ನು ಬಂಧನದಲ್ಲಿರಿಸಿ ಜಮೀನುಗಳಲ್ಲಿ ದುಡಿಸಲಾಗುತ್ತಿತ್ತು. </p><p>ಬಾಂಡಲ್ಕರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಬಂಧಿತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಇಂದಾಪುರ ತಹಸೀಲ್ದಾರ್ ಕಾರ್ಮಿಕರಿಗೆ ದಾಖಲೆಗಳನ್ನು ನೀಡಿ, ಅವರ ಬಂಧ ಮುಕ್ತಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಠಾಣೆ:</strong> ಪುಣೆ ಜಿಲ್ಲೆಯ ಇದ್ದಿಲು ತಯಾರಿಕಾ ಘಟಕದಲ್ಲಿ ಜೀತಕ್ಕೆ ದುಡಿಯುತ್ತಿದ್ದ 26 ಕಾರ್ಮಿಕರನ್ನು ಕುಟುಂಬ ಸಮೇತ ರಕ್ಷಿಸಲಾಗಿದೆ. ಒಟ್ಟು 48 ಮುಕ್ತಿಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.</p><p>ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಜೀತಕ್ಕೆ ದುಡಿಸುತ್ತಿದ್ದ ಸಯಾಜಿ ಬಂಡಾಲ್ಕರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p><p>ಪುಣೆ ಜಿಲ್ಲೆಯ ಇಂದಾಪುರ್ ತಹಸಿಲ್ನ ಗಿರ್ವಿ ಗ್ರಾಮದಲ್ಲಿ ಇದ್ದಿಲು ಘಟಕ ಇದ್ದು, ಪುರುಷರನ್ನು ಕಾಡಿನಿಂದ ಕಟ್ಟಿಗೆ ತರಲು ನಿಯೋಜಿಸಲಾಹಿತ್ತು. ಮಹಿಳೆಯರು ಮತ್ತು ಮಕ್ಕಳನ್ನು ಬಂಧನದಲ್ಲಿರಿಸಿ ಜಮೀನುಗಳಲ್ಲಿ ದುಡಿಸಲಾಗುತ್ತಿತ್ತು. </p><p>ಬಾಂಡಲ್ಕರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಬಂಧಿತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯಡಿಯಲ್ಲಿ ದೂರು ದಾಖಲಿಸಲಾಗಿದೆ. ಇಂದಾಪುರ ತಹಸೀಲ್ದಾರ್ ಕಾರ್ಮಿಕರಿಗೆ ದಾಖಲೆಗಳನ್ನು ನೀಡಿ, ಅವರ ಬಂಧ ಮುಕ್ತಗೊಳಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>