<p><strong>ವಿಶಾಖಪಟ್ಟಣ:</strong> ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದಿದ್ದು, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.</p><p>ಕೊನೆಯ ಬಾರಿ 2023ರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತವು, ಸತತ 20 ಏಕದಿನ ಪಂದ್ಯಗಳ ನಂತರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ಟಾಸ್ ಗೆಲ್ಲುವಲ್ಲಿ ಸಫಲವಾಗಿದೆ. </p><p>ಟಾಸ್ ವೇಳೆ ದಕ್ಷಿಣ ಆಫ್ರಿಕಾ ನಾಯಕ ಬವುಮಾ ಟೇಲ್ಸ್ ಎಂದು ಹೇಳಿದ್ದರು. ಅದು ಹೆಡ್ಸ್ ಆಗಿತ್ತು. ಕೊನೆಗೂ ಟಾಸ್ ಗೆದ್ದ ಖುಷಿಗೆ ರಾಹುಲ್ ಸಂಭ್ರಮಿಸಿದ್ದರು. </p><p>ಎರಡು ವರ್ಷಗಳ ಬಳಿಕ ಟಾಸ್ ಗೆದಿದ್ದರಿಂದ ಮೈದಾನದಲ್ಲಿದ್ದ ಅಭಿಮಾನಿಗಳು ಕೂಡ ಹರ್ಷೋದ್ಗಾರ ಮಾಡಿದರು. </p><p>ಟಾಸ್ ವೇಳೆ ಮಾತನಾಡಿದ ರಾಹುಲ್ ‘ಮುರುಳಿ ಕಾರ್ತಿಕ್ ಅವರು ಟಾಸ್ ವೇಳೆ ಇದಿದ್ದು ಭಾರತಕ್ಕೆ ಅದೃಷ್ಟವಾಗಿ ಪರಿಣಮಿಸಿತು. ನೀವು ಇನ್ನಷ್ಟು ಟಾಸ್ ಗೆಲ್ಲಿಸಬೇಕು’ ಎಂದು ಕಾಲೆಳೆದರು. </p><p>ಟೀಂ ಇಂಡಿಯಾ ಟಾಸ್ ಗೆದ್ದ ನಂತರ ಪ್ರತಿಕ್ರಿಯಿಸಿದ ಮಾಜಿ ಆಟಗಾರ ಸಂಜಯ್ ಬಂಗಾರ್ ‘ನಾಯಕ ರಾಹುಲ್ ಅವರು ಟಾಸ್ ವೇಳೆ ಸಾಮಾನ್ಯವಾಗಿ ಬಲಗೈ ಬಳಸುತ್ತಿದ್ದರು. ಈ ಪಂದ್ಯದಲ್ಲಿ ಎಡಗೈ ಮೂಲಕ ನಾಣ್ಯವನ್ನು ಚಿಮ್ಮುವ ತಂತ್ರ ಮಾಡಿದ್ದು ಟಾಸ್ ಗೆಲ್ಲುವಲ್ಲಿ ನೆರವಾಯಿತು’ ಎಂದಿದ್ದಾರೆ. </p><p>ಮೂರು ಪಂದ್ಯಗಳ ಸರಣಿಯು 1–1ರಲ್ಲಿ ಸಮಬಲವಾಗಿದ್ದು, ಸರಣಿ ಗೆಲ್ಲಲು ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. </p>.IND vs SA | ಕೊನೆಗೂ ಟಾಸ್ ಗೆದ್ದ ಭಾರತ: ತಂಡದಲ್ಲಿ ಒಂದು ಪ್ರಮುಖ ಬದಲಾವಣೆ.ವಿಶಾಖಪಟ್ಟಣದಲ್ಲಿ ಕೊಹ್ಲಿಯೇ ಕಿಂಗ್: ಈ ಮೈದಾನದಲ್ಲಿ ಹೇಗಿದೆ ವಿರಾಟ್ ದಾಖಲೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶಾಖಪಟ್ಟಣ:</strong> ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ದದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು ಟಾಸ್ ಗೆದಿದ್ದು, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.</p><p>ಕೊನೆಯ ಬಾರಿ 2023ರ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಭಾರತವು, ಸತತ 20 ಏಕದಿನ ಪಂದ್ಯಗಳ ನಂತರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ ಟಾಸ್ ಗೆಲ್ಲುವಲ್ಲಿ ಸಫಲವಾಗಿದೆ. </p><p>ಟಾಸ್ ವೇಳೆ ದಕ್ಷಿಣ ಆಫ್ರಿಕಾ ನಾಯಕ ಬವುಮಾ ಟೇಲ್ಸ್ ಎಂದು ಹೇಳಿದ್ದರು. ಅದು ಹೆಡ್ಸ್ ಆಗಿತ್ತು. ಕೊನೆಗೂ ಟಾಸ್ ಗೆದ್ದ ಖುಷಿಗೆ ರಾಹುಲ್ ಸಂಭ್ರಮಿಸಿದ್ದರು. </p><p>ಎರಡು ವರ್ಷಗಳ ಬಳಿಕ ಟಾಸ್ ಗೆದಿದ್ದರಿಂದ ಮೈದಾನದಲ್ಲಿದ್ದ ಅಭಿಮಾನಿಗಳು ಕೂಡ ಹರ್ಷೋದ್ಗಾರ ಮಾಡಿದರು. </p><p>ಟಾಸ್ ವೇಳೆ ಮಾತನಾಡಿದ ರಾಹುಲ್ ‘ಮುರುಳಿ ಕಾರ್ತಿಕ್ ಅವರು ಟಾಸ್ ವೇಳೆ ಇದಿದ್ದು ಭಾರತಕ್ಕೆ ಅದೃಷ್ಟವಾಗಿ ಪರಿಣಮಿಸಿತು. ನೀವು ಇನ್ನಷ್ಟು ಟಾಸ್ ಗೆಲ್ಲಿಸಬೇಕು’ ಎಂದು ಕಾಲೆಳೆದರು. </p><p>ಟೀಂ ಇಂಡಿಯಾ ಟಾಸ್ ಗೆದ್ದ ನಂತರ ಪ್ರತಿಕ್ರಿಯಿಸಿದ ಮಾಜಿ ಆಟಗಾರ ಸಂಜಯ್ ಬಂಗಾರ್ ‘ನಾಯಕ ರಾಹುಲ್ ಅವರು ಟಾಸ್ ವೇಳೆ ಸಾಮಾನ್ಯವಾಗಿ ಬಲಗೈ ಬಳಸುತ್ತಿದ್ದರು. ಈ ಪಂದ್ಯದಲ್ಲಿ ಎಡಗೈ ಮೂಲಕ ನಾಣ್ಯವನ್ನು ಚಿಮ್ಮುವ ತಂತ್ರ ಮಾಡಿದ್ದು ಟಾಸ್ ಗೆಲ್ಲುವಲ್ಲಿ ನೆರವಾಯಿತು’ ಎಂದಿದ್ದಾರೆ. </p><p>ಮೂರು ಪಂದ್ಯಗಳ ಸರಣಿಯು 1–1ರಲ್ಲಿ ಸಮಬಲವಾಗಿದ್ದು, ಸರಣಿ ಗೆಲ್ಲಲು ಉಭಯ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದೆ. </p>.IND vs SA | ಕೊನೆಗೂ ಟಾಸ್ ಗೆದ್ದ ಭಾರತ: ತಂಡದಲ್ಲಿ ಒಂದು ಪ್ರಮುಖ ಬದಲಾವಣೆ.ವಿಶಾಖಪಟ್ಟಣದಲ್ಲಿ ಕೊಹ್ಲಿಯೇ ಕಿಂಗ್: ಈ ಮೈದಾನದಲ್ಲಿ ಹೇಗಿದೆ ವಿರಾಟ್ ದಾಖಲೆ?.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>