<p><strong>ನವದೆಹಲಿ:</strong> ಬಿ.ಆರ್. ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ 6 ತಿಂಗಳಲ್ಲಿ ದೇಶದ ವಿವಿಧ ಹೈಕೋರ್ಟ್ಗಳಿಗೆ ಪರಿಶಿಷ್ಟ ಜಾತಿ ವರ್ಗದಿಂದ 10 ಮಂದಿ ಮತ್ತು ಇತರ ಹಿಂದುಳಿದ ವರ್ಗಗಳಿಂದ 11 ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.</p>.<p>ದೇಶದ ಮೊದಲ ಬೌದ್ಧ ಮತ್ತು ಎರಡನೇ ದಲಿತ ಸಿಜೆಐ ಆಗಿರುವ ಗವಾಯಿ ಅವರು, ಸುಪ್ರೀಂ ಕೋರ್ಟ್ನ ಮೂವರು ಸದಸ್ಯರ ಕೊಲಿಜಿಯಂನ ನೇತೃತ್ವ ವಹಿಸಿದ್ದರು. ಈ ಅವಧಿಯಲ್ಲಿ ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರ್ಕಾರಕ್ಕೆ 129 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 93 ಮಂದಿ ನ್ಯಾಯಮೂರ್ತಿಗಳ ನೇಮಕಕ್ಕೆ ಅನುಮೋದನೆ ಸಿಕ್ಕಿತ್ತು.</p>.1st ರ್ಯಾಂಕ್ ಪಡೆದವರು ಲಾಯರ್ ಆದರು, 3ನೇ ರ್ಯಾಂಕ್ನ ನಾನು CJI: ನ್ಯಾ. ಗವಾಯಿ.<p>ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ, ವಿಜಯ್ ಬಿಷ್ಣೋಯಿ, ಎ.ಎಸ್. ಚಂದೂರ್ಕರ್, ಅಲೋಕ್ ಆರಾಧೆ ಮತ್ತು ವಿಪುಲ್ ಮನುಭಾಯಿ ಪಂಚೋಲಿ-ಈ ಐವರು ಗವಾಯಿ ಅವರ ಅಧಿಕಾರಾವಧಿಯಲ್ಲಿಯೇ ಸುಪ್ರೀಂ ಕೋರ್ಟ್ಗೆ ನೇಮಿಸಲಾಗಿದೆ. </p>.<p>ಮೇ 14ರಂದು ಗವಾಯಿ ಅವರು, ಮುಖ್ಯ ನ್ಯಾಯಮೂರ್ತಿಯಾದ ಬಳಿಕ ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ನ್ಯಾಯಮೂರ್ತಿಗಳ ನೇಮಕಾತಿ ವಿವರಗಳ ಪ್ರಕಾರ, ಹೈಕೋರ್ಟ್ಗೆ ಸರ್ಕಾರವು ಅನುಮೋದಿಸಿದ 93 ಹೆಸರುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ 13 ಮಂದಿ ನ್ಯಾಯಮೂರ್ತಿಗಳು ಮತ್ತು 15 ಮಹಿಳಾ ನ್ಯಾಯಮೂರ್ತಿಗಳು ಸೇರಿದ್ದಾರೆ.</p>.<p>ಈ ಪೈಕಿ ಐವರು ಮಾಜಿ ಅಥವಾ ಹಾಲಿ ನ್ಯಾಯಮೂರ್ತಿಗಳ ಸಂಬಂಧಿಗಳು. 49 ಮಂದಿ ವಕೀಲ ಸಮುದಾಯದಿಂದ ನೇಮಿಸಲಾಗಿದೆ. ಉಳಿದವರು ಸೇವೆಯಿಂದ ಪದೋನ್ನತಿ ಹೊಂದಿದವರು.</p>.<p>ಸಿಜೆಐ ಗವಾಯಿ ಅವರು ನವೆಂಬರ್ 23ರಂದು (ಭಾನುವಾರ) ನಿವೃತ್ತಿ ಹೊಂದಲಿದ್ದಾರೆ. ಶುಕ್ರವಾರ ಅವರು ತಮ್ಮ ಕೊನೆಯ ಕಲಾಪ ನಡೆಸಿದ್ದಾರೆ. ಗವಾಯಿ ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನವೆಂಬರ್ 24ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.</p>.ಸಂಪೂರ್ಣ ತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ: ವಿದಾಯದ ಕಲಾಪದಲ್ಲಿ CJI ಗವಾಯಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಬಿ.ಆರ್. ಗವಾಯಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ್ದ 6 ತಿಂಗಳಲ್ಲಿ ದೇಶದ ವಿವಿಧ ಹೈಕೋರ್ಟ್ಗಳಿಗೆ ಪರಿಶಿಷ್ಟ ಜಾತಿ ವರ್ಗದಿಂದ 10 ಮಂದಿ ಮತ್ತು ಇತರ ಹಿಂದುಳಿದ ವರ್ಗಗಳಿಂದ 11 ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿದೆ.</p>.<p>ದೇಶದ ಮೊದಲ ಬೌದ್ಧ ಮತ್ತು ಎರಡನೇ ದಲಿತ ಸಿಜೆಐ ಆಗಿರುವ ಗವಾಯಿ ಅವರು, ಸುಪ್ರೀಂ ಕೋರ್ಟ್ನ ಮೂವರು ಸದಸ್ಯರ ಕೊಲಿಜಿಯಂನ ನೇತೃತ್ವ ವಹಿಸಿದ್ದರು. ಈ ಅವಧಿಯಲ್ಲಿ ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರ್ಕಾರಕ್ಕೆ 129 ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಅದರಲ್ಲಿ 93 ಮಂದಿ ನ್ಯಾಯಮೂರ್ತಿಗಳ ನೇಮಕಕ್ಕೆ ಅನುಮೋದನೆ ಸಿಕ್ಕಿತ್ತು.</p>.1st ರ್ಯಾಂಕ್ ಪಡೆದವರು ಲಾಯರ್ ಆದರು, 3ನೇ ರ್ಯಾಂಕ್ನ ನಾನು CJI: ನ್ಯಾ. ಗವಾಯಿ.<p>ನ್ಯಾಯಮೂರ್ತಿಗಳಾದ ಎನ್.ವಿ. ಅಂಜಾರಿಯಾ, ವಿಜಯ್ ಬಿಷ್ಣೋಯಿ, ಎ.ಎಸ್. ಚಂದೂರ್ಕರ್, ಅಲೋಕ್ ಆರಾಧೆ ಮತ್ತು ವಿಪುಲ್ ಮನುಭಾಯಿ ಪಂಚೋಲಿ-ಈ ಐವರು ಗವಾಯಿ ಅವರ ಅಧಿಕಾರಾವಧಿಯಲ್ಲಿಯೇ ಸುಪ್ರೀಂ ಕೋರ್ಟ್ಗೆ ನೇಮಿಸಲಾಗಿದೆ. </p>.<p>ಮೇ 14ರಂದು ಗವಾಯಿ ಅವರು, ಮುಖ್ಯ ನ್ಯಾಯಮೂರ್ತಿಯಾದ ಬಳಿಕ ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ನ್ಯಾಯಮೂರ್ತಿಗಳ ನೇಮಕಾತಿ ವಿವರಗಳ ಪ್ರಕಾರ, ಹೈಕೋರ್ಟ್ಗೆ ಸರ್ಕಾರವು ಅನುಮೋದಿಸಿದ 93 ಹೆಸರುಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳ 13 ಮಂದಿ ನ್ಯಾಯಮೂರ್ತಿಗಳು ಮತ್ತು 15 ಮಹಿಳಾ ನ್ಯಾಯಮೂರ್ತಿಗಳು ಸೇರಿದ್ದಾರೆ.</p>.<p>ಈ ಪೈಕಿ ಐವರು ಮಾಜಿ ಅಥವಾ ಹಾಲಿ ನ್ಯಾಯಮೂರ್ತಿಗಳ ಸಂಬಂಧಿಗಳು. 49 ಮಂದಿ ವಕೀಲ ಸಮುದಾಯದಿಂದ ನೇಮಿಸಲಾಗಿದೆ. ಉಳಿದವರು ಸೇವೆಯಿಂದ ಪದೋನ್ನತಿ ಹೊಂದಿದವರು.</p>.<p>ಸಿಜೆಐ ಗವಾಯಿ ಅವರು ನವೆಂಬರ್ 23ರಂದು (ಭಾನುವಾರ) ನಿವೃತ್ತಿ ಹೊಂದಲಿದ್ದಾರೆ. ಶುಕ್ರವಾರ ಅವರು ತಮ್ಮ ಕೊನೆಯ ಕಲಾಪ ನಡೆಸಿದ್ದಾರೆ. ಗವಾಯಿ ಅವರ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನವೆಂಬರ್ 24ರಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.</p>.ಸಂಪೂರ್ಣ ತೃಪ್ತಿಯೊಂದಿಗೆ ನಿರ್ಗಮಿಸುತ್ತಿದ್ದೇನೆ: ವಿದಾಯದ ಕಲಾಪದಲ್ಲಿ CJI ಗವಾಯಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>