<p><strong>ಶಹಜಹಾನ್ಪುರ</strong> (ಉತ್ತರ ಪ್ರದೇಶ): ಗ್ರಾಮಸ್ಥರು ನಡೆಸಿದ ಕಲ್ಲು ತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡು, ಅವರ ವಾಹನಕ್ಕೆ ಹಾನಿಯಾಗಿರುವ ಘಟನೆ ಉತ್ತರ ಪ್ರದೇಶದ ಅಲ್ಹಾದ್ಪುರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.</p>.ಕಾಂಗ್ರೆಸ್ ನಾಯಕತ್ವದಲ್ಲಿ ದುರಹಂಕಾರ ತುಂಬಿದೆ: ಪಕ್ಷದ ಮಾಜಿ ಸಂಸದ ಸಂಜಯ್ ಕಿಡಿ.CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು. 'ಅಗ್ನಿ ಪ್ರೈಮ್' ಕ್ಷಿಪಣಿಯ ರಾತ್ರಿ ಉಡಾವಣೆ ಯಶಸ್ವಿ ಪ್ರಯೋಗ. <p>ಭೂವ್ಯಾಜ್ಯಕ್ಕೆ ಸಂಬಂಧಿಸಿದ ದೂರಿಗೆ ಸಂಬಂಧಿಸಿದಂತೆ ನಿಗೋಹಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಈ ಗ್ರಾಮಕ್ಕೆ ಪೊಲೀಸರು ಹೋಗಿದ್ದರು. ಆಗ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ತಿಳಿಸಿದ್ದಾರೆ.</p><p>ಭೂವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯವೊಂದು ದೂರುದಾರನ ಪರವಾಗಿ ತೀರ್ಪು ನೀಡಿತ್ತು. ಅದಾದ ಬಳಿಕ ಆ ವ್ಯಕ್ತಿಯು ಕಂದಾಯ ಇಲಾಖೆ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ವಿವಾದಿತ ಭೂಮಿಯಲ್ಲಿ ಕಲ್ಲುಗಳನ್ನು ಇರಿಸಿದ್ದರು. ಎದುರಾಳಿಗಳು ಈ ಕಲ್ಲುಗಳನ್ನು ತೆಗೆದಿದ್ದರು. ಪೊಲೀಸರು ಸ್ಥಳಕ್ಕೆ ಹೋಗುತ್ತಿದ್ದಂತೆ ಅವರತ್ತ ಕಲ್ಲುಗಳನ್ನು ಎಸೆಯಲು ಆರಂಭಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.</p><p>ಮಹಿಳೆಯರೂ ಸೇರಿ 14 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.ಮುಸ್ಲಿಂ ಲೀಗ್ ಬೆಂಬಲದ ಬಗ್ಗೆ ರಾಹುಲ್ಗೆ ಮುಜುಗರ: ಸ್ಮೃತಿ ಇರಾನಿ ಟೀಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಜಹಾನ್ಪುರ</strong> (ಉತ್ತರ ಪ್ರದೇಶ): ಗ್ರಾಮಸ್ಥರು ನಡೆಸಿದ ಕಲ್ಲು ತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡು, ಅವರ ವಾಹನಕ್ಕೆ ಹಾನಿಯಾಗಿರುವ ಘಟನೆ ಉತ್ತರ ಪ್ರದೇಶದ ಅಲ್ಹಾದ್ಪುರ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ಹೇಳಿದ್ದಾರೆ.</p>.ಕಾಂಗ್ರೆಸ್ ನಾಯಕತ್ವದಲ್ಲಿ ದುರಹಂಕಾರ ತುಂಬಿದೆ: ಪಕ್ಷದ ಮಾಜಿ ಸಂಸದ ಸಂಜಯ್ ಕಿಡಿ.CAR T-cell: ಕ್ಯಾನ್ಸರ್ ರೋಗಿಗಳಿಗೆ ಸ್ವದೇಶಿ ನಿರ್ಮಿತ ಅಗ್ಗದ ಚಿಕಿತ್ಸೆ– ಮುರ್ಮು. 'ಅಗ್ನಿ ಪ್ರೈಮ್' ಕ್ಷಿಪಣಿಯ ರಾತ್ರಿ ಉಡಾವಣೆ ಯಶಸ್ವಿ ಪ್ರಯೋಗ. <p>ಭೂವ್ಯಾಜ್ಯಕ್ಕೆ ಸಂಬಂಧಿಸಿದ ದೂರಿಗೆ ಸಂಬಂಧಿಸಿದಂತೆ ನಿಗೋಹಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಈ ಗ್ರಾಮಕ್ಕೆ ಪೊಲೀಸರು ಹೋಗಿದ್ದರು. ಆಗ ಈ ಘಟನೆ ನಡೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ತಿಳಿಸಿದ್ದಾರೆ.</p><p>ಭೂವ್ಯಾಜ್ಯ ಪ್ರಕರಣದಲ್ಲಿ ನ್ಯಾಯಾಲಯವೊಂದು ದೂರುದಾರನ ಪರವಾಗಿ ತೀರ್ಪು ನೀಡಿತ್ತು. ಅದಾದ ಬಳಿಕ ಆ ವ್ಯಕ್ತಿಯು ಕಂದಾಯ ಇಲಾಖೆ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ವಿವಾದಿತ ಭೂಮಿಯಲ್ಲಿ ಕಲ್ಲುಗಳನ್ನು ಇರಿಸಿದ್ದರು. ಎದುರಾಳಿಗಳು ಈ ಕಲ್ಲುಗಳನ್ನು ತೆಗೆದಿದ್ದರು. ಪೊಲೀಸರು ಸ್ಥಳಕ್ಕೆ ಹೋಗುತ್ತಿದ್ದಂತೆ ಅವರತ್ತ ಕಲ್ಲುಗಳನ್ನು ಎಸೆಯಲು ಆರಂಭಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.</p><p>ಮಹಿಳೆಯರೂ ಸೇರಿ 14 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.</p>.ಮುಸ್ಲಿಂ ಲೀಗ್ ಬೆಂಬಲದ ಬಗ್ಗೆ ರಾಹುಲ್ಗೆ ಮುಜುಗರ: ಸ್ಮೃತಿ ಇರಾನಿ ಟೀಕೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>