<p><strong>ನವದೆಹಲಿ:</strong> ಬರ್ತ್ ಡೇ ಕೇಕ್ ಎಸೆದು ಚಿರತೆ ದಾಳಿಯಿಂದ ಸಹೋದರರಿಬ್ಬರು ಪಾರಾಗಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.</p>.<p>ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಚಿರತೆ ಬೆನ್ನಟ್ಟಿತ್ತು. ಈ ಸಂದರ್ಭದಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಕೈಯಲ್ಲಿದ್ದ ಬರ್ತ್ ಡೇ ಕೇಕ್ ಅನ್ನು ಚಿರತೆಗೆ ಎಸೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/technology/viral/anand-mahindra-shares-rofl-video-of-dog-watching-soccer-compared-himself-his-condition-will-like-837628.html" itemprop="url">ಕೊರೊನಾ ಅಂತ್ಯದ ಘೋಷಣೆಯಾದರೆ ಈ ನಾಯಿಯಂತೆ ಎಗರಿ ಬೀಳುತ್ತೇನೆ: ಆನಂದ್ ಮಹೀಂದ್ರ </a></p>.<p>ಅಪಾಯ ಎದುರಾದಾಗ ಪ್ರಾಣ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಮಾಡುವ ಸಹಜ ಪ್ರವೃತ್ತಿ ಇದಾಗಿದೆ. ಅದನ್ನೇ ಅವರು ಮಾಡಿದರು. ಕೈಯಲ್ಲಿದ್ದ ಕೇಕ್ ಚಿರತೆಗೆ ಎಸೆದರು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.</p>.<p>ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮಗನ ಹುಟ್ಟುಹಬ್ಬ ಆಚರಣೆಗೆ ಫಿರೋಜ್ ಅವರು ತಮ್ಮ ಸಹೋದರ ಸಬೀರ್ ಜೊತೆಗೆ ಸಂಜೆಯ ವೇಳೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಕಬ್ಬಿನ ಹೊಲದಲ್ಲಿ ಚಿರತೆ ದಾಳಿಯಾಗಿದೆ.</p>.<p>ಈ ಸಂದರ್ಭದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ವೇಗವನ್ನು ಹೆಚ್ಚಿಸಿದ್ದರೂ ನರಭಕ್ಷಕ ಚಿರತೆ ಹಿಂಬಾಲಿಸಿತ್ತು. ಇದರಿಂದಾಗಿ ಕೈಯಲ್ಲಿದ್ದ ಕೇಕ್ ಎಸೆಯದೇ ಅನ್ಯ ಮಾರ್ಗವಿರಲಿಲ್ಲ. ಇದರಿಂದಾಗಿ ಚಿರತೆಯು ತನ್ನ ಪ್ರಯತ್ನದಲ್ಲಿ ವಿಫಲಗೊಂಡು ಹೊಲದ ಕಡೆಗೆ ಹಿಂತಿರುಗಿತ್ತು.</p>.<p>ಸುಮಾರು 500 ಮೀಟರ್ಗಳಷ್ಟು ದೂರ ಚಿರತೆ ನಮ್ಮನ್ನು ಹಿಂಬಾಲಿಸಿತ್ತು. ನಾವು ಸಾವಿನಿಂದ ಪಾರಾಗಿದ್ದೇವೆ ಎಂದು ಸಬೀರ್ ತಿಳಿಸಿದರು.</p>.<p>ಭಾರತದಲ್ಲಿ ಚಿರತೆಗಳ ಸಂಖ್ಯೆ 2014 ಮತ್ತು 2018ರ ನಡುವೆ ಶೇಕಡಾ 60ರಷ್ಟು ಹೆಚ್ಚಾಗಿದ್ದು, ಸುಮಾರು 13,000ಕ್ಕೆ ತಲುಪಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿರತೆಗಳಿವೆ ಎಂದು ಸರ್ಕಾರದ ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬರ್ತ್ ಡೇ ಕೇಕ್ ಎಸೆದು ಚಿರತೆ ದಾಳಿಯಿಂದ ಸಹೋದರರಿಬ್ಬರು ಪಾರಾಗಿರುವ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ.</p>.<p>ಬೈಕ್ನಲ್ಲಿ ಸಂಚರಿಸುತ್ತಿದ್ದಾಗ ಚಿರತೆ ಬೆನ್ನಟ್ಟಿತ್ತು. ಈ ಸಂದರ್ಭದಲ್ಲಿ ಪ್ರಾಣ ರಕ್ಷಿಸಿಕೊಳ್ಳಲು ಕೈಯಲ್ಲಿದ್ದ ಬರ್ತ್ ಡೇ ಕೇಕ್ ಅನ್ನು ಚಿರತೆಗೆ ಎಸೆದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>ಇದನ್ನೂ ಓದಿ:<a href="https://www.prajavani.net/technology/viral/anand-mahindra-shares-rofl-video-of-dog-watching-soccer-compared-himself-his-condition-will-like-837628.html" itemprop="url">ಕೊರೊನಾ ಅಂತ್ಯದ ಘೋಷಣೆಯಾದರೆ ಈ ನಾಯಿಯಂತೆ ಎಗರಿ ಬೀಳುತ್ತೇನೆ: ಆನಂದ್ ಮಹೀಂದ್ರ </a></p>.<p>ಅಪಾಯ ಎದುರಾದಾಗ ಪ್ರಾಣ ರಕ್ಷಿಸಿಕೊಳ್ಳಲು ಪ್ರತಿಯೊಬ್ಬರು ಮಾಡುವ ಸಹಜ ಪ್ರವೃತ್ತಿ ಇದಾಗಿದೆ. ಅದನ್ನೇ ಅವರು ಮಾಡಿದರು. ಕೈಯಲ್ಲಿದ್ದ ಕೇಕ್ ಚಿರತೆಗೆ ಎಸೆದರು ಎಂದು ಅರಣ್ಯಾಧಿಕಾರಿ ತಿಳಿಸಿದ್ದಾರೆ.</p>.<p>ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಮಗನ ಹುಟ್ಟುಹಬ್ಬ ಆಚರಣೆಗೆ ಫಿರೋಜ್ ಅವರು ತಮ್ಮ ಸಹೋದರ ಸಬೀರ್ ಜೊತೆಗೆ ಸಂಜೆಯ ವೇಳೆಗೆ ಬೈಕ್ನಲ್ಲಿ ತೆರಳುತ್ತಿದ್ದಾಗ ಕಬ್ಬಿನ ಹೊಲದಲ್ಲಿ ಚಿರತೆ ದಾಳಿಯಾಗಿದೆ.</p>.<p>ಈ ಸಂದರ್ಭದಲ್ಲಿ ಇಕ್ಕಟ್ಟಾದ ರಸ್ತೆಯಲ್ಲಿ ಬೈಕ್ ವೇಗವನ್ನು ಹೆಚ್ಚಿಸಿದ್ದರೂ ನರಭಕ್ಷಕ ಚಿರತೆ ಹಿಂಬಾಲಿಸಿತ್ತು. ಇದರಿಂದಾಗಿ ಕೈಯಲ್ಲಿದ್ದ ಕೇಕ್ ಎಸೆಯದೇ ಅನ್ಯ ಮಾರ್ಗವಿರಲಿಲ್ಲ. ಇದರಿಂದಾಗಿ ಚಿರತೆಯು ತನ್ನ ಪ್ರಯತ್ನದಲ್ಲಿ ವಿಫಲಗೊಂಡು ಹೊಲದ ಕಡೆಗೆ ಹಿಂತಿರುಗಿತ್ತು.</p>.<p>ಸುಮಾರು 500 ಮೀಟರ್ಗಳಷ್ಟು ದೂರ ಚಿರತೆ ನಮ್ಮನ್ನು ಹಿಂಬಾಲಿಸಿತ್ತು. ನಾವು ಸಾವಿನಿಂದ ಪಾರಾಗಿದ್ದೇವೆ ಎಂದು ಸಬೀರ್ ತಿಳಿಸಿದರು.</p>.<p>ಭಾರತದಲ್ಲಿ ಚಿರತೆಗಳ ಸಂಖ್ಯೆ 2014 ಮತ್ತು 2018ರ ನಡುವೆ ಶೇಕಡಾ 60ರಷ್ಟು ಹೆಚ್ಚಾಗಿದ್ದು, ಸುಮಾರು 13,000ಕ್ಕೆ ತಲುಪಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಚಿರತೆಗಳಿವೆ ಎಂದು ಸರ್ಕಾರದ ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>