ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರಿಗೆ ಜಾರಿ ನಿರ್ದೇಶನಾಲಯವು (ಇ.ಡಿ) ಹೊಸದಾಗಿ ಸಮನ್ಸ್ ನೀಡಿದ ಬೆನ್ನಲ್ಲೇ, ಅವರು ದೆಹಲಿಗೆ ಶನಿವಾರ ರಾತ್ರಿ ತೆರಳಿದ್ದಾರೆ. ಅವರ ದೆಹಲಿ ಭೇಟಿಯು ಪೂರ್ವನಿರ್ಧರಿತವಲ್ಲದ ಕಾರಣ ಈ ನಡೆಯು ಸಂಶಯಗಳಿಗೆ ಎಡೆಮಾಡಿದೆ.