<p class="title"><strong>ನವದೆಹಲಿ:</strong> ಲಡಾಖ್ನ ಆಯಕಟ್ಟಿನ ಸ್ಥಳಗಳಲ್ಲಿ ಘರ್ಷಣೆಯನ್ನು ತಪ್ಪಿಸುವ ಸಂಬಂಧ ಭಾರತ ಮತ್ತು ಚೀನಾ ನಡುವಣ ಸೇನಾ ಹಂತದ 6ನೇ ಸುತ್ತಿನ ಮಾತುಕತೆ ಸುಮಾರು 14 ಗಂಟೆಗಳ ಕಾಲ ನಡೆದಿದೆ.</p>.<p class="title">ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಘರ್ಷಣೆ, ಉದ್ವಿಗ್ನ ಸ್ಥಿತಿಯನ್ನು ತಪ್ಪಿಸುವುದು ಚರ್ಚೆಯ ಕೇಂದ್ರವಾಗಿತ್ತು. ಸುದೀರ್ಘ ಮಾತುಕತೆಯ ಫಲಶ್ರುತಿ ಸದ್ಯಕ್ಕೆ ತಿಳಿದುಬಂದಿಲ್ಲ.</p>.<p class="title">ಆದರೆ, ಚರ್ಚೆ ಸಕಾರಾತ್ಮಕವಾಗಿದ್ದು, ಸಂಧಾನ ಮಾತುಕತೆಯನ್ನು ಇನ್ನಷ್ಟು ಮುಂದುವರಿಸಲು ಉಭಯ ಬಣಗಳು ತೀರ್ಮಾನಿಸಿವೆ ಎಂದು ಮಂಗಳವಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಚರ್ಚೆಯಲ್ಲಿ ಭಾರತೀಯ ನಿಯೋಗವು, ಆಯಕಟ್ಟಿನ ತಾಣಗಳಿಂದ ಚೀನಾ ತನ್ನ ಸೇನೆಯನ್ನು ಆದಷ್ಟು ಶೀಘ್ರ ಹಿಂಪಡೆಯಬೇಕು. ಸೇನೆ ಹಿಂಪಡೆಯುವ ನಿಟ್ಟಿನಲ್ಲಿ ಚೀನಾ ಮೊದಲ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿತು ಎಂದು ಮೂಲಗಳು ತಿಳಿಸಿವೆ.</p>.<p>ಉಭಯ ರಾಷ್ಟ್ರಗಳ ನಡುವೆ ಮಾಸ್ಕೊದಲ್ಲಿ ಆಗಿರುವ ಐದು ಅಂಶಗಳ ಒಪ್ಪಂದವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಭಾರತೀಯ ನಿಯೋಗ ಮನದಟ್ಟು ಮಾಡಿಕೊಟ್ಟಿತು.</p>.<p>ಅಲ್ಲದೆ, ನಿರ್ದಿಷ್ಟ ಕಾಲಮಿತಿಯಲ್ಲಿ ಒಡಂಬಡಿಕೆಯನ್ನು ಜಾರಿಗೊಳಿಸಲು ನಿಯೋಗ ಒತ್ತು ನೀಡಿತು. ಮಾಸ್ಕೊದಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಒ) ಶೃಂಗಸಭೆಯ ವೇಳೆ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯೀ ಅವರ ನಡುವೆ ಮಾತುಕತೆ ವೇಳೆ ಐದು ಅಂಶಗಳ ಒಪ್ಪಂದಕ್ಕೆ ಬರಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ:</strong> ಲಡಾಖ್ನ ಆಯಕಟ್ಟಿನ ಸ್ಥಳಗಳಲ್ಲಿ ಘರ್ಷಣೆಯನ್ನು ತಪ್ಪಿಸುವ ಸಂಬಂಧ ಭಾರತ ಮತ್ತು ಚೀನಾ ನಡುವಣ ಸೇನಾ ಹಂತದ 6ನೇ ಸುತ್ತಿನ ಮಾತುಕತೆ ಸುಮಾರು 14 ಗಂಟೆಗಳ ಕಾಲ ನಡೆದಿದೆ.</p>.<p class="title">ಚಳಿಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಘರ್ಷಣೆ, ಉದ್ವಿಗ್ನ ಸ್ಥಿತಿಯನ್ನು ತಪ್ಪಿಸುವುದು ಚರ್ಚೆಯ ಕೇಂದ್ರವಾಗಿತ್ತು. ಸುದೀರ್ಘ ಮಾತುಕತೆಯ ಫಲಶ್ರುತಿ ಸದ್ಯಕ್ಕೆ ತಿಳಿದುಬಂದಿಲ್ಲ.</p>.<p class="title">ಆದರೆ, ಚರ್ಚೆ ಸಕಾರಾತ್ಮಕವಾಗಿದ್ದು, ಸಂಧಾನ ಮಾತುಕತೆಯನ್ನು ಇನ್ನಷ್ಟು ಮುಂದುವರಿಸಲು ಉಭಯ ಬಣಗಳು ತೀರ್ಮಾನಿಸಿವೆ ಎಂದು ಮಂಗಳವಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಚರ್ಚೆಯಲ್ಲಿ ಭಾರತೀಯ ನಿಯೋಗವು, ಆಯಕಟ್ಟಿನ ತಾಣಗಳಿಂದ ಚೀನಾ ತನ್ನ ಸೇನೆಯನ್ನು ಆದಷ್ಟು ಶೀಘ್ರ ಹಿಂಪಡೆಯಬೇಕು. ಸೇನೆ ಹಿಂಪಡೆಯುವ ನಿಟ್ಟಿನಲ್ಲಿ ಚೀನಾ ಮೊದಲ ಹೆಜ್ಜೆ ಇಡಬೇಕು ಎಂದು ಒತ್ತಾಯಿಸಿತು ಎಂದು ಮೂಲಗಳು ತಿಳಿಸಿವೆ.</p>.<p>ಉಭಯ ರಾಷ್ಟ್ರಗಳ ನಡುವೆ ಮಾಸ್ಕೊದಲ್ಲಿ ಆಗಿರುವ ಐದು ಅಂಶಗಳ ಒಪ್ಪಂದವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಭಾರತೀಯ ನಿಯೋಗ ಮನದಟ್ಟು ಮಾಡಿಕೊಟ್ಟಿತು.</p>.<p>ಅಲ್ಲದೆ, ನಿರ್ದಿಷ್ಟ ಕಾಲಮಿತಿಯಲ್ಲಿ ಒಡಂಬಡಿಕೆಯನ್ನು ಜಾರಿಗೊಳಿಸಲು ನಿಯೋಗ ಒತ್ತು ನೀಡಿತು. ಮಾಸ್ಕೊದಲ್ಲಿ ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಒ) ಶೃಂಗಸಭೆಯ ವೇಳೆ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಚೀನಾದ ಸಚಿವ ವಾಂಗ್ ಯೀ ಅವರ ನಡುವೆ ಮಾತುಕತೆ ವೇಳೆ ಐದು ಅಂಶಗಳ ಒಪ್ಪಂದಕ್ಕೆ ಬರಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>