ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡಾಯವೆದ್ದಿದ್ದ ಶಿಂದೆ ಬಣ, ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಬಳಿಕ ಬಿಜೆಪಿ ಜೊತೆ ಮೈತ್ರಿಯೊಂದಿಗೆ ನೂತನ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು.
ಒಬ್ಬರು ತಪ್ಪನ್ನು ಮಾಡಬಹುದು. ಆದರೆ 50 ಮಂದಿ ತಪ್ಪು ಮಾಡಲು ಹೇಗೆ ಸಾಧ್ಯ? ಪಕ್ಷದ ಧ್ವಜ ನಮ್ಮದಾಗಿದ್ದು, ಅಜೆಂಡಾ ಕೂಡ ನಮ್ಮದೇ ಎಂದು ಶಿಂದೆ ಹೇಳಿದರು.