<p><strong>ಲಖನೌ:</strong> ‘ಪಾಕಿಸ್ತಾನದ ಪ್ರತಿ ಮೂಲೆಯನ್ನೂ ಭಾರತದ ಬ್ರಹ್ಮೋಸ್ ಕ್ಷಿಪಣಿ ತಲುಪುವ ಸಾಮರ್ಥ್ಯವಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಕೇವಲ ಒಂದು ಟ್ರೇಲರ್ ಅಷ್ಟೇ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ.</p><p>ಉತ್ತರ ಪ್ರದೇಶದ ಲಖನೌನಲ್ಲಿ ಸ್ಥಾಪನೆಗೊಂಡಿರುವ ಬ್ರಹ್ಮೋಸ್ ಏರೋಸ್ಪೇಸ್ನಲ್ಲಿ ತಯಾರಾದ ಕ್ಷಿಪಣಿಯ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.</p><p>‘ಭಾರತದ ಸಶಸ್ತ್ರ ದಳದ ಪ್ರಮುಖ ಆಧಾರಸ್ತಂಭವೇ ಬ್ರಹ್ಮೋಸ್ ಕ್ಷಿಪಣಿ. ಕನಸನ್ನು ನನಸಾಗಿಸುವ ದೇಶದ ಜನರ ನಂಬಿಕೆಯನ್ನು ಇದು ಇನ್ನಷ್ಟು ಬಲಪಡಿಸಿದೆ’ ಎಂದಿದ್ದಾರೆ.</p><p>‘ಈ ಐತಿಹಾಸಿಕ ಕ್ಷಣವು ಉತ್ತರ ಪ್ರದೇಶದ ರಕ್ಷಣಾ ಕ್ಷೇತ್ರದ ಕೈಗಾರಿಕಾ ಕಾರಿಡಾರ್ನ ಪ್ರಗತಿಯ ಆರಂಭವೂ ಹೌದು. ಇದರ ಮೂಲಕ ಆತ್ಮನಿರ್ಭರ ಭಾರತದ ಮೂಲಕ ರಕ್ಷಣಾ ಸಾಮಗ್ರಿಗಳ ತಯಾರಿಕೆಗೆ ಹೊಸ ದಿಸೆ ಸಿಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.</p><p>ಲಖನೌನ ಸರೋಜಿನಿ ನಗರದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ನ ಕ್ಷಿಪಣಿ ತಯಾರಿಕೆ ಮತ್ತು ಪರೀಕ್ಷಾ ಕೇಂದ್ರವಿದೆ. ಈ ಘಟಕವು ಮೇ 11ರಂದು ಉದ್ಘಾಟನೆಯಾಗಿತ್ತು. ಇಲ್ಲಿ ತಯಾರಾಗುವ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳ ನಂತರ, ಭಾರತೀಯ ಸೇನೆಯಲ್ಲಿ ಅದನ್ನು ನಿಯೋಜಿಸಲಾಗುತ್ತದೆ.</p><p>ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಸಚಿವ ನಂದ ಗೋಪಾಲ ಗುಪ್ತಾ ನಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಖನೌ:</strong> ‘ಪಾಕಿಸ್ತಾನದ ಪ್ರತಿ ಮೂಲೆಯನ್ನೂ ಭಾರತದ ಬ್ರಹ್ಮೋಸ್ ಕ್ಷಿಪಣಿ ತಲುಪುವ ಸಾಮರ್ಥ್ಯವಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯು ಕೇವಲ ಒಂದು ಟ್ರೇಲರ್ ಅಷ್ಟೇ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಶನಿವಾರ ಹೇಳಿದ್ದಾರೆ.</p><p>ಉತ್ತರ ಪ್ರದೇಶದ ಲಖನೌನಲ್ಲಿ ಸ್ಥಾಪನೆಗೊಂಡಿರುವ ಬ್ರಹ್ಮೋಸ್ ಏರೋಸ್ಪೇಸ್ನಲ್ಲಿ ತಯಾರಾದ ಕ್ಷಿಪಣಿಯ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.</p><p>‘ಭಾರತದ ಸಶಸ್ತ್ರ ದಳದ ಪ್ರಮುಖ ಆಧಾರಸ್ತಂಭವೇ ಬ್ರಹ್ಮೋಸ್ ಕ್ಷಿಪಣಿ. ಕನಸನ್ನು ನನಸಾಗಿಸುವ ದೇಶದ ಜನರ ನಂಬಿಕೆಯನ್ನು ಇದು ಇನ್ನಷ್ಟು ಬಲಪಡಿಸಿದೆ’ ಎಂದಿದ್ದಾರೆ.</p><p>‘ಈ ಐತಿಹಾಸಿಕ ಕ್ಷಣವು ಉತ್ತರ ಪ್ರದೇಶದ ರಕ್ಷಣಾ ಕ್ಷೇತ್ರದ ಕೈಗಾರಿಕಾ ಕಾರಿಡಾರ್ನ ಪ್ರಗತಿಯ ಆರಂಭವೂ ಹೌದು. ಇದರ ಮೂಲಕ ಆತ್ಮನಿರ್ಭರ ಭಾರತದ ಮೂಲಕ ರಕ್ಷಣಾ ಸಾಮಗ್ರಿಗಳ ತಯಾರಿಕೆಗೆ ಹೊಸ ದಿಸೆ ಸಿಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.</p><p>ಲಖನೌನ ಸರೋಜಿನಿ ನಗರದಲ್ಲಿ ಬ್ರಹ್ಮೋಸ್ ಏರೋಸ್ಪೇಸ್ನ ಕ್ಷಿಪಣಿ ತಯಾರಿಕೆ ಮತ್ತು ಪರೀಕ್ಷಾ ಕೇಂದ್ರವಿದೆ. ಈ ಘಟಕವು ಮೇ 11ರಂದು ಉದ್ಘಾಟನೆಯಾಗಿತ್ತು. ಇಲ್ಲಿ ತಯಾರಾಗುವ ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗಳ ನಂತರ, ಭಾರತೀಯ ಸೇನೆಯಲ್ಲಿ ಅದನ್ನು ನಿಯೋಜಿಸಲಾಗುತ್ತದೆ.</p><p>ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಸಚಿವ ನಂದ ಗೋಪಾಲ ಗುಪ್ತಾ ನಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>