ಆರ್ಎಸ್ಎಸ್, ಕುರುಲ್ಕರ್ ರಕ್ಷಣೆಗಾಗಿ ಕಾನೂನು ರದ್ದು: ರಾವುತ್
ಬ್ರಿಟಿಷರ ಕಾಲದ ದೇಶದ್ರೋಹದ ಕಾನೂನನ್ನು, ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸಂಪೂರ್ಣವಾಗಿ ತೆಗೆದುಹಾಕುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಬಡಾಯಿ ಕೊಚ್ಚಿಕೊಳ್ಳಬಾರದು. ಯಾಕೆಂದರೆ ಈಗ ರೂಪಿಸಲಾಗುತ್ತಿರುವ ಕಾನೂನು ಬ್ರಿಟಿಷ್ ಕಾಲದ ಕಾನೂನುಗಳಿಗಿಂತಲೂ ಹೆಚ್ಚು ಭಯ ಹುಟ್ಟಿಸುತ್ತಿವೆ. ರಾಜಕೀಯ ವಿರೋಧಿಗಳ ಬಾಯಿಮುಚ್ಚಿಸುವಂತಿವೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಲೇವಡಿ ಮಾಡಿದ್ದಾರೆ.