<p><strong>ತಿರುವನಂತಪುರ: </strong>ಕೇರಳದ ರಾಜ್ಯಪಾಲರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಕುಲಪತಿಗಳು ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ಕೇರಳ ಹೈಕೋರ್ಟ್ ಸೋಮವಾರ ತಿಳಿಸಿದೆ. ಇದರಿಂದ ಕೇರಳದ ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳು ಸ್ವಲ್ಪ ನಿರಾಳರಾದಂತಾಗಿದೆ.</p>.<p>ಕುಲಪತಿಗಳ ಆಯ್ಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ನಡೆಯುತ್ತಿದ್ದ ಆರೋಪ- ಪ್ರತ್ಯಾರೋಪಗಳು ಸೋಮವಾರ ತಾರಕಕ್ಕೇರಿ, ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು.</p>.<p>ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿ ಉಲ್ಲಂಘನೆಯಾಗಿರುವ ಕಾರಣ ರಾಜ್ಯದ 9 ವಿಶ್ವವಿದ್ಯಾಲಯಗಳ ಕುಲಪತಿಗಳು ಸೋಮವಾರ ಬೆಳಿಗ್ಗೆ 11.30ರೊಳಗೆ ರಾಜೀನಾಮೆ ನೀಡಬೇಕು ಎಂದು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಭಾನುವಾರ ನಿರ್ದೇಶಿಸಿದ್ದರು. ಆದರೆ ರಾಜೀನಾಮೆ ನೀಡಲು ಕುಲಪತಿಗಳು ನಿರಾಕರಿಸಿದ ಕಾರಣ, ಈ ಎಲ್ಲ ಕುಲಪತಿಗಳಿಗೆ ರಾಜ್ಯಪಾಲರು ಸೋಮವಾರ ಷೋಕಾಸ್ ನೋಟಿಸ್ ಜಾರಿಗೊಳಿಸಿದರು.</p>.<p>ಇತ್ತೀಚೆಗೆ ಸುಪ್ರೀಂ ಕೋರ್ಟ್, ಕೇರಳದ ‘ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ’ ಕುಲಪತಿ ಎಂ.ಎಸ್.ರಾಜಶ್ರೀ ಅವರ ನೇಮಕಾತಿಯಲ್ಲಿ ಯುಜಿಸಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅವರ ನೇಮಕವನ್ನು ರದ್ದುಪಡಿಸಿತ್ತು. ಇದೇ ಆದೇಶವನ್ನು ಉಲ್ಲೇಖಿಸಿ ರಾಜ್ಯಪಾಲರು, ಈ ರೀತಿ ನೇಮಕವಾಗಿದ್ದ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ನಿರ್ದೇಶಿಸಿದ್ದರು.</p>.<p class="Subhead"><strong>ಮುಖ್ಯಮಂತ್ರಿ ವಿರೋಧ:</strong><br />‘ರಾಜ್ಯಪಾಲರ ನಿರ್ದೇಶನ ಕಾನೂನುಬಾಹಿರವಾಗಿದ್ದು, ಮೂಲಭೂತ ನೈಸರ್ಗಿಕ ನ್ಯಾಯವನ್ನು ನಿರಾಕರಿಸಿದಂತಾಗಿದೆ. ಹೀಗಾಗಿ ಅದನ್ನು ಅನುರಿಸುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದರು.</p>.<p>‘ರಾಜ್ಯಪಾಲರು ಹಿಂದುತ್ವದ ಸಿದ್ಧಾಂತಗಳನ್ನು ಜಾರಿಗೊಳಿಸಲು ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ. ಅವರ ಈ ರೀತಿಯ ಕ್ರಮಗಳಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತದೆ’ ಎಂದು ಅವರು ಹೇಳಿದರು.</p>.<p>ಇದೇ ವೇಳೆ ರಾಜ್ಯಪಾಲರ ನಿರ್ದೇಶನವನ್ನು ಪ್ರಶ್ನಿಸಿ ಕುಲಪತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ ನಡೆಸುವುದಾಗಿ ಹೈಕೋರ್ಟ್ ತಿಳಿಸಿತು.</p>.<p><strong>ರಾಜ್ಯಪಾಲರಿಂದ ಷೋಕಾಸ್ ನೋಟಿಸ್: </strong><br />ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಾಜ್ಯಪಾಲರು, ‘ರಾಜೀನಾಮೆ ನೀಡದ ಕುಲಪತಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ನ.3ರಂದು ಸಂಜೆ 5ಗಂಟೆಯವರೆಗೆ ಸಮಯ ನೀಡಲಾಗಿದೆ. ಕುಲಪತಿಗಳು ನೀಡುವ ಉತ್ತರವನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.</p>.<p>‘ರಾಜೀನಾಮೆ ನೀಡುವ ಮೂಲಕ ಗೌರವಯುತ ನಿರ್ಗಮನಕ್ಕೆ ಕುಲಪತಿಗಳಿಗೆ ಅವಕಾಶ ನೀಡಲಾಗಿತ್ತೇ ಹೊರತು ಅವರನ್ನು ವಜಾಗೊಳಿಸಿರಲಿಲ್ಲ. ಹೀಗಾಗಿ ನೈಸರ್ಗಿಕ ನ್ಯಾಯ ನಿರಾಕರಣೆಯಾಗಿಲ್ಲ’ ಎಂದು ಖಾನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.</p>.<p>ಇದೇ ವೇಳೆ ಅರ್ಜಿದಾರರ ಮನವಿ ಆಲಿಸಿದ ಹೈಕೋರ್ಟ್, ರಾಜ್ಯಪಾಲರು ಈಗಾಗಲೇ ಷೋಕಾಸ್ ನೋಟಿಸ್ ನೀಡಿದ್ದಾರೆ. ಅದಕ್ಕೆ ನೀಡುವ ಉತ್ತರದ ಆಧಾರದ ಮೇಲೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುವವರೆಗೆ ಕುಲಪತಿಗಳು ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ತಿಳಿಸಿತು.</p>.<p>ಕುಲಪತಿಗಳ ರಾಜೀನಾಮೆ ಕೇಳುವ ಮೊದಲು ಅವರಿಗೆ ಸಮರ್ಥಿಸಿಕೊಳ್ಳಲು ಅವಕಾಶ ನೀಡದಿರುವ ಕುರಿತು ಹೈಕೋರ್ಟ್ನಿಂದ ಟೀಕೆಗಳು ಎದುರಾಗಬಹುದು ಎಂಬುದನ್ನು ಅರಿತ ರಾಜ್ಯಪಾಲರು, ಕೂಡಲೇ 9 ಕುಲಪತಿಗಳಿಗೆ ಷೋಕಾಸ್ ನೋಟಿಸ್ ನೀಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.</p>.<p><strong>ಕೆಲ ಮಾಧ್ಯಮಗಳಿಗೆ ನಿರಾಕರಣೆ:</strong><br />ರಾಜ್ಯಪಾಲರು ಸೋಮವಾರ ನಡೆಸಿದ ಸುದ್ದಿಗೋಷ್ಠಿಗೆ ಬರಲು ‘ಕೈರಳಿ’, ‘ರಿಪೋರ್ಟರ್’, ‘ಮೀಡಿಯಾ ಒನ್’, ‘ಜೈ ಹಿಂದ್’ ಸುದ್ದಿ ವಾಹಿನಿಗಳಿಗೆ ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿರುವ ಕೇರಳದ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ‘ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ’ ಎಂದು ದೂರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿರುವನಂತಪುರ: </strong>ಕೇರಳದ ರಾಜ್ಯಪಾಲರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ ಕುಲಪತಿಗಳು ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ಕೇರಳ ಹೈಕೋರ್ಟ್ ಸೋಮವಾರ ತಿಳಿಸಿದೆ. ಇದರಿಂದ ಕೇರಳದ ಒಂಬತ್ತು ವಿಶ್ವವಿದ್ಯಾಲಯಗಳ ಕುಲಪತಿಗಳು ಸ್ವಲ್ಪ ನಿರಾಳರಾದಂತಾಗಿದೆ.</p>.<p>ಕುಲಪತಿಗಳ ಆಯ್ಕೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರದ ನಡುವೆ ನಡೆಯುತ್ತಿದ್ದ ಆರೋಪ- ಪ್ರತ್ಯಾರೋಪಗಳು ಸೋಮವಾರ ತಾರಕಕ್ಕೇರಿ, ಪ್ರಕರಣ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು.</p>.<p>ನೇಮಕಾತಿಯಲ್ಲಿ ಯುಜಿಸಿ ನಿಯಮಾವಳಿ ಉಲ್ಲಂಘನೆಯಾಗಿರುವ ಕಾರಣ ರಾಜ್ಯದ 9 ವಿಶ್ವವಿದ್ಯಾಲಯಗಳ ಕುಲಪತಿಗಳು ಸೋಮವಾರ ಬೆಳಿಗ್ಗೆ 11.30ರೊಳಗೆ ರಾಜೀನಾಮೆ ನೀಡಬೇಕು ಎಂದು ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಭಾನುವಾರ ನಿರ್ದೇಶಿಸಿದ್ದರು. ಆದರೆ ರಾಜೀನಾಮೆ ನೀಡಲು ಕುಲಪತಿಗಳು ನಿರಾಕರಿಸಿದ ಕಾರಣ, ಈ ಎಲ್ಲ ಕುಲಪತಿಗಳಿಗೆ ರಾಜ್ಯಪಾಲರು ಸೋಮವಾರ ಷೋಕಾಸ್ ನೋಟಿಸ್ ಜಾರಿಗೊಳಿಸಿದರು.</p>.<p>ಇತ್ತೀಚೆಗೆ ಸುಪ್ರೀಂ ಕೋರ್ಟ್, ಕೇರಳದ ‘ಎಪಿಜೆ ಅಬ್ದುಲ್ ಕಲಾಂ ತಾಂತ್ರಿಕ ವಿಶ್ವವಿದ್ಯಾಲಯದ’ ಕುಲಪತಿ ಎಂ.ಎಸ್.ರಾಜಶ್ರೀ ಅವರ ನೇಮಕಾತಿಯಲ್ಲಿ ಯುಜಿಸಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅವರ ನೇಮಕವನ್ನು ರದ್ದುಪಡಿಸಿತ್ತು. ಇದೇ ಆದೇಶವನ್ನು ಉಲ್ಲೇಖಿಸಿ ರಾಜ್ಯಪಾಲರು, ಈ ರೀತಿ ನೇಮಕವಾಗಿದ್ದ ಕುಲಪತಿಗಳಿಗೆ ರಾಜೀನಾಮೆ ಸಲ್ಲಿಸುವಂತೆ ನಿರ್ದೇಶಿಸಿದ್ದರು.</p>.<p class="Subhead"><strong>ಮುಖ್ಯಮಂತ್ರಿ ವಿರೋಧ:</strong><br />‘ರಾಜ್ಯಪಾಲರ ನಿರ್ದೇಶನ ಕಾನೂನುಬಾಹಿರವಾಗಿದ್ದು, ಮೂಲಭೂತ ನೈಸರ್ಗಿಕ ನ್ಯಾಯವನ್ನು ನಿರಾಕರಿಸಿದಂತಾಗಿದೆ. ಹೀಗಾಗಿ ಅದನ್ನು ಅನುರಿಸುವ ಅಗತ್ಯವಿಲ್ಲ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬೆಳಿಗ್ಗೆ ಸುದ್ದಿಗೋಷ್ಠಿಯಲ್ಲಿ ವಿರೋಧ ವ್ಯಕ್ತಪಡಿಸಿದರು.</p>.<p>‘ರಾಜ್ಯಪಾಲರು ಹಿಂದುತ್ವದ ಸಿದ್ಧಾಂತಗಳನ್ನು ಜಾರಿಗೊಳಿಸಲು ಹೀಗೆಲ್ಲ ನಡೆದುಕೊಳ್ಳುತ್ತಿದ್ದಾರೆ. ಅವರ ಈ ರೀತಿಯ ಕ್ರಮಗಳಿಗೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತದೆ’ ಎಂದು ಅವರು ಹೇಳಿದರು.</p>.<p>ಇದೇ ವೇಳೆ ರಾಜ್ಯಪಾಲರ ನಿರ್ದೇಶನವನ್ನು ಪ್ರಶ್ನಿಸಿ ಕುಲಪತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ ನಡೆಸುವುದಾಗಿ ಹೈಕೋರ್ಟ್ ತಿಳಿಸಿತು.</p>.<p><strong>ರಾಜ್ಯಪಾಲರಿಂದ ಷೋಕಾಸ್ ನೋಟಿಸ್: </strong><br />ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ರಾಜ್ಯಪಾಲರು, ‘ರಾಜೀನಾಮೆ ನೀಡದ ಕುಲಪತಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ನ.3ರಂದು ಸಂಜೆ 5ಗಂಟೆಯವರೆಗೆ ಸಮಯ ನೀಡಲಾಗಿದೆ. ಕುಲಪತಿಗಳು ನೀಡುವ ಉತ್ತರವನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದರು.</p>.<p>‘ರಾಜೀನಾಮೆ ನೀಡುವ ಮೂಲಕ ಗೌರವಯುತ ನಿರ್ಗಮನಕ್ಕೆ ಕುಲಪತಿಗಳಿಗೆ ಅವಕಾಶ ನೀಡಲಾಗಿತ್ತೇ ಹೊರತು ಅವರನ್ನು ವಜಾಗೊಳಿಸಿರಲಿಲ್ಲ. ಹೀಗಾಗಿ ನೈಸರ್ಗಿಕ ನ್ಯಾಯ ನಿರಾಕರಣೆಯಾಗಿಲ್ಲ’ ಎಂದು ಖಾನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.</p>.<p>ಇದೇ ವೇಳೆ ಅರ್ಜಿದಾರರ ಮನವಿ ಆಲಿಸಿದ ಹೈಕೋರ್ಟ್, ರಾಜ್ಯಪಾಲರು ಈಗಾಗಲೇ ಷೋಕಾಸ್ ನೋಟಿಸ್ ನೀಡಿದ್ದಾರೆ. ಅದಕ್ಕೆ ನೀಡುವ ಉತ್ತರದ ಆಧಾರದ ಮೇಲೆ ರಾಜ್ಯಪಾಲರು ನಿರ್ಧಾರ ತೆಗೆದುಕೊಳ್ಳುವವರೆಗೆ ಕುಲಪತಿಗಳು ಅಧಿಕಾರದಲ್ಲಿ ಮುಂದುವರಿಯಬಹುದು ಎಂದು ತಿಳಿಸಿತು.</p>.<p>ಕುಲಪತಿಗಳ ರಾಜೀನಾಮೆ ಕೇಳುವ ಮೊದಲು ಅವರಿಗೆ ಸಮರ್ಥಿಸಿಕೊಳ್ಳಲು ಅವಕಾಶ ನೀಡದಿರುವ ಕುರಿತು ಹೈಕೋರ್ಟ್ನಿಂದ ಟೀಕೆಗಳು ಎದುರಾಗಬಹುದು ಎಂಬುದನ್ನು ಅರಿತ ರಾಜ್ಯಪಾಲರು, ಕೂಡಲೇ 9 ಕುಲಪತಿಗಳಿಗೆ ಷೋಕಾಸ್ ನೋಟಿಸ್ ನೀಡಲು ನಿರ್ಧರಿಸಿದರು ಎಂದು ಮೂಲಗಳು ತಿಳಿಸಿವೆ.</p>.<p><strong>ಕೆಲ ಮಾಧ್ಯಮಗಳಿಗೆ ನಿರಾಕರಣೆ:</strong><br />ರಾಜ್ಯಪಾಲರು ಸೋಮವಾರ ನಡೆಸಿದ ಸುದ್ದಿಗೋಷ್ಠಿಗೆ ಬರಲು ‘ಕೈರಳಿ’, ‘ರಿಪೋರ್ಟರ್’, ‘ಮೀಡಿಯಾ ಒನ್’, ‘ಜೈ ಹಿಂದ್’ ಸುದ್ದಿ ವಾಹಿನಿಗಳಿಗೆ ಅವಕಾಶ ನೀಡಲಿಲ್ಲ. ಇದನ್ನು ವಿರೋಧಿಸಿರುವ ಕೇರಳದ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ‘ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಅತಿಕ್ರಮಣ’ ಎಂದು ದೂರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>