<p><strong>ಭುವನೇಶ್ವರ</strong>: ಭಾರತೀಯ ಜಲಸೀಮೆಗೆ ಪ್ರವೇಶಿಸಿ ಬಂಧನಕ್ಕೊಳಗಾಗಿರುವ 78 ಬಾಂಗ್ಲಾದೇಶಿ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ಒಡಿಶಾ ಪೊಲೀಸರು ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಹಲವು ತಪಾಸಣೆಗಳ ಬಳಿಕ ಅವರು ಬಾಂಗ್ಲಾದೇಶದ ಮೀನುಗಾರರೆಂದು ತಿಳಿದು ಬಂದಿದೆ ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರಾದೀಪ್ನ ಪೊಲೀಸ್ ಉಪವರಿಷ್ಠಾಧಿಕಾರಿ ಸಂತೋಷ್ ಜೆನಾ ತಿಳಿಸಿದ್ದಾರೆ.</p>.ಬಾಂಗ್ಲಾದೇಶ: ಬಿಎನ್ಪಿ ಬೆಂಬಲಿಗರಿಂದ ಪ್ರತಿಭಟನೆ.<p>ಇವರನ್ನು ಭಾರತೀಯ ಕರಾವಳಿ ಪಡೆ, ಒಡಿಶಾ ಪೊಲೀಸ್ನ ಅಪರಾಧ ಘಟಕ ಹಾಗೂ ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ವಿಚಾರಣೆಗೆ ಒಳಪಡಿಸಿದೆ.</p><p>ಭಾರತೀಯ ಕರಾವಳಿ ಕಾವಲು ಪಡೆ ಇವರನ್ನು ಬಂಧಿಸಿ ಪರಾದೀಪ್ ಪೊಲೀಸರಿಗೆ ಹಸ್ತಾಂತರಿಸಿತ್ತು.</p><p>ಇವರನ್ನು ಉಭಯ ರಾಷ್ಟ್ರಗಳ ಜಲಗಡಿಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಮೂಲಕ ಬಾಂಗ್ಲಾದೇಶದ ಕರಾವಳಿ ಪಡೆಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಬಂಧಿತರಲ್ಲಿ ರಾಜೀವ್ ಚಂದ್ರ ಸಿಲ್ ಹಾಗೂ ಆರ್. ಬಿಸ್ವಸ್ ತಮ್ಮ ಅನುಭವ ಹಂಚಿಕೊಂಡಿದ್ದು, ಭದ್ರತಾ ಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಆಹಾರ ಕೊಟ್ಟರು ಎಂದು ಹೇಳಿದರು.</p>.ಬಾಂಗ್ಲಾದೇಶ | ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ಅಮೆರಿಕ ಕಳವಳ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ</strong>: ಭಾರತೀಯ ಜಲಸೀಮೆಗೆ ಪ್ರವೇಶಿಸಿ ಬಂಧನಕ್ಕೊಳಗಾಗಿರುವ 78 ಬಾಂಗ್ಲಾದೇಶಿ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ಒಡಿಶಾ ಪೊಲೀಸರು ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.</p><p>ಹಲವು ತಪಾಸಣೆಗಳ ಬಳಿಕ ಅವರು ಬಾಂಗ್ಲಾದೇಶದ ಮೀನುಗಾರರೆಂದು ತಿಳಿದು ಬಂದಿದೆ ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರಾದೀಪ್ನ ಪೊಲೀಸ್ ಉಪವರಿಷ್ಠಾಧಿಕಾರಿ ಸಂತೋಷ್ ಜೆನಾ ತಿಳಿಸಿದ್ದಾರೆ.</p>.ಬಾಂಗ್ಲಾದೇಶ: ಬಿಎನ್ಪಿ ಬೆಂಬಲಿಗರಿಂದ ಪ್ರತಿಭಟನೆ.<p>ಇವರನ್ನು ಭಾರತೀಯ ಕರಾವಳಿ ಪಡೆ, ಒಡಿಶಾ ಪೊಲೀಸ್ನ ಅಪರಾಧ ಘಟಕ ಹಾಗೂ ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ವಿಚಾರಣೆಗೆ ಒಳಪಡಿಸಿದೆ.</p><p>ಭಾರತೀಯ ಕರಾವಳಿ ಕಾವಲು ಪಡೆ ಇವರನ್ನು ಬಂಧಿಸಿ ಪರಾದೀಪ್ ಪೊಲೀಸರಿಗೆ ಹಸ್ತಾಂತರಿಸಿತ್ತು.</p><p>ಇವರನ್ನು ಉಭಯ ರಾಷ್ಟ್ರಗಳ ಜಲಗಡಿಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಮೂಲಕ ಬಾಂಗ್ಲಾದೇಶದ ಕರಾವಳಿ ಪಡೆಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p><p>ಬಂಧಿತರಲ್ಲಿ ರಾಜೀವ್ ಚಂದ್ರ ಸಿಲ್ ಹಾಗೂ ಆರ್. ಬಿಸ್ವಸ್ ತಮ್ಮ ಅನುಭವ ಹಂಚಿಕೊಂಡಿದ್ದು, ಭದ್ರತಾ ಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಆಹಾರ ಕೊಟ್ಟರು ಎಂದು ಹೇಳಿದರು.</p>.ಬಾಂಗ್ಲಾದೇಶ | ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ: ಅಮೆರಿಕ ಕಳವಳ .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>