<p><strong>ರಾಯಪುರ</strong>: ಎಡರಂಗದ ತೀವ್ರವಾದಿತನ (ಎಲ್ಡಬ್ಲ್ಯೂಇ) ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಹಾಗೂ ಏಜೆನ್ಸಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.</p><p>ಛತ್ತೀಸಗಢದಲ್ಲಿ ಎಡರಂಗದ ತೀವ್ರವಾದಿತನ ಪರಿಸ್ಥಿತಿಯ ಕುರಿತು ಸೋಮವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.ತುಳಸಿ ಗೌಡ ನಿಧನ: ಮರಗಳೊಂದಿಗೆ ಅಮರವಾದರು....ಕಾರಿನ ಬಾಗಿಲಿಗೆ ವ್ಯಕ್ತಿಯ ಹೆಬ್ಬೆರಳು ಸಿಲುಕಿದ್ದರೂ ಅರ್ಧ ಕಿ.ಮೀ. ಎಳೆದೊಯ್ದರು!. <p>‘2026ರ ಮಾರ್ಚ್ ಅಂತ್ಯಕ್ಕೆ ಎಲ್ಡಬ್ಲ್ಯುಇ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿ ಪೊಲೀಸರು, ಭದ್ರತಾ ಪಡೆಗಳು, ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.</p><p>ಕಳೆದ ಒಂದು ವರ್ಷದಿಂದ ಉಗ್ರವಾದಿಗಳನ್ನು ಮಟ್ಟ ಹಾಕುವ ಅನೇಕ ಕಾರ್ಯಾಚರಣೆಗಳು ನಡೆದಿದ್ದು, ಇದು ಬಹುದೊಡ್ಡ ಯಶಸ್ಸು. 2026ರ ವೇಳೆಗೆ ಎಲ್ಡಬ್ಲ್ಯೂಇ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮತ್ತಷ್ಟು ಕಾರ್ಯಾಚರಣೆ, ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.</p><p>ಸಿಆರ್ಪಿಎಫ್, ಐಟಿಬಿಪಿ, ಬಿಎಸ್ಎಫ್, ಛತ್ತೀಸ್ಗಢ ಪೊಲೀಸ್ ಮತ್ತು ಡಿಆರ್ಜಿ ಗುರಿಯನ್ನು ಸಾಧಿಸುವತ್ತ ಸಾಗಿವೆ. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಾತ್ರವೂ ಗಮನರ್ಹವಾಗಿದೆ ಎಂದು ಅಮಿತ್ ಶಾ ಶ್ಲಾಘಿಸಿದ್ದಾರೆ.</p>.ದಿಸ್ಸನಾಯಕೆ–ಮೋದಿ ಮಾತುಕತೆ; ಶ್ರೀಲಂಕಾ ಸೇನೆಗೆ ಭಾರತದ ಸಹಕಾರ.ಅಮೆರಿಕ |ವಿಸ್ಕಾನ್ಸಿನ್ ಶಾಲೆಯಲ್ಲಿ ಗುಂಡಿನ ದಾಳಿ: ಶಂಕಿತ ಶೂಟರ್ ಸೇರಿ ಮೂವರ ಸಾವು.ಚಳಿಗಾಲದ ಅಧಿವೇಶನ: ರಾತ್ರಿ 1ರ ಬಳಿಕವೂ ನಡೆದ ವಿಧಾನಸಭೆ ಕಲಾಪ.ಆಳ–ಅಗಲ: ವೇದೋಪಾಸಕನ ನಿರ್ಗಮನ; ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ</strong>: ಎಡರಂಗದ ತೀವ್ರವಾದಿತನ (ಎಲ್ಡಬ್ಲ್ಯೂಇ) ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಹಾಗೂ ಏಜೆನ್ಸಿಗಳು ಜಂಟಿ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.</p><p>ಛತ್ತೀಸಗಢದಲ್ಲಿ ಎಡರಂಗದ ತೀವ್ರವಾದಿತನ ಪರಿಸ್ಥಿತಿಯ ಕುರಿತು ಸೋಮವಾರ ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.ತುಳಸಿ ಗೌಡ ನಿಧನ: ಮರಗಳೊಂದಿಗೆ ಅಮರವಾದರು....ಕಾರಿನ ಬಾಗಿಲಿಗೆ ವ್ಯಕ್ತಿಯ ಹೆಬ್ಬೆರಳು ಸಿಲುಕಿದ್ದರೂ ಅರ್ಧ ಕಿ.ಮೀ. ಎಳೆದೊಯ್ದರು!. <p>‘2026ರ ಮಾರ್ಚ್ ಅಂತ್ಯಕ್ಕೆ ಎಲ್ಡಬ್ಲ್ಯುಇ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಹೀಗಾಗಿ ಪೊಲೀಸರು, ಭದ್ರತಾ ಪಡೆಗಳು, ಏಜೆನ್ಸಿಗಳು ಒಟ್ಟಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.</p><p>ಕಳೆದ ಒಂದು ವರ್ಷದಿಂದ ಉಗ್ರವಾದಿಗಳನ್ನು ಮಟ್ಟ ಹಾಕುವ ಅನೇಕ ಕಾರ್ಯಾಚರಣೆಗಳು ನಡೆದಿದ್ದು, ಇದು ಬಹುದೊಡ್ಡ ಯಶಸ್ಸು. 2026ರ ವೇಳೆಗೆ ಎಲ್ಡಬ್ಲ್ಯೂಇ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮತ್ತಷ್ಟು ಕಾರ್ಯಾಚರಣೆ, ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ತಿಳಿಸಿದ್ದಾರೆ.</p><p>ಸಿಆರ್ಪಿಎಫ್, ಐಟಿಬಿಪಿ, ಬಿಎಸ್ಎಫ್, ಛತ್ತೀಸ್ಗಢ ಪೊಲೀಸ್ ಮತ್ತು ಡಿಆರ್ಜಿ ಗುರಿಯನ್ನು ಸಾಧಿಸುವತ್ತ ಸಾಗಿವೆ. ಈ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪಾತ್ರವೂ ಗಮನರ್ಹವಾಗಿದೆ ಎಂದು ಅಮಿತ್ ಶಾ ಶ್ಲಾಘಿಸಿದ್ದಾರೆ.</p>.ದಿಸ್ಸನಾಯಕೆ–ಮೋದಿ ಮಾತುಕತೆ; ಶ್ರೀಲಂಕಾ ಸೇನೆಗೆ ಭಾರತದ ಸಹಕಾರ.ಅಮೆರಿಕ |ವಿಸ್ಕಾನ್ಸಿನ್ ಶಾಲೆಯಲ್ಲಿ ಗುಂಡಿನ ದಾಳಿ: ಶಂಕಿತ ಶೂಟರ್ ಸೇರಿ ಮೂವರ ಸಾವು.ಚಳಿಗಾಲದ ಅಧಿವೇಶನ: ರಾತ್ರಿ 1ರ ಬಳಿಕವೂ ನಡೆದ ವಿಧಾನಸಭೆ ಕಲಾಪ.ಆಳ–ಅಗಲ: ವೇದೋಪಾಸಕನ ನಿರ್ಗಮನ; ತಬಲಾದಿಂದಲೇ ಪ್ರೀತಿಯ ಪರ್ವತ ಸೃಷ್ಟಿಸಿದ ಮಾಂತ್ರಿಕ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>