ಕುರುಕ್ಷೇತ್ರದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಾರ್ಚ್ 16ರಂದು ಚುನಾವಣೆಯ ದಿನಾಂಕ ಘೋಷಣೆಯಾಯಿತು. ಮಾರ್ಚ್ 21ರಂದು ನನ್ನನ್ನು ಬಂಧಿಸಿದ್ದರು. ಏಕೆಂದರೆ ಬಿಜೆಪಿಯವರು ನನ್ನನ್ನು ನೋಡಿದರೆ ಭಯಭೀತರಾಗುತ್ತಾರೆ. ನಾನು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದೆಂಬುವುದೇ ಅವರ ಉದ್ದೇಶವಾಗಿತ್ತು ಎಂದು ಕಿಡಿಕಾರಿದ್ದಾರೆ.
ಪೆಹೋವಾಗೂ ನನಗೂ ಸಂಬಂಧವಿದೆ. ಹೇಗೆ ಎಂದು ನೀವು (ಜನ) ಕೇಳಬಹುದು ಪಂಜಾಜ್ ಮುಖ್ಯಮಂತ್ರಿ ಭಗವಂತ್ ಮಾನ್ ನನ್ನ ಕಿರಿಯ ಸಹೋದರನಂತೆ. ಮಾನ್ ಅವರ ಪತ್ನಿ ಸೇರಿದಂತೆ ಅವರ ಸಂಬಂಧಿಕರು ಪೆಹೋವಾದವರು ಎಂದು ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.