<p><strong>ನವದೆಹಲಿ:</strong> ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಎಂದು ವಕೀಲರು ಹಾಗೂ ಪಕ್ಷಗಾರರಿಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.</p><p>ಭಾರಿ ಮಾಲಿನ್ಯದಿಂದಾಗಿ ದೆಹಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ಸೂಚಂಕ್ಯ (ಎಕ್ಯುಐ) 498 ದಾಖಲಾಗಿದೆ. ಇದು ತೀವ್ರ ಪ್ರಮಾಣದ ಮಾಲಿನ್ಯದ ಸೂಚಕ.</p>.ದೆಹಲಿ ವಾಯು ಮಾಲಿನ್ಯ ಪ್ರತಿಭಟನೆ| ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ: 15 ಜನರ ಬಂಧನ.<p>‘ಸದ್ಯದ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಧ್ಯವಾದರೆ ವಕೀಲರು / ಪಕ್ಷಗಾರರು, ಪಟ್ಟಿಯಾದ ಪ್ರಕರಣಗಳ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ’ ಎಂದು ಹೈಕೋರ್ಟ್ನ ರಿಜಿಸ್ಟ್ರಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p><p>ಇದೇ ರೀತಿಯ ನಿರ್ದೇಶನವನ್ನು ಭಾನುವಾರ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಕೂಡ ನೀಡಿದ್ದರು.</p><p>ಸದ್ಯ ಹೈಕೋರ್ಟ್ನ ಕಲಾಪಗಳಲ್ಲಿ ವ್ಯಕ್ತಿಗತವಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ಅವಕಾಶ ಇದೆ.</p>.ದೆಹಲಿ ವಾಯು ಮಾಲಿನ್ಯ: 5ನೇ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾದರಿಯಲ್ಲಿ ಪಾಠ.<p>ವಾಯು ಮಾಲಿನ್ಯ ನಿಗಾ ವಹಿಸುವ 38 ಕೇಂದ್ರಗಳಲ್ಲಿ ಸೋಮವಾರ ‘ಭಾರಿ ಕಳಪೆ’ ಗುಣಮಟ್ಟ ದಾಖಲಾಗಿದೆ. ವಾಯುಮಾಲಿನ್ಯ ನಿಗಾ ವಹಿಸುವ 40 ಕೇಂದ್ರಗಳ ಪೈಕಿ ಜಹಾಂಗೀರ್ಪುರಿಯಲ್ಲಿ 498 ಎಕ್ಯುಐ ದಾಖಲಾಗಿದೆ.</p><p>ವಿಷಪೂರಿತ ಗಾಳಿ ಸೇವನೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.</p>.ದೆಹಲಿ ಮಾಲಿನ್ಯ: ತಕ್ಷಣ ಕ್ರಮಕ್ಕೆ ಕೇಂದ್ರ,ರಾಜ್ಯ ಸರ್ಕಾರಕ್ಕೆ ಪ್ರಿಯಾಂಕಾ ಒತ್ತಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಎಂದು ವಕೀಲರು ಹಾಗೂ ಪಕ್ಷಗಾರರಿಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.</p><p>ಭಾರಿ ಮಾಲಿನ್ಯದಿಂದಾಗಿ ದೆಹಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ಸೂಚಂಕ್ಯ (ಎಕ್ಯುಐ) 498 ದಾಖಲಾಗಿದೆ. ಇದು ತೀವ್ರ ಪ್ರಮಾಣದ ಮಾಲಿನ್ಯದ ಸೂಚಕ.</p>.ದೆಹಲಿ ವಾಯು ಮಾಲಿನ್ಯ ಪ್ರತಿಭಟನೆ| ಪೊಲೀಸರ ಮೇಲೆ ಪೆಪ್ಪರ್ ಸ್ಪ್ರೇ: 15 ಜನರ ಬಂಧನ.<p>‘ಸದ್ಯದ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಧ್ಯವಾದರೆ ವಕೀಲರು / ಪಕ್ಷಗಾರರು, ಪಟ್ಟಿಯಾದ ಪ್ರಕರಣಗಳ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ’ ಎಂದು ಹೈಕೋರ್ಟ್ನ ರಿಜಿಸ್ಟ್ರಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.</p><p>ಇದೇ ರೀತಿಯ ನಿರ್ದೇಶನವನ್ನು ಭಾನುವಾರ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಕೂಡ ನೀಡಿದ್ದರು.</p><p>ಸದ್ಯ ಹೈಕೋರ್ಟ್ನ ಕಲಾಪಗಳಲ್ಲಿ ವ್ಯಕ್ತಿಗತವಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ಅವಕಾಶ ಇದೆ.</p>.ದೆಹಲಿ ವಾಯು ಮಾಲಿನ್ಯ: 5ನೇ ತರಗತಿವರೆಗಿನ ಮಕ್ಕಳಿಗೆ ಹೈಬ್ರಿಡ್ ಮಾದರಿಯಲ್ಲಿ ಪಾಠ.<p>ವಾಯು ಮಾಲಿನ್ಯ ನಿಗಾ ವಹಿಸುವ 38 ಕೇಂದ್ರಗಳಲ್ಲಿ ಸೋಮವಾರ ‘ಭಾರಿ ಕಳಪೆ’ ಗುಣಮಟ್ಟ ದಾಖಲಾಗಿದೆ. ವಾಯುಮಾಲಿನ್ಯ ನಿಗಾ ವಹಿಸುವ 40 ಕೇಂದ್ರಗಳ ಪೈಕಿ ಜಹಾಂಗೀರ್ಪುರಿಯಲ್ಲಿ 498 ಎಕ್ಯುಐ ದಾಖಲಾಗಿದೆ.</p><p>ವಿಷಪೂರಿತ ಗಾಳಿ ಸೇವನೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.</p>.ದೆಹಲಿ ಮಾಲಿನ್ಯ: ತಕ್ಷಣ ಕ್ರಮಕ್ಕೆ ಕೇಂದ್ರ,ರಾಜ್ಯ ಸರ್ಕಾರಕ್ಕೆ ಪ್ರಿಯಾಂಕಾ ಒತ್ತಾಯ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>