‘ಪಕ್ಷದ ಬಗ್ಗೆ ಆಂತರಿಕ ಚರ್ಚೆ’
ಬಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ ರಾವ್ ಅವರು ಕೆಲ ದೆವ್ವಗಳೊಂದಿಗೆ ಸುತ್ತುವರಿದಿದ್ದಾರೆ ಎಂದು ಸಹೋದರಿ ಕೆ. ಕವಿತಾ ಅವರು ಬರೆದ ಪತ್ರದ ಕುರಿತು ಪ್ರತಿಕ್ರಿಯಿಸಿದ ರಾಮರಾವ್ ‘ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಆ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬಾರದು’ ಎಂದು ಹೇಳಿದರು. ‘ರೇವಂತ ರೆಡ್ಡಿ ತೆಲಂಗಾಣದ ದೆವ್ವ. ಬಿಆರ್ಎಸ್ನಲ್ಲಿ ಪ್ರಜಾಪ್ರಭುತ್ವವಿದೆ. ಯಾವುದೇ ನಾಯಕರು ಲಿಖಿತ ಅಥವಾ ಮೌಖಿಕವಾಗಿ ಸಲಹೆಗಳನ್ನು ನೀಡಬಹುದು. ನಾವು ಯಾರೇ ಆಗಿರಲಿ ಪಕ್ಷದ ಯಾವುದೇ ಸ್ಥಾನದಲ್ಲಿರಲಿ ಆಂತರಿಕವಾಗಿ ಚರ್ಚಿಸಬೇಕಾದ ವಿಷಯಗಳನ್ನು ಆಂತರಿಕವಾಗಿಯೇ ಚರ್ಚಿಸಬೇಕು. ಅದಕ್ಕೆ ಪಕ್ಷದ ವೇದಿಕೆ ಇದೆ. ಪಕ್ಷದ ಅಧ್ಯಕ್ಷರನ್ನು ಭೇಟಿಯಾಗಬಹುದು’ ಎಂದರು.