<p><strong>ನವದೆಹಲಿ:</strong> ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲಿಸಾ ಮಂತ್ರವನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲಿ, ಕೇಜ್ರಿವಾಲ್ ಹನುಮಾನ್ ಭಕ್ತರಾದ್ದರಿಂದ ದೆಹಲಿಯ ಎಲ್ಲಾ ಶಾಲಾ ಮಕ್ಕಳೇಕೆ ಈ ಮಂತ್ರದಿಂದ ವಂಚಿತರಾಗಬೇಕು ಎಂದು ದೆಹಲಿಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗಿಯಾ ವ್ಯಂಗ್ಯವಾಡಿದ್ದಾರೆ.</p>.<p>ಈ ಸಂಬಂಧ ಟ್ವಿಟರ್ನಲ್ಲಿ ಶುಭಾಶಯ ತಿಳಿಸಿರುವ ವಿಜಯ್ ವರ್ಗಿಯಾ ಅವರು, ಯಾರೆ ಬರಲಿ ಹನುಮಾನ್ ಆಶೀರ್ವಾದ ನೀಡುತ್ತಾರೆ. ಈಗ ಕಾಲ ಕೂಡಿ ಬಂದಿದೆ. ಹನುಮಾನ್ ಚಾಲೀಸಾ ಮಂತ್ರವನ್ನು ದೆಹಲಿಯ ಎಲ್ಲಾ ಶಾಲೆ, ಮದರಸಾ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಾಡಿ, ದೆಹಲಿ ವಿದ್ಯಾರ್ಥಿಗಳೇಕೆ ಭಜರಂಗಬಲಿಯ ಈ ಆಶೀರ್ವಾದದಿಂದವಂಚಿತರಾಗಬೇಕು ಎಂದು ಕಾಲೆಳೆದಿದ್ದಾರೆ.</p>.<p>ಮಂಗಳವಾರ ದೆಹಲಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶ ಹೊರಬಿದ್ದ ಸಮಯದಲ್ಲಿ ಕೇಜ್ರಿವಾಲ್, ಈ ದಿನ ಹನುಮಾನ್ ದೇವರ ದಿನ, ದೇವರು ದೆಹಲಿಯ ಜನರನ್ನು ಆಶೀರ್ವದಿಸಿದ್ದಾರೆ ಎಂದಿದ್ದರು.</p>.<p>ಈ ಪ್ರತಿಕ್ರಿಯೆ ಹೊರಬಿದ್ದ ನಂತರ ಬಿಜೆಪಿಯ ವಿಜಯ್ ಈ ರೀತಿ ವ್ಯಂಗ್ಯವಾಡಿದ್ದಾರೆ. 62 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಇದೇ 16ರಂದು ಭಾನುವಾರಅಧಿಕಾರವಹಿಸಿಕೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅರವಿಂದ ಕೇಜ್ರಿವಾಲ್ ಹನುಮಾನ್ ಚಾಲಿಸಾ ಮಂತ್ರವನ್ನು ಎಲ್ಲಾ ಶಾಲೆಗಳಲ್ಲಿ ಜಾರಿಗೆ ತರಲಿ, ಕೇಜ್ರಿವಾಲ್ ಹನುಮಾನ್ ಭಕ್ತರಾದ್ದರಿಂದ ದೆಹಲಿಯ ಎಲ್ಲಾ ಶಾಲಾ ಮಕ್ಕಳೇಕೆ ಈ ಮಂತ್ರದಿಂದ ವಂಚಿತರಾಗಬೇಕು ಎಂದು ದೆಹಲಿಬಿಜೆಪಿ ಮುಖಂಡ ಕೈಲಾಸ್ ವಿಜಯವರ್ಗಿಯಾ ವ್ಯಂಗ್ಯವಾಡಿದ್ದಾರೆ.</p>.<p>ಈ ಸಂಬಂಧ ಟ್ವಿಟರ್ನಲ್ಲಿ ಶುಭಾಶಯ ತಿಳಿಸಿರುವ ವಿಜಯ್ ವರ್ಗಿಯಾ ಅವರು, ಯಾರೆ ಬರಲಿ ಹನುಮಾನ್ ಆಶೀರ್ವಾದ ನೀಡುತ್ತಾರೆ. ಈಗ ಕಾಲ ಕೂಡಿ ಬಂದಿದೆ. ಹನುಮಾನ್ ಚಾಲೀಸಾ ಮಂತ್ರವನ್ನು ದೆಹಲಿಯ ಎಲ್ಲಾ ಶಾಲೆ, ಮದರಸಾ, ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯ ಮಾಡಿ, ದೆಹಲಿ ವಿದ್ಯಾರ್ಥಿಗಳೇಕೆ ಭಜರಂಗಬಲಿಯ ಈ ಆಶೀರ್ವಾದದಿಂದವಂಚಿತರಾಗಬೇಕು ಎಂದು ಕಾಲೆಳೆದಿದ್ದಾರೆ.</p>.<p>ಮಂಗಳವಾರ ದೆಹಲಿ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶ ಹೊರಬಿದ್ದ ಸಮಯದಲ್ಲಿ ಕೇಜ್ರಿವಾಲ್, ಈ ದಿನ ಹನುಮಾನ್ ದೇವರ ದಿನ, ದೇವರು ದೆಹಲಿಯ ಜನರನ್ನು ಆಶೀರ್ವದಿಸಿದ್ದಾರೆ ಎಂದಿದ್ದರು.</p>.<p>ಈ ಪ್ರತಿಕ್ರಿಯೆ ಹೊರಬಿದ್ದ ನಂತರ ಬಿಜೆಪಿಯ ವಿಜಯ್ ಈ ರೀತಿ ವ್ಯಂಗ್ಯವಾಡಿದ್ದಾರೆ. 62 ಸ್ಥಾನಗಳನ್ನು ಗೆದ್ದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿ ಇದೇ 16ರಂದು ಭಾನುವಾರಅಧಿಕಾರವಹಿಸಿಕೊಳ್ಳಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>