<p><strong>ನವದೆಹಲಿ:</strong> ಉಗ್ರಗಾಮಿಗಳನ್ನು ತೆರವುಗೊಳಿಸಲು ಪಂಜಾಬ್ನ ಅಮೃತ್ಸರದ ‘ಸ್ವರ್ಣ ಮಂದಿರ’ದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿದ್ದ ಅಮೂಲ್ಯವಾದ ಪರಿಕರಗಳು ಮತ್ತು ದಾಖಲೆಗಳ ಪಟ್ಟಿಯನ್ನು ತಡೆ ಹಿಡಿಯಲು ಕೇಂದ್ರ ಮಾಹಿತಿ ಆಯೋಗ, ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದೆ.</p>.<p>‘ಆಪರೇಷನ್ ಬ್ಲೂಸ್ಟಾರ್’ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೆಲವು ಸೇನಾ ಸಿಬ್ಬಂದಿ ಸೇರಿ 576 ಮಂದಿ ಮೃತಪಟ್ಟಿದ್ದರು.</p>.<p>ಕಾರ್ಯಾಚರಣೆ ವೇಳೆ ಸ್ವಾಧೀನಕ್ಕೆ ಪಡೆದ ವಸ್ತುಗಳ ಪಟ್ಟಿ, ಈಗ ಅವು ಯಾವಸ್ಥಿತಿಯಲ್ಲಿವೆ, ಕಾರ್ಯಾಚರಣೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಕಾರ್ಯಾಚರಣೆ ವೇಳೆ ಮೃತಪಟ್ಟ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಆರ್ಟಿಐ ಕಾರ್ಯಕರ್ತ ಗುರ್ವೀಂದರ್ ಸಿಂಗ್ ಛಡ್ಡಾ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>ಈ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವಾಲಯವು, ಕಾರ್ಯಾಚರಣೆಯ ನಿರ್ದಿಷ್ಟ ವಿವರಗಳನ್ನು ತಿಳಿಸಿರಲಿಲ್ಲ. ಆದರೆ, ‘ಸುಮಾರು 4000 ದಾಖಲೆಗಳು/ ಪುಸ್ತಕಗಳು/ ಕಡತಗಳು, ಚಿನ್ನಾಭರಣಗಳು, ಅಮೂಲ್ಯ ಹರಳುಗಳು, ನೋಟು, ನಾಣ್ಯಗಳು ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಈ ವಸ್ತು ಮತ್ತು ದಾಖಲೆಗಳನ್ನು ಒಂದೊ ಪಂಜಾಬ್ ಸರ್ಕಾರ ಇಲ್ಲವೇ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಗೆ (ಎಸ್ಜಿಪಿಸಿ) ಹಸ್ತಾಂತರಿಸಲಾಗಿತ್ತು’ ಎಂದು ಮಾಹಿತಿ ನೀಡಿತ್ತು.</p>.<p>1984ರ ಜೂನ್ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 493 ಭಯೋತ್ಪಾದಕರು ಮತ್ತು 83 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು ಎಂದು ಮಾಹಿತಿ ಕೊಟ್ಟಿತ್ತು.</p>.<p>ವಶಪಡಿಸಿಕೊಂಡ ವಸ್ತುಗಳ ನಿಖರ ಮಾಹಿತಿ ಸಿಗದೇ ಅಸಮಾಧಾನಗೊಂಡ ಛಡ್ಡಾ ಅವರು, ಸಚಿವಾಲಯದ ಹಿರಿಯ ಅಧಿಕಾರಿಗೆ ಮರುಮನವಿ ಸಲ್ಲಿಸಿದ್ದರು.</p>.<p>‘ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆ, ಕಾರ್ಯತಂತ್ರ‘ ದೃಷ್ಟಿಯಿಂದ ನಿರ್ದಿಷ್ಟ ಮಾಹಿತಿ ನೀಡಲು ಸಚಿವಾಲಯ ನಿರಾಕರಿಸಿತ್ತು. ಆರ್ಟಿಐ ಕಾಯ್ದೆಯ ಸೆಕ್ಷನ್ 81 (ಎ)ಯನ್ನು ಉಲ್ಲೇಖಿಸಿತ್ತು. ಈ ಕಲಮು ಸರ್ಕಾರಕ್ಕೆ ಮಾಹಿತಿ ತಡೆಹಿಡಿಯಲು ಅವಕಾಶ ಒದಗಿಸುತ್ತದೆ.</p>.<p>ನಂತರ ಅರ್ಜಿದಾರರು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿ, ‘ಕೇಂದ್ರ ಸಚಿವಾಲಯದ ಮಾಹಿತಿ ತೃಪ್ತಿದಾಯಕವಾಗಿಲ್ಲ‘ ಎಂದು ಉಲ್ಲೇಖಿಸಿದ್ದರು.</p>.<p>ಮಾಹಿತಿ ಆಯೋಗದ ಮುಂದೆ, ಗುರ್ವಿಂದರ್ ಸಿಂಗ್ ಛಡ್ಡಾ ಅವರಿಗೆ ಒದಗಿಸಿದ ಮಾಹಿತಿಯ ವಿವರ ನೀಡಿದ ಸಚಿವಾಲಯವು, ಕೆಲವು ವಿವರಗಳನ್ನು ದೇಶದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ನೀಡುವಂತಿಲ್ಲ ಎಂದು ಹೇಳಿತ್ತು.</p>.<p>ಗುರ್ವೀಂದರ್ ಅರ್ಜಿಯನ್ನು ಪರಿಶೀಲಿಸಿದ ಆಯೋಗದ ಆಯುಕ್ತ ವೈ.ಕೆ.ಸಿನ್ಹಾ, ಸಚಿವಾಲಯ ತೆಗೆದುಕೊಂಡಿರುವ ನಿರ್ಧಾರವನ್ನು ಎತ್ತಿ ಹಿಡಿದಿದ್ದು ‘ಈ ವಿಷಯದಲ್ಲಿ ಆಯೋಗದ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ‘ ಎಂದು ಸ್ಪಷ್ಟಪಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಉಗ್ರಗಾಮಿಗಳನ್ನು ತೆರವುಗೊಳಿಸಲು ಪಂಜಾಬ್ನ ಅಮೃತ್ಸರದ ‘ಸ್ವರ್ಣ ಮಂದಿರ’ದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಗಳು ವಶಪಡಿಸಿಕೊಂಡಿದ್ದ ಅಮೂಲ್ಯವಾದ ಪರಿಕರಗಳು ಮತ್ತು ದಾಖಲೆಗಳ ಪಟ್ಟಿಯನ್ನು ತಡೆ ಹಿಡಿಯಲು ಕೇಂದ್ರ ಮಾಹಿತಿ ಆಯೋಗ, ಕೇಂದ್ರ ಸರ್ಕಾರಕ್ಕೆ ಅವಕಾಶ ನೀಡಿದೆ.</p>.<p>‘ಆಪರೇಷನ್ ಬ್ಲೂಸ್ಟಾರ್’ ಹೆಸರಿನಲ್ಲಿ ನಡೆದ ಕಾರ್ಯಾಚರಣೆ ವೇಳೆ ಕೆಲವು ಸೇನಾ ಸಿಬ್ಬಂದಿ ಸೇರಿ 576 ಮಂದಿ ಮೃತಪಟ್ಟಿದ್ದರು.</p>.<p>ಕಾರ್ಯಾಚರಣೆ ವೇಳೆ ಸ್ವಾಧೀನಕ್ಕೆ ಪಡೆದ ವಸ್ತುಗಳ ಪಟ್ಟಿ, ಈಗ ಅವು ಯಾವಸ್ಥಿತಿಯಲ್ಲಿವೆ, ಕಾರ್ಯಾಚರಣೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಕಾರ್ಯಾಚರಣೆ ವೇಳೆ ಮೃತಪಟ್ಟ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಆರ್ಟಿಐ ಕಾರ್ಯಕರ್ತ ಗುರ್ವೀಂದರ್ ಸಿಂಗ್ ಛಡ್ಡಾ ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.</p>.<p>ಈ ಅರ್ಜಿಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವಾಲಯವು, ಕಾರ್ಯಾಚರಣೆಯ ನಿರ್ದಿಷ್ಟ ವಿವರಗಳನ್ನು ತಿಳಿಸಿರಲಿಲ್ಲ. ಆದರೆ, ‘ಸುಮಾರು 4000 ದಾಖಲೆಗಳು/ ಪುಸ್ತಕಗಳು/ ಕಡತಗಳು, ಚಿನ್ನಾಭರಣಗಳು, ಅಮೂಲ್ಯ ಹರಳುಗಳು, ನೋಟು, ನಾಣ್ಯಗಳು ಮುಂತಾದ ವಸ್ತುಗಳನ್ನು ವಶಪಡಿಸಿಕೊಂಡಿತ್ತು. ಈ ವಸ್ತು ಮತ್ತು ದಾಖಲೆಗಳನ್ನು ಒಂದೊ ಪಂಜಾಬ್ ಸರ್ಕಾರ ಇಲ್ಲವೇ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿಗೆ (ಎಸ್ಜಿಪಿಸಿ) ಹಸ್ತಾಂತರಿಸಲಾಗಿತ್ತು’ ಎಂದು ಮಾಹಿತಿ ನೀಡಿತ್ತು.</p>.<p>1984ರ ಜೂನ್ನಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 493 ಭಯೋತ್ಪಾದಕರು ಮತ್ತು 83 ಮಂದಿ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು ಎಂದು ಮಾಹಿತಿ ಕೊಟ್ಟಿತ್ತು.</p>.<p>ವಶಪಡಿಸಿಕೊಂಡ ವಸ್ತುಗಳ ನಿಖರ ಮಾಹಿತಿ ಸಿಗದೇ ಅಸಮಾಧಾನಗೊಂಡ ಛಡ್ಡಾ ಅವರು, ಸಚಿವಾಲಯದ ಹಿರಿಯ ಅಧಿಕಾರಿಗೆ ಮರುಮನವಿ ಸಲ್ಲಿಸಿದ್ದರು.</p>.<p>‘ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ಸಮಗ್ರತೆ, ಕಾರ್ಯತಂತ್ರ‘ ದೃಷ್ಟಿಯಿಂದ ನಿರ್ದಿಷ್ಟ ಮಾಹಿತಿ ನೀಡಲು ಸಚಿವಾಲಯ ನಿರಾಕರಿಸಿತ್ತು. ಆರ್ಟಿಐ ಕಾಯ್ದೆಯ ಸೆಕ್ಷನ್ 81 (ಎ)ಯನ್ನು ಉಲ್ಲೇಖಿಸಿತ್ತು. ಈ ಕಲಮು ಸರ್ಕಾರಕ್ಕೆ ಮಾಹಿತಿ ತಡೆಹಿಡಿಯಲು ಅವಕಾಶ ಒದಗಿಸುತ್ತದೆ.</p>.<p>ನಂತರ ಅರ್ಜಿದಾರರು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿ, ‘ಕೇಂದ್ರ ಸಚಿವಾಲಯದ ಮಾಹಿತಿ ತೃಪ್ತಿದಾಯಕವಾಗಿಲ್ಲ‘ ಎಂದು ಉಲ್ಲೇಖಿಸಿದ್ದರು.</p>.<p>ಮಾಹಿತಿ ಆಯೋಗದ ಮುಂದೆ, ಗುರ್ವಿಂದರ್ ಸಿಂಗ್ ಛಡ್ಡಾ ಅವರಿಗೆ ಒದಗಿಸಿದ ಮಾಹಿತಿಯ ವಿವರ ನೀಡಿದ ಸಚಿವಾಲಯವು, ಕೆಲವು ವಿವರಗಳನ್ನು ದೇಶದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯಿಂದ ನೀಡುವಂತಿಲ್ಲ ಎಂದು ಹೇಳಿತ್ತು.</p>.<p>ಗುರ್ವೀಂದರ್ ಅರ್ಜಿಯನ್ನು ಪರಿಶೀಲಿಸಿದ ಆಯೋಗದ ಆಯುಕ್ತ ವೈ.ಕೆ.ಸಿನ್ಹಾ, ಸಚಿವಾಲಯ ತೆಗೆದುಕೊಂಡಿರುವ ನಿರ್ಧಾರವನ್ನು ಎತ್ತಿ ಹಿಡಿದಿದ್ದು ‘ಈ ವಿಷಯದಲ್ಲಿ ಆಯೋಗದ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ‘ ಎಂದು ಸ್ಪಷ್ಟಪಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>