ಕುಂಭ ಮೇಳಕ್ಕೆಪೌರಾಣಿಕ ಹಿನ್ನೆಲೆ
ಸಮುದ್ರ ಮಥನದಲ್ಲಿ ದೊರೆತ ಅಮೃತ ಕಲಶಕ್ಕಾಗಿ ದೇವತೆಗಳು ಮತ್ತು ಅಸುರರ ಮಧ್ಯೆ 12 ದಿನಗಳ ಕಾಲ (ಮಾನವನ ಲೆಕ್ಕದಲ್ಲಿ 12 ವರ್ಷ) ಘನಘೋರ ಯುದ್ಧ ನಡೆಯುತ್ತದೆ. ಯುದ್ಧ ನಡೆದಿರುವಾಗಲೇ ವಿಷ್ಣು, ‘ಅಮೃತದ ಕಲಶ’ತೆಗೆದುಕೊಂಡು ಹೋಗುವಾಗ ಅಮೃತದ ನಾಲ್ಕು ಹನಿಗಳು ಅಲಹಾಬಾದ್, ಹರಿದ್ವಾರ, ಉಜ್ಜೈನಿ ಮತ್ತು ನಾಸಿಕ್ನಲ್ಲಿ ಬಿದ್ದಿವೆ ಎನ್ನುವುದು ಪುರಾಣ, ಮಹಾಕಾವ್ಯಗಳಲ್ಲಿ ಉಲ್ಲೇಖವಾಗಿದೆ.