<p><strong>ಹೈದರಾಬಾದ್</strong>: ತೆಲಂಗಾಣ ರಾಜ್ಯ ಲಾಂಛನದಿಂದ ಚಾರ್ಮಿನಾರ್ ಮತ್ತು ಕಾಕತೀಯ ಕಮಾನುಗಳನ್ನು ತೆಗೆದು ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಅದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷ ಬಿಆರ್ಎಸ್ ಹೇಳಿದೆ.</p><p>ಬಿಆರ್ಎಸ್ನ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್ ಅವರು ಪಕ್ಷದ ಇತರೆ ನಾಯಕರ ಜೊತೆ ಗುರುವಾರ ಚಾರ್ಮಿನಾರ್ ಬಳಿಗೆ ಭೇಟಿ ನೀಡಿದ್ದು, ಚಾರ್ಮಿನಾರ್ ಹೈದರಾಬಾದ್ನ ಗುರುತು ಎಂದು ಹೇಳಿದ್ದಾರೆ.</p><p>ಕಳೆದ 10 ವರ್ಷಗಳಲ್ಲಿ ಬಿಆರ್ಎಸ್ ಸರ್ಕಾರ ಮಾಡಿರುವ ಉತ್ತಮ ಕೆಲಸಗಳಿಂದ ಕೆ. ಚಂದ್ರಶೇಖರ ರಾವ್ ಅವರಿಗೆ ಹೆಸರು ಬರುವುದು ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ ಎಂದು ಅವರು ಆರೋಪಿಸಿದರು.</p><p>ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ನಿಕೃಷ್ಟ ಎಂಬಂತೆ ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.</p><p>‘ತೆಲಂಗಾಣದ ಅಧಿಕೃತ ಲಾಂಛನದಲ್ಲಿರುವ ಚಾರ್ಮಿನಾರ್ ಮತ್ತು ವಾರಂಗಲ್ನ ಪ್ರಸಿದ್ಧ ಕಾಕತೀಯ ಸಾಮ್ರಾಜ್ಯದ ಕಮಾನಿನ ಚಿತ್ರ ತೆಗೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತೇವೆ. ಈ ಕುರಿತಂತೆ ಬಿಆರ್ಎಸ್ ಪ್ರತಿಭಟನೆ ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.</p><p> ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.</p><p>ತೆಲಂಗಾಣದ ಸಂಘರ್ಷ ಮತ್ತು ಬಲಿದಾನಗಳನ್ನು ಪ್ರತಿಬಿಂಬಿಸುವ ಹೊಸ ರಾಜ್ಯ ಲಾಂಛನ, ಹೊಸ ನಾಡಗೀತೆ ತಯಾರಿಗೆ ರಾಜ್ಯ ಸರ್ಕಾರ ಮುಂದಾಗುತ್ತಿದ್ದಂತೆ ಬಿಆರ್ಎಸ್ ವಿರೋಧ ವ್ಯಕ್ತಪಡಿಸಿದೆ.</p><p>ತೆಲಂಗಾಣದ ನಾಡ ಗೀತೆ ‘ಜಯ ಜಯ ಹೇ ತೆಲಂಗಾಣ’ಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡುವ ಪ್ರಸ್ತಾಪಕ್ಕೂ ಬಿಆರ್ಎಸ್ ನಾಯಕರು ವಿರೋಧಿಸಿದ್ದಾರೆ.</p><p>‘ಟಾಲಿವುಡ್ ಮತ್ತು ತೆಲಂಗಾಣ ಚಳುವಳಿ ಬೇರೆ ಬೇರೆ. ಟಾಲಿವುಡ್ ಇರುವುದು ಮನರಂಜನೆಗೆ. ಆದರೆ, ತೆಲಂಗಾಣ ನಾಡಗೀತೆಯು ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ರಾಜ್ಯದ ಎಲ್ಲ ಹೃದಯಗಳ ಭಾವನೆಗಳನ್ನು ಒಗ್ಗೂಡಿಸಿದ್ದಾಗಿದೆ’ ಎಂದು ಬಿಆರ್ಎಸ್ ಹೇಳಿದೆ.</p><p>. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ತೆಲಂಗಾಣ ರಾಜ್ಯ ಲಾಂಛನದಿಂದ ಚಾರ್ಮಿನಾರ್ ಮತ್ತು ಕಾಕತೀಯ ಕಮಾನುಗಳನ್ನು ತೆಗೆದು ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಅದರ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಪ್ರತಿಪಕ್ಷ ಬಿಆರ್ಎಸ್ ಹೇಳಿದೆ.</p><p>ಬಿಆರ್ಎಸ್ನ ಕಾರ್ಯಾಧ್ಯಕ್ಷ ಕೆ.ಟಿ. ರಾಮ ರಾವ್ ಅವರು ಪಕ್ಷದ ಇತರೆ ನಾಯಕರ ಜೊತೆ ಗುರುವಾರ ಚಾರ್ಮಿನಾರ್ ಬಳಿಗೆ ಭೇಟಿ ನೀಡಿದ್ದು, ಚಾರ್ಮಿನಾರ್ ಹೈದರಾಬಾದ್ನ ಗುರುತು ಎಂದು ಹೇಳಿದ್ದಾರೆ.</p><p>ಕಳೆದ 10 ವರ್ಷಗಳಲ್ಲಿ ಬಿಆರ್ಎಸ್ ಸರ್ಕಾರ ಮಾಡಿರುವ ಉತ್ತಮ ಕೆಲಸಗಳಿಂದ ಕೆ. ಚಂದ್ರಶೇಖರ ರಾವ್ ಅವರಿಗೆ ಹೆಸರು ಬರುವುದು ಕಾಂಗ್ರೆಸ್ ಸರ್ಕಾರಕ್ಕೆ ಬೇಕಿಲ್ಲ ಎಂದು ಅವರು ಆರೋಪಿಸಿದರು.</p><p>ಬಿಆರ್ಎಸ್ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ನಿಕೃಷ್ಟ ಎಂಬಂತೆ ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು ದೂರಿದ್ದಾರೆ.</p><p>‘ತೆಲಂಗಾಣದ ಅಧಿಕೃತ ಲಾಂಛನದಲ್ಲಿರುವ ಚಾರ್ಮಿನಾರ್ ಮತ್ತು ವಾರಂಗಲ್ನ ಪ್ರಸಿದ್ಧ ಕಾಕತೀಯ ಸಾಮ್ರಾಜ್ಯದ ಕಮಾನಿನ ಚಿತ್ರ ತೆಗೆಯಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ವಿರೋಧಿಸುತ್ತೇವೆ. ಈ ಕುರಿತಂತೆ ಬಿಆರ್ಎಸ್ ಪ್ರತಿಭಟನೆ ನಡೆಸಲಿದೆ’ ಎಂದು ಅವರು ಹೇಳಿದ್ದಾರೆ.</p><p> ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.</p><p>ತೆಲಂಗಾಣದ ಸಂಘರ್ಷ ಮತ್ತು ಬಲಿದಾನಗಳನ್ನು ಪ್ರತಿಬಿಂಬಿಸುವ ಹೊಸ ರಾಜ್ಯ ಲಾಂಛನ, ಹೊಸ ನಾಡಗೀತೆ ತಯಾರಿಗೆ ರಾಜ್ಯ ಸರ್ಕಾರ ಮುಂದಾಗುತ್ತಿದ್ದಂತೆ ಬಿಆರ್ಎಸ್ ವಿರೋಧ ವ್ಯಕ್ತಪಡಿಸಿದೆ.</p><p>ತೆಲಂಗಾಣದ ನಾಡ ಗೀತೆ ‘ಜಯ ಜಯ ಹೇ ತೆಲಂಗಾಣ’ಕ್ಕೆ ಎಂ.ಎಂ. ಕೀರವಾಣಿ ಸಂಗೀತ ಸಂಯೋಜನೆ ಮಾಡುವ ಪ್ರಸ್ತಾಪಕ್ಕೂ ಬಿಆರ್ಎಸ್ ನಾಯಕರು ವಿರೋಧಿಸಿದ್ದಾರೆ.</p><p>‘ಟಾಲಿವುಡ್ ಮತ್ತು ತೆಲಂಗಾಣ ಚಳುವಳಿ ಬೇರೆ ಬೇರೆ. ಟಾಲಿವುಡ್ ಇರುವುದು ಮನರಂಜನೆಗೆ. ಆದರೆ, ತೆಲಂಗಾಣ ನಾಡಗೀತೆಯು ಪ್ರತ್ಯೇಕ ರಾಜ್ಯ ಹೋರಾಟದ ಸಂದರ್ಭದಲ್ಲಿ ರಾಜ್ಯದ ಎಲ್ಲ ಹೃದಯಗಳ ಭಾವನೆಗಳನ್ನು ಒಗ್ಗೂಡಿಸಿದ್ದಾಗಿದೆ’ ಎಂದು ಬಿಆರ್ಎಸ್ ಹೇಳಿದೆ.</p><p>. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>