<p><strong>ಬಹರಂಪುರ:</strong> ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ ‘ಬಾಬರಿ ಮಸೀದಿ ಶೈಲಿ’ಯ ಮಸೀದಿಯೊಂದರ ನಿರ್ಮಾಣಕ್ಕೆ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ನೆರವೇರಿಸಿದ್ದು, ಯೋಜನೆಯು ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.</p><p>‘ಮುಸ್ಲಿಮರ ಧ್ರುವೀಕರಣಕ್ಕೆ ಪಕ್ಷದ ಶಾಸಕನನ್ನು ಟಿಎಂಸಿ ಬಳಸಿಕೊಳ್ಳುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿಯ ಆರೋಪಗಳು ಆಧಾರರಹಿತ ಎಂದು ಟಿಎಂಸಿ ತಿರುಗೇಟು ನೀಡಿದೆ.</p><p>ಈ ವಿವಾದಾತ್ಮಕ ಯೋಜನೆ ಕಾರಣಕ್ಕೆ ಕಬೀರ್ ಅವರನ್ನು ಕಳೆದ ವಾರ ಟಿಎಂಸಿ ಪಕ್ಷದಿಂದ ಅಮಾನತು ಮಾಡಿದೆ.</p><p>ಈ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ‘ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣಕ್ಕಾಗಿ ಕಬೀರ್ ಬೆಂಬಲಿಗರು ಇಟ್ಟಿಗೆಗಳನ್ನು ಹೊತ್ತೊಯ್ಯುತ್ತಿದ್ದರು. ಬೆಲ್ಡಾಂಗದಲ್ಲಿನ ಬೆಳವಣಿಗೆಗಳು ಆತಂಕ ಮೂಡಿಸುವಂತಿವೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p><p>‘ಕೋಮು ವಿಚಾರವಾಗಿ ಬೆಲ್ಡಾಂಗ ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿ ಭುಗಿಲೇಳುವ ಯಾವುದೇ ಘರ್ಷಣೆಯು ಪಶ್ಚಿಮ ಬಂಗಾಳದ ಜೀವನಾಡಿಯಂತಿರುವ ರಾಷ್ಟ್ರೀಯ ಹೆದ್ದಾರಿ 12ರಲ್ಲಿನ ಸಂಚಾರಕ್ಕೆ ಧಕ್ಕೆ ತರಲಿದೆ’ ಎಂದು ಮಾಳವೀಯ ಎಚ್ಚರಿಸಿದ್ದಾರೆ.</p>.<p>ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಇಲ್ಲಿ ಉದ್ಭವಿಸ<br>ಬಹುದಾದ ಕಾನೂನು–ಸುವ್ಯವಸ್ಥೆ ಸಮಸ್ಯೆಯು ರಾಷ್ಟ್ರೀಯ ಭದ್ರತೆ ಮೇಲೂ ಗಂಭೀರ ಪರಿಣಾಮ ಬೀರಬಹುದು’ ಎಂದು ಹೇಳಿದ್ದಾರೆ.</p><p>‘ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಕ್ಷೋಭೆಯನ್ನುಂಟು ಮಾಡುವುದಕ್ಕೆ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರನ್ನು ಬಳಸಿಕೊಳ್ಳುತ್ತಿದೆ’ ಎಂದು ಬಿಜೆಪಿಯ ಹಿರಿಯ ನಾಯಕ ದಿಲೀಪ್ ಘೋಷ್ ಆರೋಪಿಸಿದ್ದಾರೆ.</p><p>‘ಬಿಜೆಪಿ ಹಾಗೂ ಆರ್ಎಸ್ ಎಸ್ನೊಂದಿಗೆ ಕಬೀರ್ ಅಘೋಷಿತ ಒಪ್ಪಂದ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಶಾಂತಿ ಕದಡಲು ಕಬೀರ್ ಹವಣಿಸುತ್ತಿದ್ದಾರೆ’ ಎಂದು ಟಿಎಂಸಿ ಅರೋಪಿಸಿದೆ.</p><p>‘ಅಮಾನತು ಮಾಡಲಾಗಿರುವ ಶಾಸಕ ಕಬೀರ್ಗೆ ಬಿಜೆಪಿಯಿಂದ ಧನಸಹಾಯ ಸಿಗುತ್ತಿದೆ. ಗಲಭೆ ಭುಗಿಲೇ<br>ಳುವಂತೆ ಮಾಡುವುದಕ್ಕೆ ಆತ ಬಿಜೆಪಿಯ ಏಜೆಂಟ್ನಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.</p>.ಪ.ಬಂಗಾಳ | ಬಾಬರಿ ಮಸೀದಿ ನಿರ್ಮಾಣ ಹೇಳಿಕೆ: ಶಾಸಕನ ಅಮಾನತುಗೊಳಿಸಿದ ಟಿಎಂಸಿ.<ul><li><p>ಟಿಎಂಸಿಯಿಂದ ಓಲೈಕೆ ರಾಜಕಾರಣ: ಬಿಜೆಪಿ ಟೀಕೆ</p></li><li><p>ಅಮಾನತು ಮಾಡಲಾದ ಶಾಸಕ ಕಬೀರ್ ಬಿಜೆಪಿ ಏಜೆಂಟ್: ಟಿಎಂಸಿ</p></li><li><p>ಕಾನೂನು–ಸುವ್ಯವಸ್ಥೆ ಸರ್ಕಾರದ ಜವಾಬ್ದಾರಿ: ಹೈಕೋರ್ಟ್ </p></li></ul>.ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್.ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಹರಂಪುರ:</strong> ಪಶ್ಚಿಮ ಬಂಗಾಳದ ಮುರ್ಶಿದಾಬಾದ್ನಲ್ಲಿ ‘ಬಾಬರಿ ಮಸೀದಿ ಶೈಲಿ’ಯ ಮಸೀದಿಯೊಂದರ ನಿರ್ಮಾಣಕ್ಕೆ ಶಾಸಕ ಹುಮಾಯೂನ್ ಕಬೀರ್ ಶಂಕುಸ್ಥಾಪನೆ ನೆರವೇರಿಸಿದ್ದು, ಯೋಜನೆಯು ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.</p><p>‘ಮುಸ್ಲಿಮರ ಧ್ರುವೀಕರಣಕ್ಕೆ ಪಕ್ಷದ ಶಾಸಕನನ್ನು ಟಿಎಂಸಿ ಬಳಸಿಕೊಳ್ಳುತ್ತಿದೆ’ ಎಂದು ಬಿಜೆಪಿ ಟೀಕಿಸಿದೆ. ಬಿಜೆಪಿಯ ಆರೋಪಗಳು ಆಧಾರರಹಿತ ಎಂದು ಟಿಎಂಸಿ ತಿರುಗೇಟು ನೀಡಿದೆ.</p><p>ಈ ವಿವಾದಾತ್ಮಕ ಯೋಜನೆ ಕಾರಣಕ್ಕೆ ಕಬೀರ್ ಅವರನ್ನು ಕಳೆದ ವಾರ ಟಿಎಂಸಿ ಪಕ್ಷದಿಂದ ಅಮಾನತು ಮಾಡಿದೆ.</p><p>ಈ ವಿಚಾರವಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಮಾಡಿರುವ ಬಿಜೆಪಿ ನಾಯಕ ಅಮಿತ್ ಮಾಳವೀಯ, ‘ಬಾಬರಿ ಮಸೀದಿ ಶೈಲಿಯ ಮಸೀದಿ ನಿರ್ಮಾಣಕ್ಕಾಗಿ ಕಬೀರ್ ಬೆಂಬಲಿಗರು ಇಟ್ಟಿಗೆಗಳನ್ನು ಹೊತ್ತೊಯ್ಯುತ್ತಿದ್ದರು. ಬೆಲ್ಡಾಂಗದಲ್ಲಿನ ಬೆಳವಣಿಗೆಗಳು ಆತಂಕ ಮೂಡಿಸುವಂತಿವೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p><p>‘ಕೋಮು ವಿಚಾರವಾಗಿ ಬೆಲ್ಡಾಂಗ ಬಹಳ ಸೂಕ್ಷ್ಮ ಪ್ರದೇಶ. ಇಲ್ಲಿ ಭುಗಿಲೇಳುವ ಯಾವುದೇ ಘರ್ಷಣೆಯು ಪಶ್ಚಿಮ ಬಂಗಾಳದ ಜೀವನಾಡಿಯಂತಿರುವ ರಾಷ್ಟ್ರೀಯ ಹೆದ್ದಾರಿ 12ರಲ್ಲಿನ ಸಂಚಾರಕ್ಕೆ ಧಕ್ಕೆ ತರಲಿದೆ’ ಎಂದು ಮಾಳವೀಯ ಎಚ್ಚರಿಸಿದ್ದಾರೆ.</p>.<p>ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ಇದಾಗಿದ್ದು, ಇಲ್ಲಿ ಉದ್ಭವಿಸ<br>ಬಹುದಾದ ಕಾನೂನು–ಸುವ್ಯವಸ್ಥೆ ಸಮಸ್ಯೆಯು ರಾಷ್ಟ್ರೀಯ ಭದ್ರತೆ ಮೇಲೂ ಗಂಭೀರ ಪರಿಣಾಮ ಬೀರಬಹುದು’ ಎಂದು ಹೇಳಿದ್ದಾರೆ.</p><p>‘ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ರಾಜ್ಯದಲ್ಲಿ ಕ್ಷೋಭೆಯನ್ನುಂಟು ಮಾಡುವುದಕ್ಕೆ ಟಿಎಂಸಿ ಶಾಸಕ ಹುಮಾಯೂನ್ ಕಬೀರ್ ಅವರನ್ನು ಬಳಸಿಕೊಳ್ಳುತ್ತಿದೆ’ ಎಂದು ಬಿಜೆಪಿಯ ಹಿರಿಯ ನಾಯಕ ದಿಲೀಪ್ ಘೋಷ್ ಆರೋಪಿಸಿದ್ದಾರೆ.</p><p>‘ಬಿಜೆಪಿ ಹಾಗೂ ಆರ್ಎಸ್ ಎಸ್ನೊಂದಿಗೆ ಕಬೀರ್ ಅಘೋಷಿತ ಒಪ್ಪಂದ ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ ಶಾಂತಿ ಕದಡಲು ಕಬೀರ್ ಹವಣಿಸುತ್ತಿದ್ದಾರೆ’ ಎಂದು ಟಿಎಂಸಿ ಅರೋಪಿಸಿದೆ.</p><p>‘ಅಮಾನತು ಮಾಡಲಾಗಿರುವ ಶಾಸಕ ಕಬೀರ್ಗೆ ಬಿಜೆಪಿಯಿಂದ ಧನಸಹಾಯ ಸಿಗುತ್ತಿದೆ. ಗಲಭೆ ಭುಗಿಲೇ<br>ಳುವಂತೆ ಮಾಡುವುದಕ್ಕೆ ಆತ ಬಿಜೆಪಿಯ ಏಜೆಂಟ್ನಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಆರೋಪಿಸಿದ್ದಾರೆ.</p>.ಪ.ಬಂಗಾಳ | ಬಾಬರಿ ಮಸೀದಿ ನಿರ್ಮಾಣ ಹೇಳಿಕೆ: ಶಾಸಕನ ಅಮಾನತುಗೊಳಿಸಿದ ಟಿಎಂಸಿ.<ul><li><p>ಟಿಎಂಸಿಯಿಂದ ಓಲೈಕೆ ರಾಜಕಾರಣ: ಬಿಜೆಪಿ ಟೀಕೆ</p></li><li><p>ಅಮಾನತು ಮಾಡಲಾದ ಶಾಸಕ ಕಬೀರ್ ಬಿಜೆಪಿ ಏಜೆಂಟ್: ಟಿಎಂಸಿ</p></li><li><p>ಕಾನೂನು–ಸುವ್ಯವಸ್ಥೆ ಸರ್ಕಾರದ ಜವಾಬ್ದಾರಿ: ಹೈಕೋರ್ಟ್ </p></li></ul>.ಸಾರ್ವಜನಿಕ ಹಣದಲ್ಲಿ ಬಾಬರಿ ಮಸೀದಿ ನಿರ್ಮಿಸಲು ಬಯಸಿದ್ದ ನೆಹರೂ ಎಂದ ರಾಜನಾಥ ಸಿಂಗ್.ಬಾಬರಿ ಮಸೀದಿ ಧ್ವಂಸಕ್ಕೆ 33 ವರ್ಷ: ಹಲವೆಡೆ ಕಟ್ಟೆಚ್ಚರ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>