<p><strong>ಲಖನೌ:</strong> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಮೈತ್ರಿಕೂಟಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ರಾಜ್ಯದ ದಲಿತರ ಓಲೈಕೆಗೆ ಭೋಜನಕೂಟದ ಮೊರೆ ಹೋಗಿದೆ.</p>.<p>ಪರಿಶಿಷ್ಟ ಜಾತಿಯ ಜನರನ್ನು ಸೆಳೆಯುವ ಉದ್ದೇಶದಿಂದ ಉತ್ತರ ಪ್ರದೇಶದ ವಿವಿಧ ಭಾಗಗಳ ದಲಿತ ಕೇರಿಗಳಲ್ಲಿ ಮಂಗಳವಾರ ಸಾಮೂಹಿಕ ಭೋಜನಕೂಟವನ್ನು ಬಿಜೆಪಿ ಏರ್ಪಡಿಸಿತ್ತು.</p>.<p>ರಾಜ್ಯದ ಎಲ್ಲ ಪಟ್ಟಣಗಳಲ್ಲೂ ಇಂತಹ ಭೋಜನ ಕೂಟಗಳು ಇಡೀ ತಿಂಗಳು ನಡೆಯಲಿವೆ ಎಂದು ಬಿಜೆಪಿ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<p>ದಲಿತರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಕೊಡುಗೆಗಳನ್ನು ಆ ಸಮುದಾಯದ ಜನರಿಗೆ ತಲುಪಿಸುವ ಹೊಣೆಯನ್ನು ಪಕ್ಷದ ದಲಿತ ನಾಯಕರಿಗೆ ನೀಡಲಾಗಿದೆ.</p>.<p>ಬಿಜೆಪಿಯು ದಲಿತ ವಿರೋಧಿ ಎಂದು ಹಣೆಪಟ್ಟಿ ಕಟ್ಟಿರುವ ಬಿಎಸ್ಪಿ ಹಾಗೂ ದಲಿತ ಸಂಘಟನೆಗಳಿಗೆ ತಿರುಗೇಟು ನೀಡಲು ಈ ವೇದಿಕೆಗಳನ್ನು ಬಳಸಿಕೊಳ್ಳಲು ಪಕ್ಷ ನಿರ್ಧರಿಸಿದೆ.</p>.<p>**</p>.<p><strong>ಸಂಬಂಧ ಮೊದಲಿನಂತಿಲ್ಲ!</strong><br />ಠಾಕೂರ್ ಹಾಗೂ ದಲಿತ ಸಮುದಾಯಗಳ ನಡುವೆರಾಜ್ಯದ ಕೆಲವು ಕಡೆ ನಡೆದ ಘರ್ಷಣೆಗಳು ಹಾಗೂ ಭೀಮಸೇನೆ ಸಂಸ್ಥಾಪಕ ಚಂದ್ರಶೇಖರ್ಬಂಧನವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅವಧಿಯಲ್ಲಿ ಜರುಗಿದವು. ಇವು ದಲಿತ ಸಮುದಾಯದಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ ಹುಟ್ಟುಹಾಕಿವೆ ಎಂಬುದನ್ನು ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಾರೆ.</p>.<p>2014ರ ಲೋಕಸಭೆ ಹಾಗೂ 2017ರ ವಿಧಾನಸಭೆ ಚುನಾವಣೆಗಳಲ್ಲಿ ದಲಿತ ಸಮುದಾಯವು ಬಿಜೆಪಿ ಕೈಹಿಡಿದಿತ್ತು. ಲೋಕಸಭೆ ಚುನಾವಣೆಯಲ್ಲಿ ಎಲ್ಲ 17 ಮೀಸಲು ಕ್ಷೇತ್ರಗಳನ್ನು ಅದು ಗೆದ್ದುಕೊಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ 86ರ ಪೈಕಿ 76 ಮೀಸಲು ಕ್ಷೇತ್ರಗಳಲ್ಲಿ ಕಮಲ ಪಕ್ಷದ ಶಾಸಕರು ಆರಿಸಿಬಂದಿದ್ದರು.</p>.<p>ಆದರೆ 2017ರ ಬಳಿಕ ಪರಿಸ್ಥಿತಿ ಬದಲಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಡುತ್ತಾರೆ.</p>.<p>ಎಸ್ಸಿ ಸಮುದಾಯದ ಬೆಂಬಲವನ್ನು ಬಿಎಸ್ಪಿ ಮತ್ತೆ ಪಡೆದುಕೊಂಡರೆ ಮತಬ್ಯಾಂಕ್ ಕತೆ ಏನು ಎಂಬುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಮರಳಿ ವಿಶ್ವಾಸ ಗಳಿಸಲು ಬಿಜೆಪಿ ಹಮ್ಮಿಕೊಂಡಿರುವ ‘ಭೋಜನ ರಾಜಕೀಯ’ ಪಕ್ಷಕ್ಕೆ ಲಾಭ ತಂದುಕೊಡಲಿದೆಯಾ ಎಂಬುದು ಈಗಿರುವ ಪ್ರಶ್ನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಹಾಗೂ ಎಸ್ಪಿ ಮೈತ್ರಿಕೂಟಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ರಾಜ್ಯದ ದಲಿತರ ಓಲೈಕೆಗೆ ಭೋಜನಕೂಟದ ಮೊರೆ ಹೋಗಿದೆ.</p>.<p>ಪರಿಶಿಷ್ಟ ಜಾತಿಯ ಜನರನ್ನು ಸೆಳೆಯುವ ಉದ್ದೇಶದಿಂದ ಉತ್ತರ ಪ್ರದೇಶದ ವಿವಿಧ ಭಾಗಗಳ ದಲಿತ ಕೇರಿಗಳಲ್ಲಿ ಮಂಗಳವಾರ ಸಾಮೂಹಿಕ ಭೋಜನಕೂಟವನ್ನು ಬಿಜೆಪಿ ಏರ್ಪಡಿಸಿತ್ತು.</p>.<p>ರಾಜ್ಯದ ಎಲ್ಲ ಪಟ್ಟಣಗಳಲ್ಲೂ ಇಂತಹ ಭೋಜನ ಕೂಟಗಳು ಇಡೀ ತಿಂಗಳು ನಡೆಯಲಿವೆ ಎಂದು ಬಿಜೆಪಿ ಮುಖಂಡರೊಬ್ಬರು ಪ್ರಜಾವಾಣಿಗೆ ತಿಳಿಸಿದ್ದಾರೆ.</p>.<p>ದಲಿತರ ಕಲ್ಯಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನೀಡಿರುವ ಕೊಡುಗೆಗಳನ್ನು ಆ ಸಮುದಾಯದ ಜನರಿಗೆ ತಲುಪಿಸುವ ಹೊಣೆಯನ್ನು ಪಕ್ಷದ ದಲಿತ ನಾಯಕರಿಗೆ ನೀಡಲಾಗಿದೆ.</p>.<p>ಬಿಜೆಪಿಯು ದಲಿತ ವಿರೋಧಿ ಎಂದು ಹಣೆಪಟ್ಟಿ ಕಟ್ಟಿರುವ ಬಿಎಸ್ಪಿ ಹಾಗೂ ದಲಿತ ಸಂಘಟನೆಗಳಿಗೆ ತಿರುಗೇಟು ನೀಡಲು ಈ ವೇದಿಕೆಗಳನ್ನು ಬಳಸಿಕೊಳ್ಳಲು ಪಕ್ಷ ನಿರ್ಧರಿಸಿದೆ.</p>.<p>**</p>.<p><strong>ಸಂಬಂಧ ಮೊದಲಿನಂತಿಲ್ಲ!</strong><br />ಠಾಕೂರ್ ಹಾಗೂ ದಲಿತ ಸಮುದಾಯಗಳ ನಡುವೆರಾಜ್ಯದ ಕೆಲವು ಕಡೆ ನಡೆದ ಘರ್ಷಣೆಗಳು ಹಾಗೂ ಭೀಮಸೇನೆ ಸಂಸ್ಥಾಪಕ ಚಂದ್ರಶೇಖರ್ಬಂಧನವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅವಧಿಯಲ್ಲಿ ಜರುಗಿದವು. ಇವು ದಲಿತ ಸಮುದಾಯದಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ ಹುಟ್ಟುಹಾಕಿವೆ ಎಂಬುದನ್ನು ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಾರೆ.</p>.<p>2014ರ ಲೋಕಸಭೆ ಹಾಗೂ 2017ರ ವಿಧಾನಸಭೆ ಚುನಾವಣೆಗಳಲ್ಲಿ ದಲಿತ ಸಮುದಾಯವು ಬಿಜೆಪಿ ಕೈಹಿಡಿದಿತ್ತು. ಲೋಕಸಭೆ ಚುನಾವಣೆಯಲ್ಲಿ ಎಲ್ಲ 17 ಮೀಸಲು ಕ್ಷೇತ್ರಗಳನ್ನು ಅದು ಗೆದ್ದುಕೊಂಡಿತ್ತು. ವಿಧಾನಸಭೆ ಚುನಾವಣೆಯಲ್ಲಿ 86ರ ಪೈಕಿ 76 ಮೀಸಲು ಕ್ಷೇತ್ರಗಳಲ್ಲಿ ಕಮಲ ಪಕ್ಷದ ಶಾಸಕರು ಆರಿಸಿಬಂದಿದ್ದರು.</p>.<p>ಆದರೆ 2017ರ ಬಳಿಕ ಪರಿಸ್ಥಿತಿ ಬದಲಾಗಿದೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿವೆ ಎಂದು ರಾಜಕೀಯ ವಿಶ್ಲೇಷಕರೊಬ್ಬರು ಅಭಿಪ್ರಾಯಪಡುತ್ತಾರೆ.</p>.<p>ಎಸ್ಸಿ ಸಮುದಾಯದ ಬೆಂಬಲವನ್ನು ಬಿಎಸ್ಪಿ ಮತ್ತೆ ಪಡೆದುಕೊಂಡರೆ ಮತಬ್ಯಾಂಕ್ ಕತೆ ಏನು ಎಂಬುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ. ಮರಳಿ ವಿಶ್ವಾಸ ಗಳಿಸಲು ಬಿಜೆಪಿ ಹಮ್ಮಿಕೊಂಡಿರುವ ‘ಭೋಜನ ರಾಜಕೀಯ’ ಪಕ್ಷಕ್ಕೆ ಲಾಭ ತಂದುಕೊಡಲಿದೆಯಾ ಎಂಬುದು ಈಗಿರುವ ಪ್ರಶ್ನೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>