<p><strong>ಗೋಪೇಶ್ವರ</strong>: ಚಳಿಗಾಲ ಆರಂಭವಾದ ಕಾರಣ ಉತ್ತರಾಖಂಡದ ಬದರಿನಾಥ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ. ಈ ಮೂಲಕ ಈ ವರ್ಷದ ಚಾರ್ಧಾಮ್ ಯಾತ್ರೆ ಮಂಗಳವಾರ ಮುಕ್ತಾಯವಾಗಿದೆ.</p><p>ವಿಶೇಷ ಪೂಜೆ ಬಳಿಕ ಬದರಿನಾಥ ದೇಗುಲವನ್ನು ಮಧ್ಯಾಹ್ನ 2.56ಕ್ಕೆ ಮುಚ್ಚಲಾಗಿದೆ ಎಂದು ಬದರಿನಾಥ– ಕೇದಾರನಾಥ ದೇಗುಲ ಸಮಿತಿ ಹೇಳಿದೆ. ಈ ವೇಳೆ ಚಳಿಯ ವಾತಾವರಣದ ನಡುವೆಯೂ ದೇಶ–ವಿದೇಶಗಳಿಂದ ಬಂದಿದ್ದ ಭಕ್ತರು ಹಾಜರಿದ್ದರು ಎಂದೂ ಸಮಿತಿ ತಿಳಿಸಿದೆ.</p><p>ದೇವಾಲಯವನ್ನು ಹಳದಿ ಮತ್ತು ಕೇಸರಿ ಬಣ್ಣದ ಚೆಂಡುಹೂವಿನಿಂದ ಅಲಂಕರಿಸಲಾಗಿತ್ತು. ದೇಗುಲದ ಎದುರು ಬೆಳಿಗ್ಗೆಯಿಂದಲೇ ಜಾನಪದ ನೃತ್ಯ, ಭಜನೆ, ಕೀರ್ತನೆಗಳು ನಡೆಯುತ್ತಿದ್ದವು.</p><p>ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಾಮಗಳು ಕಳೆದ ತಿಂಗಳು ಬಾಗಿಲು ಮುಚ್ಚಿತ್ತು. ಈಗ ಬದರಿನಾಥ ದೇಗುಲದ ಬಾಗಿಲು ಮುಚ್ಚುವ ಮೂಲಕ ಚಾರ್ಧಾಮ್ ಯಾತ್ರೆ ಮುಕ್ತಾಯಗೊಂಡಿದೆ.</p><p>ಪ್ರತಿ ವರ್ಷ ತೀವ್ರ ಚಳಿ ಮತ್ತು ಭಾರಿ ಹಿಮಪಾತವಾಗುವ ಕಾರಣ ಪ್ರತಿ ವರ್ಷ ಅಕ್ಟೋಬರ್ –ನವೆಂಬರ್ನಲ್ಲಿ ಹಿಮಾಲಯದಲ್ಲಿರುವ ಈ ದೇಗುಲಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಏಪ್ರಿಲ್–ಮೇ ತಿಂಗಳಲ್ಲಿ ಬಾಗಿಲು ತೆರೆಯಲಾಗುತ್ತದೆ.</p><p>ಈ ವರ್ಷ ಮೇ ತಿಂಗಳಿನಿಂದ ಆರಂಭವಾದ ಯಾತ್ರೆಯಲ್ಲಿ ದೇಶ– ವಿದೇಶಗಳಿಂದ 51 ಲಕ್ಷ ಭಕ್ತರು ಪಾಲ್ಗೊಂಡಿದ್ದರು. 6.44 ಲಕ್ಷ ಯಮುನೋತ್ರಿಗೆ, 7.58 ಲಕ್ಷ ಗಂಗೋತ್ರಿ, 17.68 ಲಕ್ಷ ಕೇದಾರನಾಥ ಮತ್ತು 16.52 ಲಕ್ಷ ಭಕ್ತರು ಬದರಿನಾಥಕ್ಕೆ ಭೇಟಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಪೇಶ್ವರ</strong>: ಚಳಿಗಾಲ ಆರಂಭವಾದ ಕಾರಣ ಉತ್ತರಾಖಂಡದ ಬದರಿನಾಥ ದೇಗುಲದ ಬಾಗಿಲನ್ನು ಮುಚ್ಚಲಾಗಿದೆ. ಈ ಮೂಲಕ ಈ ವರ್ಷದ ಚಾರ್ಧಾಮ್ ಯಾತ್ರೆ ಮಂಗಳವಾರ ಮುಕ್ತಾಯವಾಗಿದೆ.</p><p>ವಿಶೇಷ ಪೂಜೆ ಬಳಿಕ ಬದರಿನಾಥ ದೇಗುಲವನ್ನು ಮಧ್ಯಾಹ್ನ 2.56ಕ್ಕೆ ಮುಚ್ಚಲಾಗಿದೆ ಎಂದು ಬದರಿನಾಥ– ಕೇದಾರನಾಥ ದೇಗುಲ ಸಮಿತಿ ಹೇಳಿದೆ. ಈ ವೇಳೆ ಚಳಿಯ ವಾತಾವರಣದ ನಡುವೆಯೂ ದೇಶ–ವಿದೇಶಗಳಿಂದ ಬಂದಿದ್ದ ಭಕ್ತರು ಹಾಜರಿದ್ದರು ಎಂದೂ ಸಮಿತಿ ತಿಳಿಸಿದೆ.</p><p>ದೇವಾಲಯವನ್ನು ಹಳದಿ ಮತ್ತು ಕೇಸರಿ ಬಣ್ಣದ ಚೆಂಡುಹೂವಿನಿಂದ ಅಲಂಕರಿಸಲಾಗಿತ್ತು. ದೇಗುಲದ ಎದುರು ಬೆಳಿಗ್ಗೆಯಿಂದಲೇ ಜಾನಪದ ನೃತ್ಯ, ಭಜನೆ, ಕೀರ್ತನೆಗಳು ನಡೆಯುತ್ತಿದ್ದವು.</p><p>ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಾಮಗಳು ಕಳೆದ ತಿಂಗಳು ಬಾಗಿಲು ಮುಚ್ಚಿತ್ತು. ಈಗ ಬದರಿನಾಥ ದೇಗುಲದ ಬಾಗಿಲು ಮುಚ್ಚುವ ಮೂಲಕ ಚಾರ್ಧಾಮ್ ಯಾತ್ರೆ ಮುಕ್ತಾಯಗೊಂಡಿದೆ.</p><p>ಪ್ರತಿ ವರ್ಷ ತೀವ್ರ ಚಳಿ ಮತ್ತು ಭಾರಿ ಹಿಮಪಾತವಾಗುವ ಕಾರಣ ಪ್ರತಿ ವರ್ಷ ಅಕ್ಟೋಬರ್ –ನವೆಂಬರ್ನಲ್ಲಿ ಹಿಮಾಲಯದಲ್ಲಿರುವ ಈ ದೇಗುಲಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಏಪ್ರಿಲ್–ಮೇ ತಿಂಗಳಲ್ಲಿ ಬಾಗಿಲು ತೆರೆಯಲಾಗುತ್ತದೆ.</p><p>ಈ ವರ್ಷ ಮೇ ತಿಂಗಳಿನಿಂದ ಆರಂಭವಾದ ಯಾತ್ರೆಯಲ್ಲಿ ದೇಶ– ವಿದೇಶಗಳಿಂದ 51 ಲಕ್ಷ ಭಕ್ತರು ಪಾಲ್ಗೊಂಡಿದ್ದರು. 6.44 ಲಕ್ಷ ಯಮುನೋತ್ರಿಗೆ, 7.58 ಲಕ್ಷ ಗಂಗೋತ್ರಿ, 17.68 ಲಕ್ಷ ಕೇದಾರನಾಥ ಮತ್ತು 16.52 ಲಕ್ಷ ಭಕ್ತರು ಬದರಿನಾಥಕ್ಕೆ ಭೇಟಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>