<p class="title"><strong>ನವದೆಹಲಿ</strong>: ಕೋವಿಡ್–19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪುರಿ ಜಗನ್ನಾಥ ರಥಯಾತ್ರೆಗೆ ನೀಡಲಾಗಿದ್ದ ತಡೆಯಾಜ್ಞೆ ಆದೇಶವನ್ನು ಪರಿಷ್ಕರಿಸಲು ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಸಮ್ಮತಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.</p>.<p class="title">ಜೂನ್ 18ರ ಆದೇಶದ ಪರಿಷ್ಕರಣೆಗೆ ಕೋರಿದ್ದ ಕೇಂದ್ರದ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ವಕೀಲರಿಗೆ ಈ ವಿವರ ನೀಡಿತು. ವಿಶ್ವದಾದ್ಯಂತ ಅಸಂಖ್ಯ ಭಕ್ತರಿರುವ ಪುರಿ ಜಗನ್ನಾಥ ಯಾತ್ರೆ ಜೂನ್ 23ರಂದು ಆರಂಭವಾಗಬೇಕಿದೆ.</p>.<p class="title">ಭಕ್ತರಿಗೆ ಭಾಗವಹಿಸಲು ಅವಕಾಶ ಕಲ್ಪಿಸದೇ ಕೆಲ ನಿಬಂಧನೆಗಳನ್ನು ವಿಧಿಸುವ ಮೂಲಕ ರಥಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಬಹುದು. ಶತಮಾನಗಳಿಂದ ಪಾಲಿಸುತ್ತಿರುವ ಸಂಪ್ರದಾಯವನ್ನು ಈಗ ಕೈಬಿಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಇದಕ್ಕೂ ಮುನ್ನ ಪೀಠದ ಮುಂದೆ ಹೇಳಿತ್ತು. ಒಡಿಶಾ ಸರ್ಕಾರ ಕೂಡಾ ಕೇಂದ್ರದ ಈ ನಿಲುವನ್ನು ಸಮರ್ಥಿಸಿತ್ತು.</p>.<p class="title">‘ಇದು ಕೋಟ್ಯಂತರ ಭಕ್ತರ ನಂಬಿಕೆಯ ಪ್ರಶ್ನೆ. ಈ ವರ್ಷ ಜಗನ್ನಾಥ ಯಾತ್ರೆ ನಡೆಯದಿದ್ದರೆ, ಮುಂದಿನ 12 ವರ್ಷ ನಡೆಯಲಾಗದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮಿತ್ರ ಅವರು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಎದುರು ಹೇಳಿದರು.</p>.<p class="title">‘ಕೆಲ ನಿರ್ಬಂಧಗಳ ಜೊತೆಗೆ ರಾಜ್ಯ ಸರ್ಕಾರವು ದಿನದ ಮಟ್ಟಿಗೆ ಕರ್ಫ್ಯೂ ಜಾರಿಗೊಳಿಸಬಹುದಾಗಿದೆ. ಪ್ರಮುಖರು ಕೈಗೊಳ್ಳುವ ತೀರ್ಮಾನದಂತೆ ಕೋವಿಡ್ ನೆಗೆಟಿವ್ ಇರುವ ಸೇವಾಯತ್ಗಳು ಪಾಲ್ಗೊಳ್ಳಬಹುದು. ದೇವಸ್ಥಾನದ ಆಡಳಿತ ಸಮಿತಿ ಮತ್ತು ಪುರಿಯ ರಾಜ ಈ ಎಲ್ಲ ಪೂಜಾ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಬಹುದು’ ಎಂದೂ ಮೆಹ್ತಾ ಪೀಠದ ಗಮನಕ್ಕೆ ತಂದರು.</p>.<p class="title"><strong>ಇದನ್ನೂ ಓದಿ</strong>:<a href="www.prajavani.net/stories/national/centre-moves-sc-seeks-nod-for-puri-rath-yatra-without-public-participation-738634.html" target="_blank">ರಥಯಾತ್ರೆಗೆ ಅವಕಾಶ ನೀಡುವಂತೆ ‘ಸುಪ್ರೀಂ’ಗೆ ಕೇಂದ್ರದ ಮನವಿ</a></p>.<p>ಜೂನ್ 18ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್, ‘ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ವರ್ಷ ರಥಯಾತ್ರೆಗೆ ಅವಕಾಶ ನೀಡಲಾಗದು. ಹಾಗೇ ಅವಕಾಶ ನೀಡಿದರೆ ಪುರಿ ಜಗನ್ನಾಥ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿತ್ತು.</p>.<p>ಇದರ ಹಿಂದೆಯೇ, ಜಗನ್ನಾಥ ಸಂಸ್ಕೃತಿ ಜನ ಜಾಗರಣ ಮಂಚ್ ಸೇರಿದಂತೆ ಹಲವರು ಆದೇಶದ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿದ್ದರು. ರಥಯಾತ್ರೆಯು 10 ರಿಂದ 12 ದಿನ ನಡೆಯಲಿದ್ದು, ಜೂನ್ 23ರಿಂದ ಜುಲೈ 1ರವರೆಗೆ ನಡೆಸಲು ನಿಗದಿಯಾಗಿತ್ತು.</p>.<p>ಅಫ್ತಾಬ್ ಹೊಸೆನ್ ಎಂಬವರು ಅರ್ಜಿ ಸಲ್ಲಿಸಿ, ‘ಸಂಪ್ರದಾಯದ ಅನುಸಾರ ಜಗನ್ನಾಥ ಯಾತ್ರೆ ನಡೆಯಬೇಕು. ಪ್ರತಿ ವರ್ಷ ಇದು ನಡೆಯಲಿದೆ. ಒಂದು ವರ್ಷ ನಿಲ್ಲಿಸಿದರೆ, ಮುಂದಿನ 12 ವರ್ಷ ಇದನ್ನು ನಡೆಸಲಾಗದು’ ಎಂದು ಪ್ರತಿಪಾದಿಸಿದ್ದರು.</p>.<p>ಯಾತ್ರೆಯ ದಿನಗಳಲ್ಲಿ ನಿತ್ಯ ಎರಡು ಬಾರಿ ಸುಮಾರು 3 ಕಿ.ಮೀ ಅಂತರದಲ್ಲಿ ಲಕ್ಷಾಂತರ ಭಕ್ತರು ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರಾ ಅವರ ಮೂರು ಬೃಹತ್ ಮರದ ರಥವನ್ನು ಎಳೆಯುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದರು.</p>.<p>ಆಡಳಿತ ಮಂಡಳಿ ಅಧ್ಯಕ್ಷರ ಜೊತೆ ಗೃಹ ಸಚಿವರ ಚರ್ಚೆ:</p>.<p>ಭುವನೇಶ್ವರ: ಪುರಿ ಜಗನ್ನಾಥ ಯಾತ್ರೆ ಕುರಿತ ಅನಿಶ್ಚಿತತೆ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಜಪತಿ ಮಹಾರಾಜ ದಿಬ್ಯಸಿಂಗ ದೇವ್ ಅವರೊಂದಿಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸೋಮವಾರ ಚರ್ಚೆ ನಡೆಸಿದರು.</p>.<p>1736ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವಾರ್ಷಿಕ ಪುರಿ ಜಗನ್ನಾಥ ಯಾತ್ರೆಯ ಸಂಪ್ರದಾಯ ಕುರಿತಂತೆ ಗೃಹ ಸಚಿವರು ಚರ್ಚಿಸಿದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀರ್ ಮೊಹಂತಿ ಹೇಳಿದರು.</p>.<p>ಪುರಿ ಜಗನ್ನಾಥ ದೇವರ ಭಕ್ತರೂ ಆದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಗೃಹ ಸಚಿವರು ಚರ್ಚಿಸಿದ್ದಾರೆ ಎಂದೂ ಮೊಹಂತಿ ಟ್ವೀಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಯಾತ್ರೆಗೆ ಹಸಿರು ನಿಶಾನೆ ತೋರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="title"><strong>ನವದೆಹಲಿ</strong>: ಕೋವಿಡ್–19 ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಪುರಿ ಜಗನ್ನಾಥ ರಥಯಾತ್ರೆಗೆ ನೀಡಲಾಗಿದ್ದ ತಡೆಯಾಜ್ಞೆ ಆದೇಶವನ್ನು ಪರಿಷ್ಕರಿಸಲು ಮೂವರು ನ್ಯಾಯಮೂರ್ತಿಗಳ ಪೀಠ ರಚಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಸಮ್ಮತಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.</p>.<p class="title">ಜೂನ್ 18ರ ಆದೇಶದ ಪರಿಷ್ಕರಣೆಗೆ ಕೋರಿದ್ದ ಕೇಂದ್ರದ ಮನವಿ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠವು ವಕೀಲರಿಗೆ ಈ ವಿವರ ನೀಡಿತು. ವಿಶ್ವದಾದ್ಯಂತ ಅಸಂಖ್ಯ ಭಕ್ತರಿರುವ ಪುರಿ ಜಗನ್ನಾಥ ಯಾತ್ರೆ ಜೂನ್ 23ರಂದು ಆರಂಭವಾಗಬೇಕಿದೆ.</p>.<p class="title">ಭಕ್ತರಿಗೆ ಭಾಗವಹಿಸಲು ಅವಕಾಶ ಕಲ್ಪಿಸದೇ ಕೆಲ ನಿಬಂಧನೆಗಳನ್ನು ವಿಧಿಸುವ ಮೂಲಕ ರಥಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಬಹುದು. ಶತಮಾನಗಳಿಂದ ಪಾಲಿಸುತ್ತಿರುವ ಸಂಪ್ರದಾಯವನ್ನು ಈಗ ಕೈಬಿಡುವುದು ಸರಿಯಲ್ಲ ಎಂದು ಕೇಂದ್ರ ಸರ್ಕಾರ ಇದಕ್ಕೂ ಮುನ್ನ ಪೀಠದ ಮುಂದೆ ಹೇಳಿತ್ತು. ಒಡಿಶಾ ಸರ್ಕಾರ ಕೂಡಾ ಕೇಂದ್ರದ ಈ ನಿಲುವನ್ನು ಸಮರ್ಥಿಸಿತ್ತು.</p>.<p class="title">‘ಇದು ಕೋಟ್ಯಂತರ ಭಕ್ತರ ನಂಬಿಕೆಯ ಪ್ರಶ್ನೆ. ಈ ವರ್ಷ ಜಗನ್ನಾಥ ಯಾತ್ರೆ ನಡೆಯದಿದ್ದರೆ, ಮುಂದಿನ 12 ವರ್ಷ ನಡೆಯಲಾಗದು’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮಿತ್ರ ಅವರು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಎದುರು ಹೇಳಿದರು.</p>.<p class="title">‘ಕೆಲ ನಿರ್ಬಂಧಗಳ ಜೊತೆಗೆ ರಾಜ್ಯ ಸರ್ಕಾರವು ದಿನದ ಮಟ್ಟಿಗೆ ಕರ್ಫ್ಯೂ ಜಾರಿಗೊಳಿಸಬಹುದಾಗಿದೆ. ಪ್ರಮುಖರು ಕೈಗೊಳ್ಳುವ ತೀರ್ಮಾನದಂತೆ ಕೋವಿಡ್ ನೆಗೆಟಿವ್ ಇರುವ ಸೇವಾಯತ್ಗಳು ಪಾಲ್ಗೊಳ್ಳಬಹುದು. ದೇವಸ್ಥಾನದ ಆಡಳಿತ ಸಮಿತಿ ಮತ್ತು ಪುರಿಯ ರಾಜ ಈ ಎಲ್ಲ ಪೂಜಾ ಸಿದ್ಧತೆಗಳ ಮೇಲ್ವಿಚಾರಣೆ ನಡೆಸಬಹುದು’ ಎಂದೂ ಮೆಹ್ತಾ ಪೀಠದ ಗಮನಕ್ಕೆ ತಂದರು.</p>.<p class="title"><strong>ಇದನ್ನೂ ಓದಿ</strong>:<a href="www.prajavani.net/stories/national/centre-moves-sc-seeks-nod-for-puri-rath-yatra-without-public-participation-738634.html" target="_blank">ರಥಯಾತ್ರೆಗೆ ಅವಕಾಶ ನೀಡುವಂತೆ ‘ಸುಪ್ರೀಂ’ಗೆ ಕೇಂದ್ರದ ಮನವಿ</a></p>.<p>ಜೂನ್ 18ರಂದು ನೀಡಿದ್ದ ಆದೇಶದಲ್ಲಿ ಸುಪ್ರೀಂ ಕೋರ್ಟ್, ‘ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ವರ್ಷ ರಥಯಾತ್ರೆಗೆ ಅವಕಾಶ ನೀಡಲಾಗದು. ಹಾಗೇ ಅವಕಾಶ ನೀಡಿದರೆ ಪುರಿ ಜಗನ್ನಾಥ ನಮ್ಮನ್ನು ಕ್ಷಮಿಸುವುದಿಲ್ಲ’ ಎಂದು ಹೇಳಿತ್ತು.</p>.<p>ಇದರ ಹಿಂದೆಯೇ, ಜಗನ್ನಾಥ ಸಂಸ್ಕೃತಿ ಜನ ಜಾಗರಣ ಮಂಚ್ ಸೇರಿದಂತೆ ಹಲವರು ಆದೇಶದ ಮಾರ್ಪಾಡು ಕೋರಿ ಅರ್ಜಿ ಸಲ್ಲಿಸಿದ್ದರು. ರಥಯಾತ್ರೆಯು 10 ರಿಂದ 12 ದಿನ ನಡೆಯಲಿದ್ದು, ಜೂನ್ 23ರಿಂದ ಜುಲೈ 1ರವರೆಗೆ ನಡೆಸಲು ನಿಗದಿಯಾಗಿತ್ತು.</p>.<p>ಅಫ್ತಾಬ್ ಹೊಸೆನ್ ಎಂಬವರು ಅರ್ಜಿ ಸಲ್ಲಿಸಿ, ‘ಸಂಪ್ರದಾಯದ ಅನುಸಾರ ಜಗನ್ನಾಥ ಯಾತ್ರೆ ನಡೆಯಬೇಕು. ಪ್ರತಿ ವರ್ಷ ಇದು ನಡೆಯಲಿದೆ. ಒಂದು ವರ್ಷ ನಿಲ್ಲಿಸಿದರೆ, ಮುಂದಿನ 12 ವರ್ಷ ಇದನ್ನು ನಡೆಸಲಾಗದು’ ಎಂದು ಪ್ರತಿಪಾದಿಸಿದ್ದರು.</p>.<p>ಯಾತ್ರೆಯ ದಿನಗಳಲ್ಲಿ ನಿತ್ಯ ಎರಡು ಬಾರಿ ಸುಮಾರು 3 ಕಿ.ಮೀ ಅಂತರದಲ್ಲಿ ಲಕ್ಷಾಂತರ ಭಕ್ತರು ಜಗನ್ನಾಥ, ಬಾಲಭದ್ರ ಮತ್ತು ದೇವಿ ಸುಭದ್ರಾ ಅವರ ಮೂರು ಬೃಹತ್ ಮರದ ರಥವನ್ನು ಎಳೆಯುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಸೇರುತ್ತಿದ್ದರು.</p>.<p>ಆಡಳಿತ ಮಂಡಳಿ ಅಧ್ಯಕ್ಷರ ಜೊತೆ ಗೃಹ ಸಚಿವರ ಚರ್ಚೆ:</p>.<p>ಭುವನೇಶ್ವರ: ಪುರಿ ಜಗನ್ನಾಥ ಯಾತ್ರೆ ಕುರಿತ ಅನಿಶ್ಚಿತತೆ ಹಿನ್ನೆಲೆಯಲ್ಲಿ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಜಪತಿ ಮಹಾರಾಜ ದಿಬ್ಯಸಿಂಗ ದೇವ್ ಅವರೊಂದಿಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಸೋಮವಾರ ಚರ್ಚೆ ನಡೆಸಿದರು.</p>.<p>1736ರಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ವಾರ್ಷಿಕ ಪುರಿ ಜಗನ್ನಾಥ ಯಾತ್ರೆಯ ಸಂಪ್ರದಾಯ ಕುರಿತಂತೆ ಗೃಹ ಸಚಿವರು ಚರ್ಚಿಸಿದರು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸಮೀರ್ ಮೊಹಂತಿ ಹೇಳಿದರು.</p>.<p>ಪುರಿ ಜಗನ್ನಾಥ ದೇವರ ಭಕ್ತರೂ ಆದ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ಗೃಹ ಸಚಿವರು ಚರ್ಚಿಸಿದ್ದಾರೆ ಎಂದೂ ಮೊಹಂತಿ ಟ್ವೀಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ಯಾತ್ರೆಗೆ ಹಸಿರು ನಿಶಾನೆ ತೋರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>