ವಿಚಲಿತರಾಗುವುದು ಬೇಡ. ನಾನೂ ವಿಚಲಿತನಾಗಿಲ್ಲ. ಇಂಥ ಘಟನೆಗಳು ನನ್ನ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲಬಿ.ಆರ್. ಗವಾಯಿ ಸಿಜೆಐ ಸುಪ್ರೀಂ ಕೋರ್ಟ್
ಸಿಜೆಐ ಅವರೊಂದಿಗೆ ಮಾತನಾಡಿದೆ. ಅವರ ಮೇಲಿನ ದಾಳಿಯು ಪ್ರತಿಯೊಬ್ಬ ಭಾರತೀಯನಿಗೂ ಸಿಟ್ಟು ತರಿಸಿದೆ. ಇಂಥ ಬೇಜವಾಬ್ದಾರಿ ಕೃತ್ಯಕ್ಕೆ ಸಮಾಜದಲ್ಲಿ ಅವಕಾಶವಿಲ್ಲನರೇಂದ್ರ ಮೋದಿ ಪ್ರಧಾನಿ
ಸಮಾಜದ ಎಲ್ಲ ಅಡೆತಡೆಗಳನ್ನು ದಾಟಿ ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ಹೆದರಿಸುವ ಅವಮಾನಿಸುವ ಯತ್ನ ಇದಾಗಿದೆ. ಕಳೆದ ದಶಕದಿಂದ ದ್ವೇಷ ಮತ್ತು ಮತಾಂಧತೆ ನಮ್ಮ ಸಮಾಜದಲ್ಲಿ ಹೇಗೆ ಆವರಿಸಿದೆ ಎಂಬುದನ್ನು ಈ ಕೃತ್ಯ ತೋರಿಸುತ್ತದೆಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ಜಾತಿವಾದಿ ಮನಃಸ್ಥಿತಿಯ ವ್ಯಕ್ತಿಯೊಬ್ಬರ ಪ್ರತಿಕ್ರಿಯೆ ಇದು. ಇದು ಸಿಜೆಐ ಮೇಲಿನ ದಾಳಿ ಅಷ್ಟೇ ಅಲ್ಲ. ಇದು ನ್ಯಾಯಾಂಗ ವ್ಯವಸ್ಥೆ ಮೇಲಿನ ದಾಳಿಇಂದಿರಾ ಜೈಸ್ವಾಲ್ ಹಿರಿಯ ವಕೀಲೆ
ಯಾಕಾಗಿ ಇಂಥ ಕೃತ್ಯ ಎಸಗಿದೆ ಎಂದು ವ್ಯಕ್ತಿಯು ನೀಡಿದ ಕಾರಣವು ನಮ್ಮ ಸಮಾಜದಲ್ಲಿ ಇಷ್ಟು ಶತಮಾನಗಳು ಕಳೆದರೂ ದಬ್ಬಾಳಿಕೆ ಮೇಲು–ಕೀಳಿನ ಮನಃಸ್ಥಿತಿಯು ಎಷ್ಟರ ಮಟ್ಟಿಗೆ ಬೇರೂರಿದೆ ಎಂಬುದನ್ನು ತೋರಿಸುತ್ತದೆಎಂ.ಕೆ. ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ
ಸುಪ್ರೀಂ ಕೋರ್ಟ್ನ ಯಾವುದೇ ನ್ಯಾಯಮೂರ್ತಿಯ ವಿರುದ್ಧ ಇಂಥ ಕೃತ್ಯ ಎಸಗುವುದು ನ್ಯಾಯಾಂಗದ ಸ್ವಾತಂತ್ರ್ಯದ ಮೇಲೆ ನಡೆಸುವ ನೇರ ದಾಳಿಯಾಗಿದೆ. ಜಾತ್ಯತೀತ ಏಕತೆ ಮತ್ತು ಭ್ರಾತೃತ್ವದ ತತ್ವಗಳನ್ನು ಸಂಘವು ಎತ್ತಿಹಿಡಿಯುತ್ತದೆಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್
ಸಿಜೆಐ ಮೇಲಿನ ದಾಳಿಯನ್ನು ಖಂಡಿಸುತ್ತೇನೆ. ಸಂಘ ಪರಿವಾರವು ಹಬ್ಬಿಸುವ ದ್ವೇಷದ ಪರಿಣಾಮವೇ ಈ ಘಟನೆಯಾಗಿದೆ. ಇದು ನಮ್ಮೆಲ್ಲರಿಗೂ ಎಚ್ಚರಿಕೆಯಾಗಬೇಕುಪಿಣರಾಯ್ ವಿಜಯನ್ ಕೇರಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.