ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ಫಲಾನುಭವಿ ಆಧಾರ್ ಕಾರ್ಡ್ ಅಥವಾ ಜಮೀನು ದಾಖಲೆ ಹೊಂದಿಲ್ಲದೆ ಇದ್ದರೆ, ಇಲ್ಲವೆಂದು ಘೋಷಣಾ ಪತ್ರಕ್ಕೆ ಸಹಿ ತೆಗೆದುಕೊಳ್ಳಲಾಗುತ್ತದೆ. ಎರಡನೇ ಬಾರಿ ಚಿಕಿತ್ಸೆಗೆ ಬರುವಾಗ ಆಧಾರ್ ಕಾರ್ಡ್ ಅಥವಾ ಆಧಾರ್ ನೋಂದಣಿ ಚೀಟಿ ಹಾಜರುಪಡಿಸಬೇಕಾಗುತ್ತದೆ ಎನ್ನುವ ನಿಯಮ ಯೋಜನೆಯ ಮಾರ್ಗಸೂಚಿಯಲ್ಲಿತ್ತು. ಈ ಯೋಜನೆಯಡಿ 10.74 ಕೋಟಿ ಬಡ ಮತ್ತು ದುರ್ಬಲ ವರ್ಗದ ಕುಟುಂಬಗಳು ತಲಾ ₹5 ಲಕ್ಷದವರೆಗೆ ಆರೋಗ್ಯ ವಿಮೆ ಪಡೆಯಲಿವೆ.