<p><strong>ದಾಂಗ್</strong>: ಮಧ್ಯ ಪ್ರದೇಶದಿಂದ ಯಾತ್ರಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಗುಜರಾತ್ನ ದಾಂಗ್ ಜಿಲ್ಲೆಯಲ್ಲಿ ಇಂದು (ಭಾನುವಾರ) ಮುಂಜಾನೆ ಕಮರಿಗೆ ಉರುಳಿದೆ. ಪರಿಣಾಮವಾಗಿ ಐವರು ಮೃತಪಟ್ಟು 35 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಗಾಯಗೊಂಡವರಲ್ಲಿ 17 ಜನರ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತರು, ದೇಶದ ವಿವಿಧ ರಾಜ್ಯಗಳ ಯಾತ್ರಾ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು ಎಂದಿದ್ದಾರೆ.</p><p>ಸಪುತಾರ ಹಿಲ್ ಸ್ಟೇಷನ್ ಸಮೀಪ, ಮುಂಜಾನೆ 4.15ರ ಹೊತ್ತಿಗೆ ದುರ್ಘಟನೆ ಸಂಭವಿಸಿದೆ. 48 ಯಾತ್ರಿಕರಿದ್ದ ಬಸ್, ಚಾಲಕನ ನಿಯಂತ್ರಣ ಕಳೆದುಕೊಂಡು 35 ಅಡಿ ಆಳದ ಕಮರಿಗೆ ಉರುಳಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಿ. ಪಾಟೀಲ್ ಮಾಹಿತಿ ನೀಡಿದ್ದಾರೆ.</p><p>ಈ ಬಸ್ಸು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಯಂಬಕೇಶ್ವರದಿಂದ ಗುಜರಾತ್ನ ದ್ವಾರಕಾದತ್ತ ರಾತ್ರಿ ಪ್ರಯಾಣ ಆರಂಭಿಸಿತ್ತು. ಹಿಲ್ ಸ್ಟೇಷನ್ನಿಂದ 2.5 ಕಿ.ಮೀ. ದೂರವಿರುವ ಸ್ಥಳದಲ್ಲಿ ಅಪಘಾತ ಸಂಭವಿಸುವುದಕ್ಕಿಂತ ಸ್ವಲ್ಪ ಮೊದಲು ಚಹಾ ಕುಡಿಯಲು ಬಸ್ ನಿಲ್ಲಿಸಲಾಗಿತ್ತು ಎಂದೂ ವಿವರಿಸಿದ್ದಾರೆ.</p><p>'ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 17 ಮಂದಿಯನ್ನು ಅಹ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ' ಎಂದು ತಿಳಿಸಿದ್ದಾರೆ.</p><p>ಮೃತರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಎನ್ನಲಾಗಿದೆ.</p><p>ಮಧ್ಯಪ್ರದೇಶದ ಯಾತ್ರಿಕರು, ನಾಲ್ಕು ಬಸ್ಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ಧಾರ್ಮಿಕ ಸ್ಥಳಗಳಿಗೆ 2024ರ ಡಿಸೆಂಬರ್ 23ರಂದು ಪ್ರವಾಸ ಆರಂಭಿಸಿದ್ದರು. ದುರದೃಷ್ಟವಶಾತ್ ಒಂದು ಬಸ್ ಕಮರಿಗೆ ಬಿದ್ದಿದೆ. ಬ್ರೇಕ್ ವೈಫಲ್ಯದಿಂದಾಗಿ ಹೀಗಾಗಿರಬಹುದು ಎಂದು ದಾಂಗ್ ಜಿಲ್ಲಾಧಿಕಾರಿ ಮಹೇಶ್ ಪಟೇಲ್ ಹೇಳಿದ್ದಾರೆ.</p><p>ಪ್ರಕರಣ ಕುರಿತು ಮಧ್ಯಪ್ರದೇಶದ ಗ್ವಾಲಿಯರ್ ವಲಯ ಐಜಿಪಿ ಅರವಿಂದ್ ಸಕ್ಸೇನಾ ಅವರೂ ಪ್ರತಿಕ್ರಿಯಿಸಿದ್ದಾರೆ. ಬಸ್ ಹೆಚ್ಚು ಜನರಿಂದ ತುಂಬಿತ್ತು ಎನ್ನುವಂತಹ ಸ್ಥಿತಿ ಏನೂ ಇರಲಿಲ್ಲ. 52 ಆಸನಗಳಿದ್ದ ಬಸ್ನಲ್ಲಿ 48 ಮಂದಿ ಇದ್ದರು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾಂಗ್</strong>: ಮಧ್ಯ ಪ್ರದೇಶದಿಂದ ಯಾತ್ರಿಕರನ್ನು ಹೊತ್ತು ಸಾಗುತ್ತಿದ್ದ ಬಸ್ ಗುಜರಾತ್ನ ದಾಂಗ್ ಜಿಲ್ಲೆಯಲ್ಲಿ ಇಂದು (ಭಾನುವಾರ) ಮುಂಜಾನೆ ಕಮರಿಗೆ ಉರುಳಿದೆ. ಪರಿಣಾಮವಾಗಿ ಐವರು ಮೃತಪಟ್ಟು 35 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.</p><p>ಗಾಯಗೊಂಡವರಲ್ಲಿ 17 ಜನರ ಸ್ಥಿತಿ ಗಂಭೀರವಾಗಿದೆ. ಸಂತ್ರಸ್ತರು, ದೇಶದ ವಿವಿಧ ರಾಜ್ಯಗಳ ಯಾತ್ರಾ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು ಎಂದಿದ್ದಾರೆ.</p><p>ಸಪುತಾರ ಹಿಲ್ ಸ್ಟೇಷನ್ ಸಮೀಪ, ಮುಂಜಾನೆ 4.15ರ ಹೊತ್ತಿಗೆ ದುರ್ಘಟನೆ ಸಂಭವಿಸಿದೆ. 48 ಯಾತ್ರಿಕರಿದ್ದ ಬಸ್, ಚಾಲಕನ ನಿಯಂತ್ರಣ ಕಳೆದುಕೊಂಡು 35 ಅಡಿ ಆಳದ ಕಮರಿಗೆ ಉರುಳಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಿ. ಪಾಟೀಲ್ ಮಾಹಿತಿ ನೀಡಿದ್ದಾರೆ.</p><p>ಈ ಬಸ್ಸು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಿಯಂಬಕೇಶ್ವರದಿಂದ ಗುಜರಾತ್ನ ದ್ವಾರಕಾದತ್ತ ರಾತ್ರಿ ಪ್ರಯಾಣ ಆರಂಭಿಸಿತ್ತು. ಹಿಲ್ ಸ್ಟೇಷನ್ನಿಂದ 2.5 ಕಿ.ಮೀ. ದೂರವಿರುವ ಸ್ಥಳದಲ್ಲಿ ಅಪಘಾತ ಸಂಭವಿಸುವುದಕ್ಕಿಂತ ಸ್ವಲ್ಪ ಮೊದಲು ಚಹಾ ಕುಡಿಯಲು ಬಸ್ ನಿಲ್ಲಿಸಲಾಗಿತ್ತು ಎಂದೂ ವಿವರಿಸಿದ್ದಾರೆ.</p><p>'ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 17 ಮಂದಿಯನ್ನು ಅಹ್ವಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ' ಎಂದು ತಿಳಿಸಿದ್ದಾರೆ.</p><p>ಮೃತರಲ್ಲಿ ಮೂವರು ಪುರುಷರು ಹಾಗೂ ಇಬ್ಬರು ಮಹಿಳೆಯರು ಎನ್ನಲಾಗಿದೆ.</p><p>ಮಧ್ಯಪ್ರದೇಶದ ಯಾತ್ರಿಕರು, ನಾಲ್ಕು ಬಸ್ಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿರುವ ಧಾರ್ಮಿಕ ಸ್ಥಳಗಳಿಗೆ 2024ರ ಡಿಸೆಂಬರ್ 23ರಂದು ಪ್ರವಾಸ ಆರಂಭಿಸಿದ್ದರು. ದುರದೃಷ್ಟವಶಾತ್ ಒಂದು ಬಸ್ ಕಮರಿಗೆ ಬಿದ್ದಿದೆ. ಬ್ರೇಕ್ ವೈಫಲ್ಯದಿಂದಾಗಿ ಹೀಗಾಗಿರಬಹುದು ಎಂದು ದಾಂಗ್ ಜಿಲ್ಲಾಧಿಕಾರಿ ಮಹೇಶ್ ಪಟೇಲ್ ಹೇಳಿದ್ದಾರೆ.</p><p>ಪ್ರಕರಣ ಕುರಿತು ಮಧ್ಯಪ್ರದೇಶದ ಗ್ವಾಲಿಯರ್ ವಲಯ ಐಜಿಪಿ ಅರವಿಂದ್ ಸಕ್ಸೇನಾ ಅವರೂ ಪ್ರತಿಕ್ರಿಯಿಸಿದ್ದಾರೆ. ಬಸ್ ಹೆಚ್ಚು ಜನರಿಂದ ತುಂಬಿತ್ತು ಎನ್ನುವಂತಹ ಸ್ಥಿತಿ ಏನೂ ಇರಲಿಲ್ಲ. 52 ಆಸನಗಳಿದ್ದ ಬಸ್ನಲ್ಲಿ 48 ಮಂದಿ ಇದ್ದರು ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>