<p><strong>ಬಾಲ್ವೇಶ್ವರ:</strong> ಬೆಂಗಳೂರಿನಲ್ಲಿ ಮೃತಪಟ್ಟ ಒಡಿಶಾದ ವ್ಯಕ್ತಿಯ ಶವಪೆಟ್ಟಿಗೆ ಮೇಲೆ ತಪ್ಪಾದ ಚೀಟಿ ಅಂಟಿಸಿದ್ದರಿಂದ, ಬೇರೊಬ್ಬ ವ್ಯಕ್ತಿಯ ಮೃತದೇಹ ಸ್ವೀಕರಿಸಿದ್ದೇವೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.</p><p>ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಕೇಶ್ ಶಾ (21) ಆಗಸ್ಟ್ 15 ರಂದು ವಿದ್ಯುತ್ ಅವಘಢದಿಂದ ಮೃತಪಟ್ಟಿದ್ದರು. ಪಶ್ಚಿಮ ಬಂಗಾಳದ ಸಿಲಿಗುರಿ ಮೂಲಕದ ಮತ್ತೊಬ್ಬ ವ್ಯಕ್ತಿಯ ಮೃತದೇಹದೊಂದಿಗೆ ರಾಕೇಶ್ ಅವರ ಮೃತದೇಹವನ್ನೂ ಒಂದೇ ಆ್ಯಂಬ್ಯುಲೆನ್ಸ್ನಲ್ಲಿ ಸಾಗಿಸಲಾಗಿತ್ತು.</p><p>ರಾಕೇಶ್ ಅವರ ಮೃತದೇಹವೆಂದು ಗುರುತು ಮಾಡಲಾಗಿದ್ದ ಶವಪೆಟ್ಟಿಗೆಯನ್ನು ಮುಲಿಸಿಂಗ್ ಗ್ರಾಮದಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಆ್ಯಂಬುಲೆನ್ಸ್ ಭಾನುವಾರ ಸಿಲಿಗುರಿಗೆ ತೆರಳಿದೆ. ಆದರೆ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿರುವ ಮೃತದೇಹವು ರಾಕೇಶ್ ಅವರದ್ದಲ್ಲ ಎಂದು ಗೊತ್ತಾಗಿದೆ.</p><p>ಕೂಡಲೇ, ಶವಪೆಟ್ಟಿಗೆಯನ್ನು ರವಾನಿಸಲು ವ್ಯವಸ್ಥೆ ಮಾಡಿದ ಕಂಪನಿಯನ್ನು ಸಂಪರ್ಕಿಸಿ, ಸಿಲಿಗುರಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ಅನ್ನು ಹಿಂದೆ ಕರೆಸಲಾಯಿತು. </p><p>ಡಿಸ್ಚಾರ್ಜ್ ಪಾಯಿಂಟ್ನಲ್ಲಿ ತಪ್ಪು ಚೀಟಿಗಳನ್ನು ಅಂಟಿಸಿದ್ದರಿಂದ ಈ ಅವ್ಯವಸ್ಥೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಲ್ವೇಶ್ವರ:</strong> ಬೆಂಗಳೂರಿನಲ್ಲಿ ಮೃತಪಟ್ಟ ಒಡಿಶಾದ ವ್ಯಕ್ತಿಯ ಶವಪೆಟ್ಟಿಗೆ ಮೇಲೆ ತಪ್ಪಾದ ಚೀಟಿ ಅಂಟಿಸಿದ್ದರಿಂದ, ಬೇರೊಬ್ಬ ವ್ಯಕ್ತಿಯ ಮೃತದೇಹ ಸ್ವೀಕರಿಸಿದ್ದೇವೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.</p><p>ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ರಾಕೇಶ್ ಶಾ (21) ಆಗಸ್ಟ್ 15 ರಂದು ವಿದ್ಯುತ್ ಅವಘಢದಿಂದ ಮೃತಪಟ್ಟಿದ್ದರು. ಪಶ್ಚಿಮ ಬಂಗಾಳದ ಸಿಲಿಗುರಿ ಮೂಲಕದ ಮತ್ತೊಬ್ಬ ವ್ಯಕ್ತಿಯ ಮೃತದೇಹದೊಂದಿಗೆ ರಾಕೇಶ್ ಅವರ ಮೃತದೇಹವನ್ನೂ ಒಂದೇ ಆ್ಯಂಬ್ಯುಲೆನ್ಸ್ನಲ್ಲಿ ಸಾಗಿಸಲಾಗಿತ್ತು.</p><p>ರಾಕೇಶ್ ಅವರ ಮೃತದೇಹವೆಂದು ಗುರುತು ಮಾಡಲಾಗಿದ್ದ ಶವಪೆಟ್ಟಿಗೆಯನ್ನು ಮುಲಿಸಿಂಗ್ ಗ್ರಾಮದಲ್ಲಿರುವ ಅವರ ಕುಟುಂಬಕ್ಕೆ ಹಸ್ತಾಂತರಿಸಿ ಆ್ಯಂಬುಲೆನ್ಸ್ ಭಾನುವಾರ ಸಿಲಿಗುರಿಗೆ ತೆರಳಿದೆ. ಆದರೆ ಶವಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿರುವ ಮೃತದೇಹವು ರಾಕೇಶ್ ಅವರದ್ದಲ್ಲ ಎಂದು ಗೊತ್ತಾಗಿದೆ.</p><p>ಕೂಡಲೇ, ಶವಪೆಟ್ಟಿಗೆಯನ್ನು ರವಾನಿಸಲು ವ್ಯವಸ್ಥೆ ಮಾಡಿದ ಕಂಪನಿಯನ್ನು ಸಂಪರ್ಕಿಸಿ, ಸಿಲಿಗುರಿಗೆ ತೆರಳುತ್ತಿದ್ದ ಆ್ಯಂಬುಲೆನ್ಸ್ ಅನ್ನು ಹಿಂದೆ ಕರೆಸಲಾಯಿತು. </p><p>ಡಿಸ್ಚಾರ್ಜ್ ಪಾಯಿಂಟ್ನಲ್ಲಿ ತಪ್ಪು ಚೀಟಿಗಳನ್ನು ಅಂಟಿಸಿದ್ದರಿಂದ ಈ ಅವ್ಯವಸ್ಥೆ ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>