<p><strong>ಲಖನೌ:</strong> ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿ, ಮುಂಬರುವ ದಿನಗಳಲ್ಲಿ ಬಿಎಸ್ಪಿ ವಿರೋಧಿ ಶಕ್ತಿಗಳು ಒಂದಾಗಲಿವೆ ಎಂದು ಕಿಡಿಕಾರಿದ್ದಾರೆ.</p>.<p>ಬಿಜೆಪಿಯ ಮತಗಳಿಕೆ ಪ್ರಮಾಣಶೇ.40ರಷ್ಟು ಹೆಚ್ಚಾಗಲಿದೆ ಎಂದುಸಮೀಕ್ಷೆ ಹೇಳಿದೆ.</p>.<p>ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಯಾವತಿ,ʼಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಎಸ್ಪಿ ವಿರೋಧಿ ಶಕ್ತಿಗಳ ಪಿತೂರಿ ಕೆಳಮಟ್ಟಕ್ಕಿಳಿಯಲಿದೆ ಮತ್ತು ಬಿರುಸು ಪಡೆಯಲಿದೆ. ಪ್ರತಿ ಚುನಾವಣೆಗಳ ಮೊದಲು ನಡೆದಂತೆಯೇ ಇರುತ್ತದೆʼ ಎಂದಿದ್ದಾರೆ. ಹಾಗೆಯೇ, ಬಿಜೆಪಿಯು ರಾಜ್ಯದಲ್ಲಿ ʼಹಗೆತನದ ವಾತಾವರಣʼ ಸೃಷ್ಟಿಸಲಿದೆ ಎಂದು ಆರೋಪಿಸಿದ್ದಾರೆ.</p>.<p>ಮುಂದುವರಿದು,ʼಬಿಎಸ್ಪಿಯು ರಾಜ್ಯದಲ್ಲಿ ಬಲಿಷ್ಠವಾಗಿರುವುದರಿಂದ ಬಿಜೆಪಿಯ ಪಿತೂರಿಗಳ ಬಗ್ಗೆ ಹೆದರುವುದಿಲ್ಲ ಅಥವಾ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲʼ ಎಂದಿದ್ದಾರೆ.</p>.<p>ʼಬಿಜೆಪಿಯದ್ವೇಷ ಮತ್ತು ಪಕ್ಷಪಾತದ ಧೋರಣೆಯಿಂದ ಬೇಸತ್ತು ದಲಿತರು, ಬುಟಕಟ್ಟು ಜನರು, ಹಿಂದುಳಿದವರು, ಮುಸ್ಲೀಮರು, ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮೇಲ್ವರ್ಗದವರೂ.. ಮುಖ್ಯವಾಗಿ ಬ್ರಾಹ್ಮಣರು, ಬಿಎಸ್ಪಿ ಜೊತೆಗೂಡುತ್ತಿದ್ದಾರೆʼ ಎಂದಿದ್ದಾರೆ.</p>.<p>ಬಿಜೆಪಿಯುʼದೋಷಪೂರಿತನೀತಿʼಗಳನ್ನು ಜಾರಿಗೊಳಿಸುತ್ತಿದೆ. ಇದುದೇಶದಲ್ಲಿ ಬಡತನ,ಹಣದುಬ್ಬರ ಮತ್ತು ಹಿಂಸಾಚಾರಹೆಚ್ಚಾಗಲು ಕಾರಣವಾಗುತ್ತದೆ ಎಂದು ಬುಧವಾರ ಆರೋಪಿಸಿದ್ದರು.</p>.<p>ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ಮುಂದಿನವರ್ಷ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ.ಬಿಎಸ್ಪಿ, ಸೆಪ್ಟೆಂಬರ್ 7ರಿಂದ ಪ್ರಚಾರ ಆರಂಭಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಉತ್ತರ ಪ್ರದೇಶ ಚುನಾವಣಾ ಪೂರ್ವ ಸಮೀಕ್ಷೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಬಹುಜನ ಸಮಾಜವಾದಿ ಪಕ್ಷದ (ಬಿಎಸ್ಪಿ) ನಾಯಕಿ ಮಾಯಾವತಿ, ಮುಂಬರುವ ದಿನಗಳಲ್ಲಿ ಬಿಎಸ್ಪಿ ವಿರೋಧಿ ಶಕ್ತಿಗಳು ಒಂದಾಗಲಿವೆ ಎಂದು ಕಿಡಿಕಾರಿದ್ದಾರೆ.</p>.<p>ಬಿಜೆಪಿಯ ಮತಗಳಿಕೆ ಪ್ರಮಾಣಶೇ.40ರಷ್ಟು ಹೆಚ್ಚಾಗಲಿದೆ ಎಂದುಸಮೀಕ್ಷೆ ಹೇಳಿದೆ.</p>.<p>ಮಾಧ್ಯಮದವರೊಂದಿಗೆ ಮಾತನಾಡಿರುವ ಮಾಯಾವತಿ,ʼಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಎಸ್ಪಿ ವಿರೋಧಿ ಶಕ್ತಿಗಳ ಪಿತೂರಿ ಕೆಳಮಟ್ಟಕ್ಕಿಳಿಯಲಿದೆ ಮತ್ತು ಬಿರುಸು ಪಡೆಯಲಿದೆ. ಪ್ರತಿ ಚುನಾವಣೆಗಳ ಮೊದಲು ನಡೆದಂತೆಯೇ ಇರುತ್ತದೆʼ ಎಂದಿದ್ದಾರೆ. ಹಾಗೆಯೇ, ಬಿಜೆಪಿಯು ರಾಜ್ಯದಲ್ಲಿ ʼಹಗೆತನದ ವಾತಾವರಣʼ ಸೃಷ್ಟಿಸಲಿದೆ ಎಂದು ಆರೋಪಿಸಿದ್ದಾರೆ.</p>.<p>ಮುಂದುವರಿದು,ʼಬಿಎಸ್ಪಿಯು ರಾಜ್ಯದಲ್ಲಿ ಬಲಿಷ್ಠವಾಗಿರುವುದರಿಂದ ಬಿಜೆಪಿಯ ಪಿತೂರಿಗಳ ಬಗ್ಗೆ ಹೆದರುವುದಿಲ್ಲ ಅಥವಾ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲʼ ಎಂದಿದ್ದಾರೆ.</p>.<p>ʼಬಿಜೆಪಿಯದ್ವೇಷ ಮತ್ತು ಪಕ್ಷಪಾತದ ಧೋರಣೆಯಿಂದ ಬೇಸತ್ತು ದಲಿತರು, ಬುಟಕಟ್ಟು ಜನರು, ಹಿಂದುಳಿದವರು, ಮುಸ್ಲೀಮರು, ಇತರ ಧಾರ್ಮಿಕ ಅಲ್ಪಸಂಖ್ಯಾತರು ಮತ್ತು ಮೇಲ್ವರ್ಗದವರೂ.. ಮುಖ್ಯವಾಗಿ ಬ್ರಾಹ್ಮಣರು, ಬಿಎಸ್ಪಿ ಜೊತೆಗೂಡುತ್ತಿದ್ದಾರೆʼ ಎಂದಿದ್ದಾರೆ.</p>.<p>ಬಿಜೆಪಿಯುʼದೋಷಪೂರಿತನೀತಿʼಗಳನ್ನು ಜಾರಿಗೊಳಿಸುತ್ತಿದೆ. ಇದುದೇಶದಲ್ಲಿ ಬಡತನ,ಹಣದುಬ್ಬರ ಮತ್ತು ಹಿಂಸಾಚಾರಹೆಚ್ಚಾಗಲು ಕಾರಣವಾಗುತ್ತದೆ ಎಂದು ಬುಧವಾರ ಆರೋಪಿಸಿದ್ದರು.</p>.<p>ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯು ಮುಂದಿನವರ್ಷ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ.ಬಿಎಸ್ಪಿ, ಸೆಪ್ಟೆಂಬರ್ 7ರಿಂದ ಪ್ರಚಾರ ಆರಂಭಿಸಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>