ಇಲ್ಲಿನ ಆಜಾದ್ ಮೈದಾನದಲ್ಲಿ ನಡೆದ ಜಮಿಯಾತ್ ಉಲೇಮಾ–ಇ–ಹಿಂದ್ನ ಮೂರು ದಿನಗಳ ಸಭೆಯ ಕೊನೆಯ ದಿನ ಮಾತನಾಡಿದ ಮದಾನಿ ಅವರು, ‘ಕರ್ನಾಟಕದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭಜರಂಗದಳ ಮತ್ತು ಇತರ ಸಂಘಟನೆಗಳ ನಿಷೇಧಿಸುವ ಕುರಿತು ನೀಡಿದ್ದ ಭರವಸೆ ಶ್ಲಾಘನೀಯ. ಈಗ ಕಾಂಗ್ರೆಸ್ಗೆ, ತಾನು ನೀಡಿದ್ದ ಚುನಾವಣಾ ಭರವಸೆಗಳನ್ನು ಈಡೇರಿಸಲು ಮತ್ತು ಮುಸ್ಲಿಮರ ಮೀಸಲಾತಿಯನ್ನು ಮರು ಸ್ಥಾಪಿಸಲು ಸಮಯ ಬಂದಿದೆ’ ಎಂದು ಹೇಳಿದರು.