ನವದೆಹಲಿ: ಐಸ್ರೀಂ ತಯಾರಿಕಾ ಕಂಪನಿ 'ಕ್ವಾಲಿಟಿ ಲಿಮಿಟೆಡ್' ವಿರುದ್ಧ ಸಿಬಿಐ ಸೋಮವಾರ ₹1,400 ಕೋಟಿ ಮೊತ್ತದ ವಂಚನೆ ಪ್ರಕರಣ ದಾಖಲಿಸಿದೆ.
ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟದ ಬ್ಯಾಂಕ್ಗಳಿಗೆ ಕ್ವಾಲಿಟಿ ಲಿಮಿಡೆಡ್ನಿಂದ ₹1,400 ಕೋಟಿ ಮೋಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾ ನೀಡಿರುವ ದೂರಿನ ಅನ್ವಯ ಸಿಬಿಐ ಪ್ರಕರಣ ದಾಖಲಿಸಿದೆ. ದೆಹಲಿ, ಬುಲಂದ್ಷಹರ್, ಅಜ್ಮೀರ್ ಹಾಗೂ ಪಲ್ವಾಲ್ ಸೇರಿದಂತೆ ಎಂಟು ಕಡೆ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ.
A case has been registered on a complaint from Bank of India against a Delhi-based private company (borrower) & others including its directors, & other unknown persons for causing an alleged loss of Rs 1,400.62 crore (approx.) to Bank of India & other banks: CBI pic.twitter.com/2uwssUNFCg
ಕಂಪನಿಯ ನಿರ್ದೇಶಕರಾದ ಸಂಜಯ್ ಧಿಂಗ್ರ, ಸಿದ್ಧಾಂತ್ ಗುಪ್ತ ಹಾಗೂ ಅರುಣ್ ಶ್ರೀವಾಸ್ತವ ಸೇರಿದಂತೆ ಹಲವು ಜನರ ಹೆಸರು ಸಿಬಿಐ ಪ್ರಕರಣದಲ್ಲಿ ದಾಖಲಾಗಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ತೆರಿಗೆ ಉಳಿಸಲು ನಡೆಸಿರುವ ವಹಿವಾಟುಗಳು (ಶಾಮ್ ಟ್ರ್ಯಾನ್ಯಾಕ್ಷನ್ಸ್), ಬ್ಯಾಂಕ್ ಫಂಡ್ಗಳನ್ನು ಪಲ್ಲಟಗೊಳಿಸಿರುವುದು, ದಾಖಲೆಗಳು ಮತ್ತು ರಸೀದಿಗಳನ್ನು ಸೃಷ್ಟಿಸಿರುವುದು, ತಪ್ಪು ಲೆಕ್ಕಗಳನ್ನು ನಿರೂಪಿಸುವ ಮೂಲಕ ಬ್ಯಾಂಕ್ಗಳಿಗೆ ಮೋಸ ಮಾಡಿರುವುದಾಗಿ ಕ್ವಾಲಿಟಿ ಲಿಮಿಟೆಡ್ ವಿರುದ್ಧ ಬ್ಯಾಂಕ್ ಆಫ್ ಇಂಡಿಯಾ ದೂರು ನೀಡಿದೆ.
ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದಲ್ಲಿ ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಆಂಧ್ರ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಧನಲಕ್ಷ್ಮಿ ಬ್ಯಾಂಕ್ ಹಾಗೂ ಸಿಂಡಿಕೇಟ್ ಬ್ಯಾಂಕ್ಗಳಿಗೆವೆ.