ಕಾಯ್ದೆಯನ್ನು ದೇಶದಾದ್ಯಂತ ‘ಒಂದು ವಾರದಲ್ಲಿ’ ಜಾರಿಗೆ ತರಲಾಗುತ್ತದೆ ಎಂದು ಠಾಕೂರ್ ಅವರು ಕಳೆದ ವಾರ ಹೇಳಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಜೆಪಿಯು ಚುನಾವಣೆ ಹತ್ತಿರವಾಗಿರುವ ಅವಕಾಶವನ್ನು ಬಳಸಿಕೊಂಡು ಕಾಯ್ದೆಯ ವಿಚಾರವನ್ನು ಪ್ರಸ್ತಾಪಿಸಿದೆ ಎಂದು ಇದಕ್ಕೆ ಪ್ರತಿಕ್ರಿಯಿಸಿದ್ದರು. ಅಲ್ಲದೆ, ‘ನಾನು ಬದುಕಿರುವವರೆಗೆ ರಾಜ್ಯದಲ್ಲಿ ಈ ಕಾಯ್ದೆಯ ಜಾರಿಗೆ ಅವಕಾಶ ಕೊಡುವುದಿಲ್ಲ’ ಎಂದು ಕೂಡ ಮಮತಾ ಹೇಳಿದ್ದರು.